ಹುಬ್ಬಳ್ಳಿ: ಇಲ್ಲಿನ ಸದ್ಗುರು ಸಿದ್ದಾರೂಢಸ್ವಾಮಿ ಅವರ 190ನೇ ಜಯಂತ್ಯುತ್ಸವ, ಶ್ರೀ ಗುರುನಾಥರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮ ಫೆ. 19ರಿಂದ 26ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಹೇಳಿದರು.
ಫೆ. 19ರಂದು ಬೆಳಗ್ಗೆ 9ಕ್ಕೆ ಗಣೇಶಪೇಟೆ ಜಡಿಸಿದ್ದೇಶ್ವರ ಮಠದಿಂದ ಆರಂಭಗೊಳ್ಳುವ ಮೆರವಣಿಗೆ 1008 ಕುಂಭಮೇಳ, 1008 ಆರತಿ, 10 ಸಾವಿರ ಜನರು ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ತಲೆಯ ಮೇಲೆ ಹೊತ್ತು ಓಂ ನಮಃ ಶಿವಾಯ ಪಠಣದೊಂದಿಗೆ ವಿವಿಧ ವಾಧ್ಯಮೇಳದೊಂದಿಗೆ ಸಾಗುವರು. ಆನೆ ಅಂಬಾರಿ ಮೇಲೆ ಸಿದ್ಧಾರೂಢರು, ಗುರುನಾಥರೂಢರ ಭವ್ಯ ಮೂರ್ತಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಂಜೆ 5ಕ್ಕೆ ಶ್ರೀಮಠಕ್ಕೆ ಆಗಮಿಸಲಿದೆ ಎಂದರು.
ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮವಿಶ್ವವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಮಾತನಾಡಿ, ಫೆ. 20ರಿಂದ 26ರ ವರೆಗೆ ಶ್ರೀಮಠದ ಆವರಣದಲ್ಲಿ ವಿಶ್ವ ಶಾಂತಿಗಾಗಿ ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಗ್ಗೆ 9.30ಕ್ಕೆ ಹರಿದ್ವಾರದ ಬಾಬಾ ರಾಮದೇವ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಶಿವಾನಂದ ಭಾರತಿ ಶ್ರೀಗಳು, ಬಸವರಾಜ ದೇಶಿಕೇಂದ್ರ ಶ್ರೀಗಳು, ಡಾ. ಶಿವಕುಮಾರ ಶ್ರೀಗಳು, ಡಾ. ಷಡಕ್ಷರಿ ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ಇನ್ನೂ ಹಲವಾರು ಮಠಾಧೀಶರು ಸಾನ್ನಿಧ್ಯ ವಹಿಸುವರು.
ಅನುಭಾವಮೃತ
ಫೆ. 21ರಂದು ಬೆಳಗ್ಗೆ 9ಕ್ಕೆ ಈಶಾವಾಸ್ಯಮಿದಂ ಸರ್ವಂ, ಸಂಜೆ 6.30 ಕ್ಕೆ ಚಿಂತಸದಿರು ಸುಖದುಃಖದೆಡೆಯೊಳು, ಫೆ. 22ರಂದು ಬೆಳಗ್ಗೆ 9 ಕ್ಕೆ ಯೋಗಕ್ಷೇಮಂ ವಹಾಮ್ಯಹಮ್, ಸಂಜೆ 6.30ಕ್ಕೆ ದುರಿತ ಕರ್ಮವನೊಲ್ಲದಿರು ಪುಣ್ಯವನೆಮಾಡು, ಫೆ. 23ರಂದು ಬೆಳಗ್ಗೆ 9ಕ್ಕೆ ಚತುರ್ವಿಧಾ ಭಜಂತೆ ಮಾ ಜನಾಃ, ಸಂಜೆ 6.30ಕ್ಕೆ ಕ್ಷಣಮಪಿ ಸಜ್ಜನ ಸಂಗತಿರೇಖಾ, ಫೆ. 24ರಂದು ಬೆಳಗ್ಗೆ 9ಕ್ಕೆ ಬ್ರಹ್ಮಸತ್ಯಂ ಜಗನ್ಮಿಥ್ಯಾ, ಸಂಜೆ 6.30ಕ್ಕೆ ವಿಮಲ ಮಾನಸದಿಂದೆ ಶುಭತೀರ್ಥಮುಂಟೆ, 25ರಂದು ಬೆಳಗ್ಗೆ 9ಕ್ಕೆ ಯದ್ಯದಾಚರತಿ ಶ್ರೇಷ್ಠಃ, ಸಂಜೆ 6.30ಕ್ಕೆ ತದ್ವಿದ್ಧಿ ಪ್ರಣಿಪಾತೇನ, ಫೆ. 26ರಂದು 9ಕ್ಕೆ ನಾಸತೋ ವಿದ್ಯತೇ ಭಾವಃ, ಸಂಜೆ 6.30ಕ್ಕೆ ಸ್ಥಿತಪ್ರಜ್ಞ ಶ್ರೀ ಸಿದ್ಧಾರೂಢರು ಕುರಿತು ಅನುಭಾವಮೃತ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚನ್ನವೀರಪ್ಪ ಮುಂಗರವಾಡಿ, ವಸಂತ ಸಾಲಗಟ್ಟಿ, ಗೀತಾ ಕಲ್ಬುರ್ಗಿ ಸೇರಿದಂತೆ ಹಲವರಿದ್ದರು.27ರಂದು ಸಿದ್ಧಾರೂಢರ ಮಠದ ಅದ್ಧೂರಿ ರಥೋತ್ಸವ
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಶಿವರಾತ್ರಿ ಮಹೋತ್ಸವ ಫೆ. 21ರಿಂದಲೇ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗಲಿದೆ. ಪ್ರತಿನಿತ್ಯ ಬೆಳಗ್ಗೆ 7.45ಕ್ಕೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪಧ್ರುಮ ಪುರಾಣ ಪಠಣ, ಬೆಳಗ್ಗೆ 9ಕ್ಕೆ ಮಹಾತ್ಮರು, ಪಂಡಿತರಿಂದ ವೇದಾಂತ ಉಪನ್ಯಾಸಗಳು ಜರುಗಲಿವೆ. ಸಂಜೆ 5 ಗಂಟೆಗೆ ಕೀರ್ತನೆ, ಮಹಾಪೂಜೆ ನಡೆಯಲಿದೆ.