ಇಂದು ‘ಕಜ್ಜ’ ತುಳು ಸಿನಿಮಾ ತೆರೆಗೆ

KannadaprabhaNewsNetwork |  
Published : Jun 11, 2026, 01:30 AM IST
ನಟ, ನಿರ್ದೇಶಕ ಸಿದ್ದಾರ್ಥ್‌ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಜಿಸ್ನು ಎಸ್ ಮೆನನ್ ಮತ್ತು ಸಿದ್ದಾರ್ಥ್ ಶೆಟ್ಟಿ ನಿರ್ದೇಶನ ವಿಶಾಂತ್ ಮಿನೆಜಸ್ ನಿರ್ಮಾಣದಲ್ಲಿ ತಯಾರಾದ ‘ಕಜ್ಜ’ ತುಳು ಸಿನಿಮಾ ಗುರುವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ, ನಟ ಸಿದ್ದಾರ್ಥ್‌ ಶೆಟ್ಟಿ ತಿಳಿಸಿದರು.

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಜಿಸ್ನು ಎಸ್ ಮೆನನ್ ಮತ್ತು ಸಿದ್ದಾರ್ಥ್ ಶೆಟ್ಟಿ ನಿರ್ದೇಶನ ವಿಶಾಂತ್ ಮಿನೆಜಸ್ ನಿರ್ಮಾಣದಲ್ಲಿ ತಯಾರಾದ ‘ಕಜ್ಜ’ ತುಳು ಸಿನಿಮಾ ಗುರುವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ, ನಟ ಸಿದ್ದಾರ್ಥ್‌ ಶೆಟ್ಟಿ ತಿಳಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಕಜ್ಜ’ ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಹಿಂದಿನ ಸಿನಿಮಾ ತುಡರ್ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕಜ್ಜ ಸಿನಿಮಾಕ್ಕೂ ನೀಡಿ ಎಂದು ನಟ ಸಿದ್ದಾರ್ಥ್‌ ತಿಳಿಸಿದರು.

ಕಜ್ಜ ಸಿನಿಮಾದಲ್ಲಿ ಸಿದ್ದಾರ್ಥ್‌ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ದೇಶನ: ಜಿಸ್ನು ಎಸ್ ಮೆನನ್ ಸಿದ್ದಾರ್ಥ್‌ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ: ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ ಅಡ್ಯನಡ್ಕ.

ಮೋಹನ್ ರಾಜ್, ಸಹನಾ ಸುಧಾಕರ್, ನಿರ್ಮಾಪಕ ವಿಶಾಂತ್ ಮಿನೆಜೆಸ್, ಗೌತಮ್ ಬಂಗೇರ, ಉದಯ ಪೂಜಾರಿ ಬಲ್ಲಾಲ್ ಬಾಗ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೆಗೆ ಬಂದು ರೈತರಿಗೆ ಹೆದರಿ ಕಾಲ್ಕಿತ್ತ ಅಧಿಕಾರಿಗಳು!
ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿ