ತೀರ್ಪು ಸಂಕ್ಷಿಪ್ತವಾಗಿ ಅರ್ಥವಾಗುವಂತಿರಬೇಕು

KannadaprabhaNewsNetwork |  
Published : Mar 17, 2025, 12:32 AM IST
ಸಿಕೆಬಿ-4 ನಗರದ ಜಿಲ್ಲಾ ನ್ಯಾಯಾಲಯದ ಏರ್ಪಡಿಸಲಾಗಿದ್ದ ಹಿರಿಯ ವಕೀಲ ದಿವಂಗತ ಹೆಚ್.ಆರ್.ಸೀತಾರಾಂ  ಸ್ಮಾರಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ ನಿವೃತ್ತ ನ್ಯಾಯಾದೀಶ ರಾಜೇಂದ್ರಬಾಬು ಉದ್ಘಾಟಿಸಿದರು | Kannada Prabha

ಸಾರಾಂಶ

ನ್ಯಾಯಾಲಯಗಳಲ್ಲಿ ತೀರ್ಪು ನೀಡುವಾಗ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಸಂಕ್ಷಿಪಗತವಾಗಿದ್ದರೆ ಮಾತ್ರ ಎಲ್ಲರಿಗೂ ಅರ್ಥವಾಗುತ್ತದೆ. ಕನ್ನಡ ಕಲಿಕೆ ಎಲ್ಲರಿಗೂ ಬೇಕು. ಆದರೆ ದೇಶ ವಿದೇಶಗಳ ಇತಿಹಾಸ ತಿಳಿಯಬೇಕಾದರೆ ನಿಮಗೆ ಇಂಗ್ಲೀಷ್ ಜ್ಞಾನ ಬೇಕಾಗುತ್ತದೆ. ಸಾಮಾನ್ಯ ಜನರು ಮಾತನಾಡುವ ಪದಗಳಲ್ಲಿ ಇಂಗ್ಲಿಷ್ ಪದಗಳ ಬಳಕೆಯೂ ಇದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ತೀರ್ಪು ನೀಡುವಾಗ ಪುಟಗಟ್ಟಲೆ ನಮೂದು ಮಾಡುವುದಕ್ಕಿಂತ ಅದು ಕಕ್ಷಿದಾರರಿಗೆ ಅರ್ಥವಾಗುವಂತೆ ಸಂಕ್ಷಿಪ್ತವಾಗಿದ್ದರೆ ಆಗ ಸಾಮಾನ್ಯ ಜನರಿಗೂ ಅದನ್ನ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ರಾಜೇಂದ್ರ ಬಾಬು ಕರೆ ನೀಡಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಎಚ್ ಆರ್ ಎಸ್ ಫೌಂಡೇಶನ್ ಹಾಗು ಅಡ್ವೋಕೇಟ್ ಅಸೋಷಿಯೇಷನ್ ನಿಂದ ಏರ್ಪಡಿಸಿದ್ದ ಹಿರಿಯ ವಕೀಲ ದಿವಂಗತ ಹೆಚ್.ಆರ್.ಸೀತಾರಾಂ ಸ್ಮಾರಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೀರ್ಪು ಸಂಕ್ಷಿಪ್ತವಾಗಿರಬೇಕು

ನ್ಯಾಯಾಲಯಗಳಲ್ಲಿ ತೀರ್ಪು ನೀಡುವಾಗ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಸಂಕ್ಷಿಪಗತವಾಗಿದ್ದರೆ ಮಾತ್ರ ಎಲ್ಲರಿಗೂ ಅರ್ಥವಾಗುತ್ತದೆ. ಕನ್ನಡ ಕಲಿಕೆ ಎಲ್ಲರಿಗೂ ಬೇಕು. ಆದರೆ ದೇಶ ವಿದೇಶಗಳ ಇತಿಹಾಸ ತಿಳಿಯಬೇಕಾದರೆ ನಿಮಗೆ ಇಂಗ್ಲೀಷ್ ಜ್ಞಾನ ಬೇಕಾಗುತ್ತದೆ. ಹಾಗೆ ನೋಡಿದರೆ ಎನೂ ಓದದೆ ಇರುವ ಸಾಮಾನ್ಯ ಜನರು ಅಲ್ಲಲ್ಲಿ ಮಾತನಾಡುವ ಪದಗಳಲ್ಲಿ ಇಂಗ್ಲಿಷ್ ಪದಗಳ ಬಳಕೆಯೂ ಇದೆ ನೋಡಿ ಎಂದರು.ಈ ವೇಳೆ ಉಚ್ಚನ್ಯಾಯಾಲಯದ ಅಡಳಿತಾದಧಿಕಾರಿ ನ್ಯಾಯಮೂರ್ತಿ ನಾಗಾನಂದ್, ಆಕಾಶವಾಣಿ ನಿವೃತ್ತ ವಾಚಕ ಕೃಷ್ಣಕಾಂತ್, ಹೆಚ್ ಅರ್ ಎಸ್ ಪೌಂಡೇಶನ್ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್, ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹಾಗು ಉಚ್ಚನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರು ಮತ್ತು ವಕೀಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ