ಭಾರತದ ಸಂವಿಧಾನ ತತ್ವಗಳು ಜಗತ್ತಿಗೆ ಮಾದರಿ

KannadaprabhaNewsNetwork |  
Published : Jan 28, 2024, 01:17 AM IST
ಪೋಟೊ 27 ಜಿಕೆಕೆ-2ಗೋಕಾಕ: ವಿಶ್ವ ಹಿಂದೂ ಪರಿಷತ್ ಗೋಕಾಕ ನಗರ ಘಟಕದ ಅಧ್ಯಕ್ಷ ಆನಂದ ಪಾಟೀಲ ಮಾತನಾಡುತ್ತಿರುವದು.  | Kannada Prabha

ಸಾರಾಂಶ

ಭಾರತ ಪ್ರಜಾಸತ್ತಾತ್ಮಕ ಮತ್ತು ವಿವಿಧತೆಯಲ್ಲಿ ಏಕತೆ ಸಾಧಿಸುವಲ್ಲಿ ಸಂವಿಧಾನ ಅತ್ಯಂತ ಅವಶ್ಯ.

ಗೋಕಾಕ: ಡಾ. ಬಿ.ಆರ್.ಅಂಬೇಡ್ಕರ ಅವರು ಹಾಗೂ ಕರಡು ಸಮಿತಿ ನೀಡಿದ ಭಾರತದ ಸಂವಿಧಾನ ತತ್ವಗಳು ಜಗತ್ತಿಗೆ ಮಾದರಿಯಾಗಿದ್ದು, ಭಾರತದ ಪ್ರಗತಿಯಲ್ಲಿ ತುಂಬಾ ಮಹತ್ವಪೂರ್ಣ ಪಾತ್ರ ವಹಿಸಿವೆ ಎಂದು ವಿಶ್ವ ಹಿಂದು ಪರಿಷತ್ ಗೋಕಾಕ ನಗರ ಘಟಕದ ಅಧ್ಯಕ್ಷ ಆನಂದ ಪಾಟೀಲ ಹೇಳಿದರು.ಅವರು, ಗಣರಾಜ್ಯೋತ್ಸವದ ಅಂಗವಾಗಿ ನಗರದ ಶಂಕರಲಿಂಗ ಆದರ್ಶ ಶಾಲೆಯಲ್ಲಿ ಜರುಗಿದ ಆರಕ್ಷಕರಿಗೊಂದು ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಭಾರತ ಪ್ರಜಾಸತ್ತಾತ್ಮಕ ಮತ್ತು ವಿವಿಧತೆಯಲ್ಲಿ ಏಕತೆ ಸಾಧಿಸುವಲ್ಲಿ ಸಂವಿಧಾನ ಅತ್ಯಂತ ಅವಶ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಮಧುರ ಸಂಗೀತ ಬಳಗದ ಸಂಚಾಲಕ ರಾಮಚಂದ್ರ ಕಾಕಡೆ, ಭಾರತವು ವಿಶ್ವಗುರುವಾಗುವಲ್ಲಿ ಇಲ್ಲಿಯ ಏಕತೆ, ಸಹಿಷ್ಣುತೆ ಜೊತೆಗೆ ವೈಜ್ಞಾನಿಕ ಸಾಧನೆಗಳು ಪೂರಕವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾಂತೇಶ ತಾಂವಶಿ, ರಜನಿ ಜೀರಗಾಳ, ಭಾರತಿ ಮದಭಾಂವಿ, ನ್ಯಾಯವಾದಿ ಈಶ್ವರ ಶೀಗಿಹಳ್ಳಿ ಸೇರಿದಂತೆ ಹಲವರು ಇದ್ದರು. ಮಧುರ ಸಂಗೀತ ಗೆಳೆಯರ ಬಳಗದ ಕಲಾವಿದರು ನಡೆಸಿಕೊಟ್ಟ ದೇಶಭಕ್ತಿಗೀತೆಗಳು ಜನಮನ ರಂಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಗು ಹುಟ್ಟಿದರೆ ಹೊನ್ನಕ್ಕೆ ಸಮಾನ
ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆ ರಾಮಾಯಣ: ಗಂಗಾಧರ ಗೌಡ