ಕನ್ನಡಪ್ರಭ ವಾರ್ತೆ ಮಡಿಕೇರಿ
ಸೋಮವಾರ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಸ್ಥಳದಲ್ಲಿ ಮಾಹಿತಿ ನೀಡಿದ ಅವರು ಈ ವ್ಯಾಪ್ತಿಯಲ್ಲಿ ಮಳೆ ಸುರಿಯುವುದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಮಳೆ ನಿಂತ ನಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ವಿವರಿಸಿದರು. ಭಾನುವಾರ ಅಳವಡಿಸಿದ್ದ ಎರಡು ಬೋನುಗಳನ್ನು ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು.
ಭಾನುವಾರ ಸಂಜೆವರೆಗೆ ಅರಣ್ಯ ಇಲಾಖೆಯ 40 ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡಗಳಿಂದ ಈ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗ್ರಾಮಸ್ಥರ ಸಲಹೆಯಂತೆ ಕಾಫಿ ತೋಟಕ್ಕೆ ಸಾಕಾನೆ ಬಳಸಿಕೊಂಡು ಕಾರ್ಯಾಚರಣೆ ಮಾಡುವುದರಿಂದ ಕಾಫಿ ಫಸಲಿಗೆ ನಷ್ಟ ಉಂಟಾಗಲಿದೆ, ಗ್ರಾಮಸ್ಥರ ಅಭಿಪ್ರಾಯದಂತೆ ಸಾಕಾನೆಗಳನ್ನು ಕಾರ್ಯಾಚರಣೆಯಿಂದ ಕೈ ಬಿಡಲಾಗಿದೆ. ಈ ಬಗ್ಗೆ ಶಾಸಕ ಎ. ಎಸ್. ಪೊನ್ನಣ್ಣ ಅವರು ಗ್ರಾಮಸ್ಥರ ಸಲಹೆಯಂತೆ ಕಾರ್ಯಾಚರಣೆ ನಡೆಸಲು ಸೂಚಿಸಿರುವುದಾಗಿ ಸಂಕೇತ್ ಪೂವಯ್ಯ ಅವರು ವಿವರಿಸಿದರು.ಗ್ರಾಮಸ್ಥರ ಸಲಹೆಯಂತೆ ಮಂಗಳವಾರ ಮತ್ತೆ ಕೆಲವು ಕಡೆಗಳಿಗೆ ಹೆಚ್ಚುವರಿ ಕ್ಯಾಮರಾ ಗಳನ್ನು ಅಳವಡಿಸಿ ಹುಲಿಯ ಚಲನವಲನವನ್ನು ಕಂಡುಹಿಡಿಯಲು ಪ್ರಯತ್ನ ನಡೆಯಲಿದೆ. ಹುಲಿ ಸುಳಿವು ಪತ್ತೆಯಾದರೆ ನಾಲ್ಕು ಬದಿಯಿಂದ ಸುತ್ತುವರೆದು ಅಗತ್ಯವಾದರೆ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ (ಆರ್.ಆರ್. ಟಿ) ಹಾಗೂ ಕಾಡಾನೆ ಕಾರ್ಯಾಚರಣೆ ತಂಡ (ಇ.ಟಿ.ಎಫ್) ಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಈಗಾಗಲೇ ಸರ್ಕಾರ ನೀಡುತ್ತಿರುವ ಜಾನುವಾರು ಪರಿಹಾರ ಸಾಕಾಗುವುದಿಲ್ಲ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರ ಮೂಲಕ ಸರ್ಕಾರದ ಗಮನಕ್ಕೆ ತರುವ ಭರವಸೆಯನ್ನು ಸಂಕೇತ್ ಪೂವಯ್ಯ ಅವರು ವ್ಯಕ್ತಪಡಿಸಿದರು.
ಈ ಸಂದರ್ಭ ಕಾರ್ಯಾಚರಣೆ ನೇತೃತ್ವ ವಹಿಸಿರುವ ತಿತಿಮತಿ ಎ.ಸಿ.ಎಫ್ ಗೋಪಾಲ್, ಪೊನ್ನಂಪೇಟೆ ಆರ್. ಎಫ್. ಓ. ಶಂಕರ್, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲಂಡ ಸೂರಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.