ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಹಿಳಾ ಶಿಕ್ಷಣಕ್ಕಾಗಿ ಹೋರಾಟ
ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಶಿಕ್ಷಣದಿಂದ ನಿರಾಕರಿಸಲ್ಪಟ್ಟಿದ್ದ ಕಾಲಘಟ್ಟದಲ್ಲಿ ತನ್ನ ಪತಿಯಿಂದಲೇ ಅಕ್ಷರ ಕಲಿತು ನಂತರ ದೇಶದ ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ದೇಶದ ಪ್ರತಿಯೊಬ್ಬ ಮಹಿಳೆಯೂ ಮರೆಯುವಂತಿಲ್ಲ ಎಂದು ಹೇಳಿದರು.ಇಂದಿನ ಜಾಗತೀಕರಣ ಸಂದರ್ಭದಲ್ಲಿ ಕೌಟುಂಬಿಕ ಬದುಕಿನ ನಿರ್ವಹಣೆಗೆ ಹೆಣ್ಣು-ಗಂಡು ಇಬ್ಬರೂ ದುಡಿಯಬೇಕಾಗಿದೆ, ಈ ಸವಾಲಿಗೆ ಸೆಡ್ಡು ಹೊಡೆದು ನಿಂತಿರುವ ಮಹಿಳೆಯರ ಧೈರ್ಯ ಮತ್ತು ಸಾಧನೆಯ ಹಿಂದೆ ಮಾತೇ ಸಾವಿತ್ರಿಬಾಯಿ ಫುಲೆ ಕೊಡುಗೆ ಅಡಗಿದೆ ಎನ್ನುವುದನ್ನು ಯಾವ ಪುರಷನೂ ಮರೆಯಬಾರದು. ಕುಟುಂಬದಲ್ಲಿ ಮಹಿಳೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಸಂಸಾರದಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಕಾರಣದಿಂದಾಗಿ ಪುರುಷ ತನ್ನ ಜೀವನದ ನೊಗ ಎಳೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.18 ಶಾಲೆಗಳನ್ನು ಸ್ಥಾಪಿಸಿದ ಫುಲೆ
ದಸಂಸ ಹಿರಿಯ ಮುಖಂಡ ಹೂವರಸನಹಳ್ಳಿ ರಾಜಪ್ಪ, ತಾಲ್ಲೂಕು ಸಂಚಾಲಕ ಹಿರೇಕರಪನಹಳ್ಳಿ ರಾಮಪ್ಪ, ಮಹಿಳಾ ಮುಖಂಡರಾದ ಪಿ.ಮಾಲತಿ, ಸಿ.ಜೆ.ನಾಗರಾಜ್, ಕವಿತ, ಸಿದ್ದನಹಳ್ಳಿ ಯಲ್ಲಪ್ಪ, ಮಾರುತಿಪ್ರಸಾದ್, ಮದುಸೂಧನ್, ವಿಜಿಯಲಕ್ಣ್ಮಿ, ಕತ್ತಿಹಳ್ಳಿ ಪ್ರತಿಭಾ, ಸುಕನ್ಯ, ಕೋಲಾರ ಮಂಜುಳ, ಹರಟಿ ಚಂದ್ರಪ್ಪ, ಅಶ್ವಿನಿ, ಮೀನಾಕ್ಷಿ, ಎಂ.ವಿಜಯಕುಮಾರ್, ಹುಕ್ಕುಂದ ಮಂಜುನಾಥ್, ಅಸ್ಗರ್, ಪಾಲ್ರಾಜ್, ಮುತ್ತುಮಾರಿ, ಅಲ್ಲಾಬಕಾಶ್, ರಾಜಾ ಇತರರಿದ್ದರು.