ಸಾಸಲು ಸೋಮೇಶ್ವರ ದೇಗುಲದ ಹುಂಡಿಯಲ್ಲಿ 12,16,391 ರು. ಸಂಗ್ರಹ

KannadaprabhaNewsNetwork |  
Published : Dec 01, 2024, 01:35 AM IST
30ಕೆಎಂಎನ್ ಡಿ26 | Kannada Prabha

ಸಾರಾಂಶ

ಎರಡು ದೇಗುಲಗಳಿಂದ ಒಟ್ಟು 12,16,391 ರು. ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿದೆ. ಇದರ ಜೊತೆಯಲ್ಲಿ ಬೆಳ್ಳಿಯ ನಾಗರ ಹೆಡೆ, ತೊಟ್ಟಿಲು, ಕಣ್ಣು ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಸಮರ್ಪಿಸಿದ್ದಾರೆ.

ಕಿಕ್ಕೇರಿ: ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಹುಂಡಿ ಎಣಿಕೆ ಕಾರ್ಯ ನಡೆದು 12,16,391 ರು. ಸಂಗ್ರಹವಾಗಿದೆ.

ಕಾರ್ತಿಕ ಮಾಸದ ಸೋಮವಾರದಲ್ಲಿ ಭಕ್ತರು ಹುಂಡಿಗೆ ಹಾಕಲಾಗಿದ್ದ ಎಣಿಕೆಯನ್ನು ಮುಜರಾಯಿ ಇಲಾಖೆಯ ಅಧಿಕಾರಿ, ತಹಸೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಉಪ ತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ದೇಗುಲ ಆವರಣದಲ್ಲಿ ನಡೆಸಲಾಯಿತು.

ಎರಡು ದೇಗುಲಗಳಿಂದ ಒಟ್ಟು 12,16,391 ರು. ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿದೆ. ಇದರ ಜೊತೆಯಲ್ಲಿ ಬೆಳ್ಳಿಯ ನಾಗರ ಹೆಡೆ, ತೊಟ್ಟಿಲು, ಕಣ್ಣು ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಸಮರ್ಪಿಸಿದ್ದಾರೆ.

ಈ ವರ್ಷದ ಒಟ್ಟು 4 ಕಾರ್ತಿಕ ಮಾಸದ ವಾರಗಳಿಂದ 31,84,914 ರು. ಸಂಗ್ರಹವಾಗಿದೆ. ಮುಜರಾಯಿ ಖಜಾನೆಗೆ ಅಧಿಕ ವರಮಾನ ನೀಡಿದೆ. ಒಟ್ಟು 22 ಹುಂಡಿಗಳನ್ನು ಕಂದಾಯ ಇಲಾಖೆಯವರು ಬೆಳಗ್ಗಿನಿಂದ ಸಂಜೆಯವರೆಗೆಎಣಿಕೆ ಮಾಡಿದರು. ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್‌ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾಕರಿಸಲಾಯಿತು. ರಾಜಸ್ವ ನಿರೀಕ್ಷಕ ಡಿ. ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ.ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನಿಲ್‌ ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಮುಜರಾಯಿ ಸಹಾಯಕಿ ಪೂರ್ಣಿಮಾ, ಗ್ರಾಮ ಸಹಾಯಕರು,ಬ್ಯಾಂಕ್‌ಆಫ್‌ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ