ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಗೆ ತಾಲೂಕಿನ ಭಕ್ತರ 11ನೇ ವರ್ಷದ ಭಕ್ತಿಯ ನಡಿಗೆಗೆ ಶುಕ್ರವಾರ ಮಧ್ಯಾಹ್ನ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಧ್ವಜ ಸ್ತಂಭ ಬಳಿ ಶ್ರದ್ಧಾ ಅಮಿತ್ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಮಧ್ಯಾಹ್ನ ಹಳೇಕೋಟೆ ಶ್ರೀ ಸತ್ಯಸಾಯಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಹಿರಿಯರಾದ ಅಡೂರು ವೆಂಕಟ್ ರಾವ್, ವಸಂತ ಸಾಲಿಯಾನ್, ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಕೆ.ಎನ್.ಜನಾರ್ದನ್, ಜನಾರ್ದನ ಎಂ., ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ರಾಜು ಪೂಜಾರಿ, ವರ್ತಕ ಸಂಘ ಅಧ್ಯಕ್ಷ ಅರವಿಂದ ಕಾರಂತ್, ಯೋಗೀಶ್ ಕುಮಾರ್ ನಡಕರ, ಡಾ.ಎಲ್.ಎಚ್.ಮಂಜುನಾಥ್, ಪೂರನ್ ವರ್ಮಾ, ಮೋಹನ ಶೆಟ್ಟಿಗಾರ್, ಅರುಣ್ ಕುಮಾರ್, ಮೋಹನಕುಮಾರ್, ಡಾ.ಸತೀಶ್ಚಂದ್ರ ಎಸ್., ಡಾ.ಬಿ. ಎ ಕುಮಾರ ಹೆಗ್ಡೆ, ಡಾ.ಎಂ.ಪಿ.ಶ್ರೀನಾಥ್, ಎಸ್.ಎನ್. ಕಾಕತ್ಕರ್, ಡಾ.ಎಂ.ಎಂ.ದಯಾಕರ್, ವಿವೇಕ್ ವಿನ್ಸನ್ಟ್ ಪಾಯಸ್, ಕಾಸಿಂ ಮಲ್ಲಿಗೆಮನೆ, ಜಯಂತ ಕೋಟ್ಯಾನ್, ರತ್ನಾಕರ ಬುನ್ನನ್, ಬಾಲಕೃಷ್ಣ ಶೆಟ್ಟಿ, ಪುಷ್ಪರಾಜ್ ಜೈನ್, ಧನಂಜಯ ರಾವ್, ಈಶ್ವರ ಭೈರ ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಹಾಗೂ ಭಕ್ತಾದಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ‘ಓಂ ನಮಃ ಶಿವಾಯ’ ನಾಮಸ್ಮರಣೆ ಹಾಗೂ ಭಜನೆ ಮಾಡುತ್ತಾ ಪಾದಯಾತ್ರೆಯಲ್ಲಿ ಜತೆಯಾಗಿ ಹೆಜ್ಜೆ ಹಾಕಿದರು. ಧರ್ಮಸ್ಥಳದಲ್ಲಿ ಪಾದಯಾತ್ರಿಗಳನ್ನು ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.