ಜಿಲ್ಲೆಯಲ್ಲಿ ೧೩.೧೦ ಲಕ್ಷ ಮತದಾರರು: ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾಹಿತಿ

KannadaprabhaNewsNetwork | Published : Jan 25, 2024 2:02 AM

ಸಾರಾಂಶ

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ೬,೬೬,೭೪೫ ಪುರುಷ, ೬,೪೩,೬೪೫ ಮಹಿಳಾ ಹಾಗೂ ೪೧ ಜನ ತೃತೀಯ ಲಿಂಗಿಗಳು ಸೇರಿ ೧೩,೧೦,೪೧೩ ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ೬,೬೬,೭೪೫ ಪುರುಷ, ೬,೪೩,೬೪೫ ಮಹಿಳಾ ಹಾಗೂ ೪೧ ಜನ ತೃತೀಯ ಲಿಂಗಿಗಳು ಸೇರಿ ೧೩,೧೦,೪೧೩ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪, ಅರ್ಹತಾ ದಿನಾಂಕ ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಹಸೀಲ್ದಾರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ವೆಬ್‌ಸೈಟ್ https://ceo.karnataka.gov.inನಲ್ಲಿಯು ಸಹ ತಮ್ಮ ಹೆಸರನ್ನು ನೋಡಬಹುದು ಎಂದು ಅವರು ತಿಳಿಸಿದ್ದಾರೆ.

೧೩.೧೦ ಲಕ್ಷ ಮತದಾರರು:

ಜಿಲ್ಲೆಯಲ್ಲಿ ಜ.೨೨ರ ಅಂತಿಮ ಮತದಾರರ ಪಟ್ಟಿ ಅನುಸಾರ ೬,೬೬,೭೪೫ ಪುರುಷ, ೬,೪೩,೬೪೫ ಮಹಿಳಾ ಹಾಗೂ ೪೧ ಜನ ತೃತೀಯ ಲಿಂಗಿಗಳು ಸೇರಿ ೧೩,೧೦,೪೧೩ ಮತದಾರರಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ೧,೦೮,೯೫೬ ಪುರುಷ, ೧,೦೪,೩೩೬ ಮಹಿಳಾ ಹಾಗೂ ೬ ಜನ ತೃತೀಯ ಲಿಂಗಿಗಳು ಸೇರಿ ೨,೧೩,೨೯೮ ಮತದಾರರು, ಶಿಗ್ಗಾಂವಿ ಕ್ಷೇತ್ರದಲ್ಲಿ ೧,೧೮,೦೨೪ ಪುರುಷ, ೧,೧೨,೦೩೧ ಮಹಿಳಾ ಹಾಗೂ ೮ ಜನ ತೃತೀಯ ಲಿಂಗಿಗಳು ಸೇರಿ ೨,೩೦,೦೬೩ ಮತದಾರರು, ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ ೧,೧೯,೭೨೪ ಪುರುಷ, ೧,೧೫,೧೦೭ ಮಹಿಳಾ ಹಾಗೂ ೯ ಜನ ತೃತೀಯ ಲಿಂಗಿಗಳು ಸೇರಿ ೨,೩೪,೮೪೦ ಮತದಾರರಿದ್ದಾರೆ.

ಬ್ಯಾಡಗಿ ಕ್ಷೇತ್ರದಲ್ಲಿ ೧,೦೬,೫೧೨ಪುರುಷ, ೧,೦೩,೫೩೬ ಮಹಿಳಾ ಹಾಗೂ ೩ ಜನ ತೃತೀಯ ಲಿಂಗಿಗಳು ಸೇರಿ ೨,೧೦,೦೫೧ ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ ೯೪,೮೫೬ ಪುರುಷ, ೯೧,೩೭೭ ಮಹಿಳಾ ಹಾಗೂ ೪ ಜನ ತೃತೀಯ ಲಿಂಗಿಗಳು ಸೇರಿ ಮತದಾರರು ೧,೮೬,೨೩೭ ಮತದಾರರು ಹಾಗೂ ರಾಣಿಬೆನ್ನೂರ ಕ್ಷೇತ್ರದಲ್ಲಿ ೧,೧೮,೬೭೩ ಪುರುಷ, ೧,೧೭,೨೪೦ ಮಹಿಳಾ ಹಾಗೂ ೧೧ ಜನ ತೃತೀಯ ಲಿಂಗಿಗಳು ಸೇರಿ ೨,೩೫,೯೨೪ ಮತದಾರರಿದ್ದಾರೆ.

ಜಿಲ್ಲೆಯಲ್ಲಿ ೧೮ ರಿಂದ ೧೯ ವರ್ಷದೊಳಗಿನ ೩೬,೯೫೬ ಮತದಾರರು, ೮೮೦ ಸೇವಾ ಹಾಗೂ ೨೨,೦೨೮ ವಿಕಲಚೇತನ ಮತದಾರರಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೬೦೨ ಮತದಾರರು, ೮೩ ಸೇವಾ ಹಾಗೂ ೩,೭೦೦ ವಿಕಲಚೇತನ ಮತದಾರರಿದ್ದಾರೆ. ಶಿಗ್ಗಾಂವ ಕ್ಚೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೩೧೧ ಮತದಾರರು, ೧೪೪ ಸೇವಾ ಹಾಗೂ ೪,೫೦೯ ವಿಕಲಚೇತನ ಮತದಾರರಿದ್ದಾರೆ.

ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ ೧೮ರಿಂದ ೧೯ ವರ್ಷದೊಳಗಿನ ೫,೮೭೦ ಮತದಾರರು, ೨೦೯ ಸೇವಾ ಹಾಗೂ ೩,೧೧೯ ವಿಕಲಚೇತನ ಮತದಾರರಿದ್ದಾರೆ. ಬ್ಯಾಡಗಿ ಕ್ಷೇತ್ರದಲ್ಲಿ ೧೮ರಿಂದ ೧೯ ವರ್ಷದೊಳಗಿನ ೫,೭೪೨ ಮತದಾರರು, ೧೬೯ ಸೇವಾ ಹಾಗೂ ೪,೭೯೯ ವಿಕಲಚೇತನ ಮತದಾರರಿದ್ದಾರೆ.

ಹಿರೇಕೆರೂರು ಕ್ಷೇತ್ರದಲ್ಲಿ ೧೮ರಿಂದ ೧೯ ವರ್ಷದೊಳಗಿನ ೫,೬೯೯ ಮತದಾರರು, ೧೦೫ ಸೇವಾ ಹಾಗೂ ೩,೨೦೨ ವಿಕಲಚೇತನ ಮತದಾರರಿದ್ದಾರೆ ಹಾಗೂ ರಾಣಿಬೆನ್ನೂರ ಕ್ಷೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೭೪೧ ಮತದಾರರು, ೧೭೦ ಸೇವಾ ಹಾಗೂ ೨,೭೦೨ ವಿಕಲಚೇತನ ಮತದಾರರಿದ್ದಾರೆ.

೧೪೮೨ ಮತಗಟ್ಟೆ:

ಜಿಲ್ಲೆಯಲ್ಲಿ ೧,೪೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೮೨-ಹಾನಗಲ್ ಕ್ಷೇತ್ರದಲ್ಲಿ ೨೪೩, ೮೩-ಶಿಗ್ಗಾಂವಿ ಕ್ಷೇತ್ರದಲ್ಲಿ ೨೪೧, ೮೪-ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ ೨೬೧, ೮೫-ಬ್ಯಾಡಗಿ ಕ್ಷೇತ್ರದಲ್ಲಿ ೨೪೨, ೮೬-ಹಿರೇಕೆರೂರು ಕ್ಷೇತ್ರದಲ್ಲಿ ೨೨೯ ಹಾಗೂ ೮೭ ರಾಣಿಬೆನ್ನೂರ ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ:

ಅಂತಿಮ ಮತದಾರರ ಪಟ್ಟಿ ಪ್ರಕಟ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಅಂತಿಮ ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆಗಳಲ್ಲಿ ಜ.೨೨ರಂದು ಪ್ರಕಟಿಸಲಾಗಿದೆ. ಈ ಮತದಾರರ ಪಟ್ಟಿಯಲ್ಲಿ ಹೆಸರುಗಳ ತಿದ್ದುಪಡಿ, ಸೇರ್ಪಡೆ ಸೇರಿದಂತೆ ಪರಿಶೀಲಿಸಲು ಹಾಗೂ ಈ ಕುರಿತಂತೆ ಜಾಗೃತಿ ಮೂಡಿಸಲು ತಿಳಿಸಿದರು.

ರಾಜಕೀಯ ಪಕ್ಷವಾರು ಬೂತ್ ಮಟ್ಟದ ಏಜೆಂಟರುಗಳ ಪಟ್ಟಿ ನೀಡಬೇಕು. ಬೂತ್ ಮಟ್ಟದ ಅಧಿಕಾರಿಗಳ ಸಂಪರ್ಕ ಮಾಡಿ ವಾರ್ಡ್‌ವಾರು ಮತಗಟ್ಟೆ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಬೇಕು. ಹೆಸರುಗಳ ತಿದ್ದುಪಡಿ, ಮಾರ್ಪಾಡುಗಳಿದ್ದರೆ ಮಾಹಿತಿ ನೀಡಬೇಕು. ಈ ಕುರಿತಂತೆ ಸಾರ್ವಜನಿಕರಿಗೆ ಅರಿವು ಮತ್ತು ತಿಳುವಳಿಕೆ ನೀಡಲು ತಿಳಿಸಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ೧೪೮೨ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಹಾಗೂ ಪ್ರತಿ ೧೦ ಮತಗಟ್ಟೆಗೆ ಓರ್ವ ಮೇಲ್ವಿಚಾರಕರನ್ನು ಮತದಾರರ ಪಟ್ಟಿ ತಯಾರಿಕೆಗೆ ನಿಯೋಜನೆ ಮಾಡಿ ಕ್ರಮಕೈಗೊಳ್ಳಲಾಗಿದೆ ಎಂದರು.

ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ ವಿ.ಎಚ್.ಎ (ವೋಟರ್ ಹೆಲ್ಪ್ಲೈನ್ ಆಪ್) ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ, ಇಲ್ಲದಿರುವವ ಬಗ್ಗೆ ಪರಿಶೀಲಿಸಿಕೊಳ್ಳಲು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡಿಮೆಗೊಳಿಸಲು, ತಿದ್ದುಪಡಿ ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಮಾಡಿಕೊಳ್ಳಲು ಹಾಗೂ ತಮ್ಮ ಹೆಸರು ಅರ್ಹತಾ ದಿನಾಂಕ ೦೧-೦೪-೨೦೨೪ಕ್ಕೆ ೧೮ ವರ್ಷ ಪೂರ್ಣಗೊಂಡಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ತಿದ್ದುಪಡಿ, ವರ್ಗಾವಣೆ ಅಥವಾ ಹೆಸರು ಇಲ್ಲದಿರುವುದು ಅಥವಾ ತಮ್ಮ ಕುಟುಂಬದ ಸದಸ್ಯರು ಮರಣಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಮುಂದುವರೆದಿದ್ದರೆ ಕೈಬಿಡುವ ಕುರಿತಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಬಿಜೆಪಿ, ಕಾಂಗ್ರೆಸ್, ಜನತಾದಳ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article