1.12 ಕೋಟಿ ರು. ಆನ್‌ಲೈನ್‌ ಟ್ರೇಡಿಂಗ್‌ ವಂಚನೆ

KannadaprabhaNewsNetwork |  
Published : Oct 17, 2024, 12:48 AM IST
11 | Kannada Prabha

ಸಾರಾಂಶ

ದೂರುದಾರರು ಒಟ್ಟಾರೆ 1.12 ಕೋಟಿ ರು. ಗೂ ಆಧಿಕ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದು, ಸಂಪೂರ್ಣ ವಂಚನೆಗೊಳಗಾಗಿದ್ದಾರೆ. ಬಳಿಕ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಟ್ರೇಡಿಂಗ್‌ನಲ್ಲಿ ಭಾರಿ ಲಾಭ ಗಳಿಸುವ ಆಸೆಯಿಂದ ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 1,12,48,240 ರು. ವರ್ಗಾಯಿಸಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿದ್ದಾರೆ.

ಹ್ಯಾಪನ್ ಎನ್ನುವ ಡೇಟಿಂಗ್ ಆಪ್‌ನಲ್ಲಿ ಮೊದಲು ದೂರುದಾರರಿಗೆ ಲೀನಾ ಜೋಸ್ ಎಂಬವರ ಜೊತೆ ಸಂಪರ್ಕವಾಗಿದ್ದು, ಬಳಿಕ ಟೆಲಿಗ್ರಾಂ ಮೂಲಕ ಚಾಟ್ ಮಾಡತೊಡಗಿದ್ದಾರೆ. ಆಗ ಲೀನಾ ಆಡ್ಮಿರಲ್ ಮಾರ್ಕೆಟ್ ಫೋರೆಕ್ಸ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾರೆ. ಅದರಂತೆ ದೂರುದಾರರು ಅಡ್ಮಿರಲ್ ಮಾರ್ಕೆಟ್ ಫೋರೆಕ್ಸ್ ಟ್ರೇಡಿಂಗ್ ನಕಲಿ ವೇವ್‌ಜಿಪಿಟೆಕ್ಸಾ ಎಂಬ ಆಪ್ ಡೌನ್‌ಲೋಡ್ ಮಾಡಿ ಲಾಗಿನ್ ಆದ್ದಾರೆ. ಬಳಿಕ 50 ಸಾವಿರ ರು. ಮೊತ್ತವನ್ನು ನೆಫ್ಟ್ ಮೂಲಕ ವರ್ಗಾಯಿಸಿದ್ದಾರೆ.

ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಮಿಷಕ್ಕೊಳಗಾದ ದೂರುದಾರರು ಜುಲೈ 3 ರಿಂದ 23 ರ ವರೆಗೆ 10 ಲಕ್ಷ ರು. ಮೊತ್ತವನ್ನು ಆರೋಪಿಗಳು ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ನಂತರ ವೇವ್‌ಜಿಪಿಟೆಕ್ಸಾ ಆಪ್ ಖಾತೆಯಲ್ಲಿ 80 ಲಕ್ಷ ರು. ತೋರಿಸಿದೆ. ಅದನ್ನು ಹಿಂಪಡೆಯಲು ಹೋದಾಗ ಆರೋಪಿಗಳು ಶೇ. 30 ತೆರಿಗೆ ಮೊತ್ತ ಪಾವತಿಸಲು ಸೂಚಿಸಿದ್ದಾರೆ. ಅದರಂತೆ 19,26,560 ರು. ಮೊತ್ತವನ್ನು ಆರೋಪಿತರ ವಿವಿಧ ಖಾತೆಗೆ ವರ್ಗಾಯಿಸಿದ್ದಾರೆ.

ನಂತರ ಡಾಲರ್‌ನಲ್ಲಿರುವ ಮೊತ್ತವನ್ನು ಭಾರತೀಯ ರುಪಾಯಿಗೆ ವರ್ಗಾಯಿಸಲು ಬ್ಯಾಂಕ್ ವಹಿವಾಟು ಶುಲ್ಕ ಶೇ.10 ಪಾವತಿಸಲು ವಂಚಕರು ಸೂಚಿಸಿದ್ದಾರೆ. ಅದರಂತೆ ದೂರುದಾರರು 7,36,880 ರು. ವರ್ಗಾಯಿಸಿದ್ದಾರೆ. ಇಷ್ಟಾದ ಬಳಿಕವೂ 50 ಲಕ್ಷ ರು. ಮೊತ್ತ ವರ್ಗಾವಣೆ ಮಾಡಲು ಹೋದಾಗ ಆರೋಪಿಗಳು ಮತ್ತೆ ಮರುಳು ಮಾಡಿದ್ದು, ನಮ್ಮ ರಿಸ್ಕ್ ಕಂಟ್ರೋಲ್ ವಿಭಾಗದವರು ಇಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯುವುದನ್ನೇ ಹೋಲ್ಡ್ ಮಾಡಿದ್ದಾರೆ. ಹಿಂಪಡೆಯಬೇಕಾದರೆ ಶೇ.50 ರಷ್ಟನ್ನು ಠೇವಣಿ ಇರಿಸಬೇಕು ಎಂದಿದ್ದಾರೆ. ಅದರಂತೆ ಮತ್ತೆ ದೂರುದಾರರು 26,84,800 ರು. ವರ್ಗಾಯಿಸಿದ್ದಾರೆ. ಬಳಿಕ ಆರೋಪಿಗಳು ದೂರುದಾರರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ, ಅದು ಏರಿಕೆಯಾಗಬೇಕಾದರೆ ಹಣ ಹಾಕಲು ತಿಳಿಸಿದ್ದಾರೆ. ಈ ರೀತಿ ದೂರುದಾರರು ಒಟ್ಟಾರೆ 1.12 ಕೋಟಿ ರು. ಗೂ ಆಧಿಕ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದು, ಸಂಪೂರ್ಣ ವಂಚನೆಗೊಳಗಾಗಿದ್ದಾರೆ. ಬಳಿಕ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ