ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಇಬ್ಬರು ಶಾಸಕರ ಜಂಟಿ ಅನುದಾನ
ಈ ಮಾರ್ಗದ ರಸ್ತೆ ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಕಾಡುಪ್ರಾಣಿಗಳ ಭಯದಲ್ಲಿ ಸವಾರರು ಸಂಚರಿಸಲು ಹಿಂದೇಟು ಹಾಕು ವಂತಾಗಿತ್ತು. ಈ ಕಾರಣದಿಂದಾಗಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಂಟಿಯಾಗಿ ಅನುದಾನ ತಂದು ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಆದರೆ ಗುತ್ತಿಗೆದಾರರು ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನೂ ಕಿತ್ತು ಜಲ್ಲಿ ಹಾಕಿ ಡಾಂಬರು ಹಾಕದೆ ಹಾಗೇ ಬಿಟ್ಟಿದ್ದಾರೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವ ಸ್ಥಿತಿ ಉಂಟಾಗಿದೆ. ಜಲ್ಲಿ ಕಲ್ಲುಗಳ ಜತೆ ಹೆಚ್ಚಿನ ಪ್ರಮಾಣದಲ್ಲಿ ದೂಳು ಏಳುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸಲು ಸರ್ಕಸ್ ಮಾಡುವಂತಾಗಿದೆ.ಗುತ್ತಿಗೆದಾರನ ನಿರ್ಲಕ್ಷ್ಯ:
ಈ ಕಾಮಗಾರಿ ಜತೆಗೆ ಬೂದಿಕೋಟೆ ಕಾಮ ಸಮುದ್ರ ಮಾರ್ಗದ ಗುಟ್ಟೂರು ಗ್ರಾಮದ ಬಳಿಗೆ ಕೆರೆಯ ಕಟ್ಟೆ ಮೇಲೆ ಡಾಂಬರಿಗೆ ಜಲ್ಲಿ ಹಾಕಲಾಗಿದೆ. ಜಲ್ಲಿ ಹಾಕಿ ಮೂಾರ್ನಾಲ್ಕು ತಿಂಗಳುಗಳೇ ಕಳೆದಿದ್ದರೂ, ಗುತ್ತಿಗೆದಾರರು ಡಾಂಬರು ಹಾಕಲು ಮುಂದಾಗಿಲ್ಲ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಪಕ್ಕದಲ್ಲೇ ಇರುವ ಕೆರೆಗೆ ಬೀಳುವ ಸಾಧ್ಯತೆ ಇದೆ. ಕೋಟ್ಯಂತರ ರು.ಗಳ ಅನುದಾನ ಬಿಡುಗಡೆ ಆಗಿದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.