ಜಿಲ್ಲೆಯಲ್ಲಿ ಹೊಸ ನಾಯಕತ್ವ ಕಟ್ಟೋಣ ಎಂದ ಶಿವಲಿಂಗೇಗೌಡ

KannadaprabhaNewsNetwork |  
Published : Aug 07, 2026, 01:45 AM IST
6ಎಚ್ಎಸ್ಎನ್11 : ಹೊಳೆನರಸೀಪುರ ತಾ. ಉಲಿವಾಲ ಗ್ರಾಮದ ಕಾಂತರಾಜು ಎಂಬ ರೈತರು ಬೆಳೆದ ಮೆಕ್ಕೆಜೋಳದ ಬೆಳೆಗೆ ಬಿಳಿಸುಳಿ ರೋಗ ತಗಲಿದ್ದ ಹಿನ್ನಲೆಯಲ್ಲಿ ರೋಗ ಪೀಡಿತ ಬೆಳೆ ಸಚಿವ ಶಿವಲಿಂಗೇಗೌಡ ಅವರು ಸಂಸದ ಶ್ರೇಯಸ್ ಎಂ.ಪಟೇಲ್ ಜತೆ ವೀಕ್ಷಿಸಿದರು. | Kannada Prabha

ಸಾರಾಂಶ

ನಾವೆಲ್ಲಾ ಸೇರಿ ಹಾಸನ ಜಿಲ್ಲೆಯಲ್ಲಿ ಹೊಸ ನಾಯಕತ್ವ ಕಟ್ಟೋಣ ಎಂದು ಕರೆ ನೀಡಿದರು. ಸಾವಿರಾರು ಹೆಕ್ಟೇರ್‌ ಜೋಳಕ್ಕೆ ರೋಗ ಬಂದಿದೆ. ರೈತರ ನೂರಾರು ಕೋಟಿ ಹಣ ನಷ್ಟ ಆಗಿದೆ. ರೈತರಿಗೆ ನಷ್ಟವನ್ನು ತುಂಬಿ ಕೊಡುವ ಕೆಲಸ ಮಾಡಬೇಕಿದೆ. ಇನ್ಸೂರೆನ್ಸ್ ಕಟ್ಟಿದವರಿಗೆ ಇನ್ನೊಂದು ತಿಂಗಳಲ್ಲಿ ಮನೆ ಬಾಗಿಲಿಗೆ ಪರಿಹಾರ ಚೆಕ್ ಕೊಡುತ್ತೇವೆ ಹಾಗೂ ಬರ ಅದ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು. ಪಟ್ಟಣಕ್ಕೆ ಆಗಮಿಸಿದ ಸಚಿವ ಶಿವಲಿಂಗೇಗೌಡರು ಹಾಗೂ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಅಭಿಮಾನಿಗಳು ಪುಷ್ಪವೃಷ್ಠಿಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಇಂದಿನಿಂದ ಜಿಲ್ಲೆಯಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗಿದೆ. ಎಲ್ಲರೂ ಧೈರ್ಯವಾಗಿ ಇರಿ, ಜಿಲ್ಲೆಯಲ್ಲಿ ಏನೇ ಅಭಿವೃದ್ಧಿ ಇದ್ದರೂ ಮಾಡೋಣ, ಶ್ರೇಯಸ್ ಪಟೇಲ್‌ಗೆ ಅದ್ಭುತ ಬೆಂಬಲ ಕೊಟ್ಟಿದ್ದೀರಿ. ಅದಕ್ಕಾಗಿ ಇಂದು ಸಂಭ್ರಮ ಮಾಡುತ್ತಿದ್ದೇವೆ. ಆದರೆ ನಮಗೆ ಸವಾಲು ಇವೆ. ಸವಾಲನ್ನು ಮೆಟ್ಟಿ ನಿಂತು ಆಡಳಿತ ಮಾಡಿ ತೋರಿಸಬೇಕಿದೆ ಹಾಗೂ ಬರದ ಪರಿಸ್ಥಿತಿಯಲ್ಲಿ ರೈತರಿಗೆ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕಿದೆ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದರು.

ಪಟ್ಟಣಕ್ಕೆ ಬುಧವಾರ ಆಗಮಿಸಿದ ಸಚಿವ ಶಿವಲಿಂಗೇಗೌಡರು ಡಾ. ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಮಹಾತ್ಮಗಾಂಧಿ ವೃತ್ತದ ತನಕ ಕರೆತಂದ ನಂತರ ಮಾತನಾಡಿದರು. ನನ್ನನ್ನು ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ಯಾವತ್ತು ಮರೆಯುವುದಿಲ್ಲ. ನಾವೆಲ್ಲಾ ಸೇರಿ ಹಾಸನ ಜಿಲ್ಲೆಯಲ್ಲಿ ಹೊಸ ನಾಯಕತ್ವ ಕಟ್ಟೋಣ ಎಂದು ಕರೆ ನೀಡಿದರು. ಸಾವಿರಾರು ಹೆಕ್ಟೇರ್‌ ಜೋಳಕ್ಕೆ ರೋಗ ಬಂದಿದೆ. ರೈತರ ನೂರಾರು ಕೋಟಿ ಹಣ ನಷ್ಟ ಆಗಿದೆ. ರೈತರಿಗೆ ನಷ್ಟವನ್ನು ತುಂಬಿ ಕೊಡುವ ಕೆಲಸ ಮಾಡಬೇಕಿದೆ. ಇನ್ಸೂರೆನ್ಸ್ ಕಟ್ಟಿದವರಿಗೆ ಇನ್ನೊಂದು ತಿಂಗಳಲ್ಲಿ ಮನೆ ಬಾಗಿಲಿಗೆ ಪರಿಹಾರ ಚೆಕ್ ಕೊಡುತ್ತೇವೆ ಹಾಗೂ ಬರ ಅದ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು. ಪಟ್ಟಣಕ್ಕೆ ಆಗಮಿಸಿದ ಸಚಿವ ಶಿವಲಿಂಗೇಗೌಡರು ಹಾಗೂ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾಯಕರ್ತರು ಬೃಹತ್ತಾದ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ, ಪುಷ್ಪವೃಷ್ಠಿಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಸಚಿವರಾದ ಶಿವಲಿಂಗೇಗೌಡರು ಬರ ಪೀಡಿತ ಹಾಗೂ ರೋಗ ಪೀಡಿದ ಬೆಳೆ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ತಹಸೀಲ್ದಾರ್‌ ವೈ. ಎಂ. ರೇಣುಕುಮಾರ್‌, ಕೃಷಿ ಅಧಿಕಾರಿ ಸಪ್ನ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆನರಾ ಸಹಯೋಗದಲ್ಲಿ ನೂರರಷ್ಟು ಗುರಿ ಸಾಧಿಸಿದ ಗ್ರಾಪಂಗಳು
ರಾಸಾಯನಿಕ ಸಿಂಪಡಣೆ ವೇಳೆ ಸುರಕ್ಷತಾ ಕ್ರಮಗಳ ಕುರಿತು ರೈತರಿಗೆ ಜಾಗೃತಿ