163 ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

KannadaprabhaNewsNetwork |  
Published : May 14, 2026, 03:30 AM IST
VV | Kannada Prabha

ಸಾರಾಂಶ

ನಗರದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 163 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 163 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ಈ ವರ್ಷದ ಸ್ನಾತಕೋತ್ತರ ಪದವಿಗಳಲ್ಲಿ ಶೇ.94 ರಷ್ಟು ಮಂದಿ ಉತ್ತೀರ್ಣರಾಗಿದ್ದು, 116 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 3 ಚಿನ್ನದ ಪದಕ ಪಡೆದಿದ್ದಾರೆ. ಇದರೊಂದಿಗೆ 10 ಉನ್ನತ ವಿಶ್ವವಿದ್ಯಾಲಯ ಶ್ರೇಯಾಂಕಗಳಲ್ಲಿ ಸೇಂಟ್‌ ಜಾನ್ಸ್‌ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಸೂಪರ್ ಸ್ಪೆಷಾಲಿಟಿ ಮತ್ತು ಡಿಎನ್‌ಬಿ ಸೂಪರ್-ಸ್ಪೆಷಾಲಿಟಿ ವಿದ್ಯಾರ್ಥಿಗಳಲ್ಲಿ ಉತ್ತೀರ್ಣ ದರವು ಶೇ.100 ಆಗಿದ್ದು, 44 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು 5 ಚಿನ್ನದ ಪದಕಗಳೊಂದಿಗೆ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.

ಡಾ. ಉದತಾ ಪ್ರಣವಿ (ಫ್ಯಾಮಿಲಿ ಮೆಡಿಸಿನ್), ಡಾ. ಹನಿ ಮೋಲ್ (ರೋಗಶಾಸ್ತ್ರ), ಡಾ. ಅನಿತಾ ಶಾಜಿ (ದೈಹಿಕ ಔಷಧ ಮತ್ತು ಪುನರ್ವಸತಿ) ರಾಜ್ಯ ವಿಶ್ವವಿದ್ಯಾಲಯದ ಚಿನ್ನದ ಪದಕ ಮತ್ತು ಮೊದಲ ಸ್ಥಾನ ಪಡೆದರು. ಡಾ. ರೂಬಿ ಅಲೆಯಮ್ಮ ರಾಯ್ (ಫ್ಯಾಮಿಲಿ ಮೆಡಿಸಿನ್) ಮತ್ತು ಡಾ. ಸ್ವಾತಿ ಎನ್ (ಟ್ರಾನ್ಸ್‌ಫ್ಯೂಷನ್ ಮೆಡಿಸಿನ್) 2ನೇ ಸ್ಥಾನ ಪಡೆದರು ಮತ್ತು ಡಾ. ಪ್ರಜ್ಞಾ ಸೂದ್ (ಸಮುದಾಯ ಔಷಧ) ಕರ್ನಾಟಕದಲ್ಲಿ 5 ನೇ ಸ್ಥಾನ ಪಡೆದಿದ್ದಾರೆ. ಡಿಎಂ ಮತ್ತು ಎಂಸಿಎಚ್ ಕೋರ್ಸ್‌ಗಳಲ್ಲಿ, ಡಾ. ಸಂಜನ್ ರೈ.ಕೆ (ಅಂತಃಸ್ರಾವಶಾಸ್ತ್ರ), ಡಾ. ಹೃದಯ (ಗ್ಯಾಸ್ಟ್ರೋಎಂಟರಾಲಜಿ), ಡಾ. ಚಿಂತನಾ ಎಲ್ (ನವಜಾತ ವೈದ್ಯಶಾಸ್ತ್ರ) ಮತ್ತು ಡಾ. ಶ್ವೇತಾ ಸಿ ನಾಯರ್ (ಪಲ್ಮನರಿ ಮೆಡಿಸಿನ್) ರಾಜ್ಯ ವಿಶ್ವವಿದ್ಯಾಲಯದ ಚಿನ್ನದ ಪದಕ ಮತ್ತು ಮೊದಲ ಸ್ಥಾನ, ಡಾ. ಚೈತನ್ಯ ಎಚ್ ಬಾಲಕೃಷ್ಣ (ಹೆಮಟಾಲಜಿ) ಪ್ರತಿಷ್ಠಿತ ಡಿಎನ್‌ಬಿ ರಾಷ್ಟ್ರೀಯ ಚಿನ್ನದ ಪದಕವನ್ನು ಪಡೆದಿದ್ದಾರೆ ಎಂದು ತಿಳಿಸಲಾಗಿದೆ.

ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ನಿರ್ದೇಶಕ ಡಾ. ಉದಯ್ ಜಾರ್ಜ್ ಜಕಾರಿಯಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ನಿರ್ದೇಶಕ ರೆವರೆಂಡ್ ಫಾದರ್ ಜೇಸುದಾಸ್ ರಾಜಮಾಣಿಕಂ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನೈತಿಕ ಸಂಬಂಧ ಮುಚ್ಚಿಕೊಳ್ಳಲುಸುಳ್ಳು ವಂಚನೆಯ ಕಥೆ ಕಟ್ಟಿದ ಪತಿ
ಹಿಟ್ ಆ್ಯಂಡ್‌ ರನ್‌ಗೆ ಕಾರ್ಮಿಕ, ಕಾರುಡಿಕ್ಕಿಯಾಗಿ ಬೈಕ್‌ ಚಾಲಕ ದುರ್ಮರಣ