ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಗರುಡನಗಿರಿ ರಸ್ತೆಯ ಬಾಟಲ್ ನಾಗರಾಜು ಮನೆಯ ಸಮೀಪಕ್ಕೆ ನಗರ ಪ್ರದೇಶದ ವ್ಯಾಪ್ತಿ ಮುಗಿಯಲಿದೆ. ಆದರೆ ಹಾಲಿ ಅಧ್ಯಕ್ಷರ ಕುಟುಂಬದ ಹೆಸರಿನಲ್ಲಿರುವ ೧೪ ಎಕರೆ ಜಮೀನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್ಟಿಪಿ ಪ್ಲಾಂಟ್ವರೆಗೆ ಬೀದಿ ದೀಪ ಅಳವಡಿಸಲು ಮುಂದಾಗಿರುವುದು ಖಂಡನೀಯವಾಗಿದೆ. ನಗರದಲ್ಲೇ ಹಲವು ಬಡಾವಣೆಗಳಲ್ಲಿ ಬೀದಿದೀಪವಿಲ್ಲದೇ ಕತ್ತಲೆಯಲ್ಲಿ ಜನರು ಓಡಾಡುವಂತ್ತಾಗಿದ್ದು, ಇದರ ಬಗ್ಗೆ ಗಮನಹರಿಸದಿದ್ದರೇ ಧರಣಿ ಮಾಡಲಾಗುವುದು ಎಂದು ಹೇಳಿದರು.
ಅಧ್ಯಕ್ಷರ ವಾರ್ಡ್ನಲ್ಲಿರುವ ಶಾದಿಮಹಲ್ ಮತ್ತು ಮಸೀದಿಯ ಮುಂದೆ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದರೂ ಗಮನಹರಿಸಿಲ್ಲ, ದಲಿತ ಸಮಾಜಗಳು ಇರುವ ಬಡಾವಣೆಗಳಲ್ಲಿ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ, ಹೇಮಾವತಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ, ಅಲ್ಲದೇ ಸಾಮಾನ್ಯ ಸಭೆಗಳನ್ನು ಕರೆಯುತ್ತಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗುವುದು ಎಂದರು.ನಗರಸಭೆ ಅಧ್ಯಕ್ಷ ಇಮ್ರಾನ್ಖಾನ್ ಮಾತನಾಡಿ, ೧೮ ಮತ್ತು ೧೯ನೇ ವಾರ್ಡ್ನಲ್ಲಿ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಅಲ್ಲಿ ನಿರ್ಮಾಣವಾಗಿರುವ ೧೧೫ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.
ರಮೇಶ್ ಮಾತನಾಡಿ, ೩೧ನೇ ವಾರ್ಡ್ನಲ್ಲಿ ೧೪ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣವಾದ ಸಮುದಾಯ ಭವನಕ್ಕೆ ರಾಜಕೀಯ ದುರುದ್ದೇಶದಿಂದ ವಿದ್ಯುತ್ ವ್ಯವಸ್ಥೆ ಸರಿಪಡಿಸಿಲ್ಲ, ಅಲ್ಲದೇ ನಗರೋತ್ಥಾನ ಯೋಜನೆಯ ಹಲವು ರಸ್ತೆಗಳ ಕಾಮಗಾರಿಗಳನ್ನು ಸರಿಪಡಿಸಿರುವುದಿಲ್ಲ ಎಂದು ಹೇಳಿದರು.ಫೋಟೋ:
ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಿ. ಗಿರೀಶ್.