ಕನ್ನಡಪ್ರಭ ವಾರ್ತೆ ಕೆರೂರ
ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ತಾವು ಮಾಡಿದ ಜನಪರ ಕೆಲಸಗಳನ್ನು ಮನೆಮನೆಗೆ ತಿಳಿಸುವ ಕಾರ್ಯಕ್ರಮ ಮಾಡಿದ್ದಾರೆ. ಅವರ ಸುಭದ್ರ ಭಾರತದ ಕಲ್ಪನೆಗೆ ಮತದಾರರು ಬದ್ದತೆ ತೋರಿಸುತ್ತಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಅವರ ನೇತೃತ್ವದ ಸರ್ಕಾರವೇ ರಚನೆಯಾಗುತ್ತದೆ. ನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಕಾರ್ಯಕರ್ತರು ಮನೆಮನೆಗೆ ಸಂಚರಿಸಿ ಪ್ರಚಾರ ಮಾಡುತ್ತಿದ್ದು ಕ್ಷೇತ್ರದಲ್ಲಿ ನಾನು ಹೋದೆಲ್ಲೆಲ್ಲ ಮತದಾರರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆಂದರು.
ಬಿಜೆಪಿಗೆ ನಷ್ಟವಿಲ್ಲ : ಬಾಗಲಕೋಟ ನಗರದ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮತ್ತು ಸಂತೋಷ ಹೊಕ್ರಾನಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಈಗ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ನಷ್ಟವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ದಾಸಮನಿ, ಪ.ಪಂ.ಸದಸ್ಯ ವಿಜಕುಮಾರ ಐಹೊಳ್ಳಿ, ಪರಶುರಾಮ ಮಲ್ಲಾಡದ , ಶಂಕರ ಕೆಂದೂಳ್ಳಿ ಪ್ರಮುಖರಾದ ಕಾಂತೇಶ ಬಿಜಾಪೂರ, ಅರುಣ ಕಟ್ಟಿಮನಿ, ಹನಮಂತ ಚೂರಿ, ಸದಾನಂದ ಮದಿ, ನಾಗೇಶ ಛತ್ರಬಾನ, ಶರಣು ಸಜ್ಜನ, ಅನಂತ ಚೂರಿ, ಜೋಗಿ ಸೇರಿದಂತೆ ಹಲವಾರು ಜನರು ಇದ್ದರು.