ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ವನರಂಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜಾನಪದ ಜಾತ್ರೆಗೆ ರಾಶಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾಲೇಜಿನ ಕಾಂಪೌಂಡ್ ಶಿಥಿಲಗೊಂಡಿದೆ. ದುರಸ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜಿನ ಹೆಬ್ಬಾಗಿಲನ್ನು ಈ ವರ್ಷವೇ ನಿರ್ಮಾಣ ಮಾಡಲಾಗುವುದು. ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ 3 ಲಕ್ಷ ರು.ಗಳನ್ನು ಹಿಂದಿನಂತೆ ಈ ವರ್ಷವೂ ನೀಡುತ್ತೇನೆ ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಓದಿ ಬದುಕಿನಲ್ಲಿ ಮುಂದೆ ಬರಬೇಕು. ಆಗ ಮಾತ್ರ ಕಾಲೇಜಿಗೆ ಒಳ್ಳೆಯ ಹೆಸರು ಬರಲು ಸಾಧ್ಯ. ಏ.30 ರಂದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 1 ಲಕ್ಷ ವಿದ್ಯಾರ್ಥಿಗಳು ಒಳಗೊಂಡಂತೆ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು, ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಬೇಕು ಎಂದರು.
ನಗು ಜೀವನಕ್ಕೆ ದಿವೌಷಧಿ, ವಯೋವೃದ್ಧತೆ ತಡೆಯುತ್ತದೆ, ಹೆಚ್ಚು ನಗಾಡಿ, ಅತಿಯಾಗಿ ನಗಬೇಡಿ ಅದು ಅಪಾರ್ಥವಾಗುತ್ತದೆ. ಜನಪದ ಹಾಡು ಕೇಳಿ, ಜಾತ್ರೆಯಲ್ಲಿ ತಾಪತ್ರೆಗಳನ್ನು ಮರೆಯಿರಿ. ಆನಂದಮಯದಿಂದ ಅನಂತ ಸುಖವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಕೆ.ಗುರುರಾಜ್ ಪ್ರಭು, ಕಾಲೇಜಿನ ಸಿಬ್ಬಂದಿ ದಾನೇಗೌಡ, ಗುಲ್ಲೇ ಆರಿಫ್, ಕೆ.ಪಿ.ರವಿಕಿರಣ್, ಡಾ.ಗುಲೇ ಆರಿಫಾ, ಎಸ್.ಪಿ.ಹೇಮಲತಾ, ಅನುಶ್ರೀ, ಎಸ್.ಕೌಶಲ್ಯ, ಶಿವರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.