ಕನ್ನಡಪ್ರಭ ವಾರ್ತೆ ಕೆಜಿಎಫ್
ಕಿಂಗ್ ಜಾರ್ಜ್ ಹಾಲ್ ಉದ್ಯಾವನದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲಿ, ತಿಂಡಿ ತಿನಿಸು ತಿಂದು ಬಿಸಾಡಿರುವ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲಿ, ರಾತ್ರಿ ಕುಡಿದು ಬೆಳಿಗ್ಗೆ ೯ ರವರೆಗೆ ನಿದ್ದೆಯಿಂದ ಎದ್ದೇಳದ ಕುಡುಕರು. ನಗರದ ಕಿಂಗ್ ಜಾರ್ಜ್ ಹಾಲ್ನ ಪಾರ್ಕ್ನ ದೃಶ್ಯಗಳನ್ನು ಕಂಡು ನ್ಯಾಯಾಧೀಶರು ದಂಗಾದರು. ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾಯಾಧೀಶರು, ನಗರದ ಹೃದಯ ಭಾಗದ ಉದ್ಯಾನವೇ ಈ ರೀತಿ ಆದರೆ ನಗರದಲ್ಲಿರುವ ಇತರ ಉದ್ಯಾನವನಗಳ ಪರಿಸ್ಥಿತಿ ಹೇಗಿರಬೇಡ ಎಂದರು. ಬಳಿಕ ಖುದ್ದು ನ್ಯಾಯಾಧೀಶರೇ ಒಡೆದ ಗಾಜಿನ ಮದ್ಯದ ಬಾಟಲಿಗಳನ್ನು ಆಯುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಮೂರು ಟ್ರ್ಯಾಕ್ಟರ್ ತ್ಯಾಜ್ಯ ಸಂಗ್ರಹಕಿಂಗ್ ಜಾರ್ಜ್ ಹಾಲಿನ ಪಾರ್ಕ್ನಲ್ಲಿ ಕುಡುಕರ ಹಾವಳಿ ಎಷ್ಟರ ಮಟ್ಟಿಗೆ ಎಂಬುದಕ್ಕೆ ಮೂರು ಟ್ರ್ಯಾಕ್ಟರ್ ಬಾಟಲಿ ಮತ್ತು ತಿಂದು ಬಿಸಾಡಿರುವ ತ್ಯಾಜ್ಯವೇ ಇದಕ್ಕೆ ಉದಾಹರಣೆ, ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ನಿಷೇಧ ಮಾಡಿದ್ದರೂ ಎಗ್ಗಿಲ್ಲದೆ ಪಾರ್ಕ್ಗಳಲ್ಲಿ ಕುಡುಕರ ಹಾವಳಿ ಕಂಡು ನ್ಯಾಯಾಧೀಶರು ಗರಂ ಆದರು.