ಬಿಬಿಎಂಪಿ ವ್ಯಾಪ್ತಿಯಲ್ಲಿ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ : ಮುನೀಶ್ ಮೌದ್ಗಿಲ್

KannadaprabhaNewsNetwork |  
Published : Mar 21, 2025, 12:30 AM ISTUpdated : Mar 21, 2025, 09:02 AM IST
ಪಾಲಿಕೆ  | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಸರಾಸರಿ 2 ದಿನದಲ್ಲಿ ಅಂತಿಮ ಇ-ಖಾತಾ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಸರಾಸರಿ 2 ದಿನದಲ್ಲಿ ಅಂತಿಮ ಇ-ಖಾತಾ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ 2.71 ಲಕ್ಷ ಅಂತಿಮ ಇ-ಖಾತಾ ವಿತರಣೆ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಈವರೆಗೆ 2.87 ಲಕ್ಷ ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 2,71,927 ಅಂತಿಮ ಇ-ಖಾತಾ ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ 2 ದಿನಗಳಲ್ಲಿ ಸರಾಸರಿ ಅಂತಿಮ ಇ-ಖಾತ ನೀಡಲಾಗುತ್ತಿದ್ದು, ನಾಗರಿಕರು ತಕ್ಷಣ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ.

https://BBMPeAasthi.karnataka.gov.in ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಕೂಡಲೇ ಅಂತಿಮ ಇ-ಖಾತಾಗಾಗಿ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕೇಸ್ ವರ್ಕರ್‌ಗಳು ನಾಗರಿಕರು ಇ-ಖಾತಾಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಕೂಡಲೆ ಅಂತಿಮ ಇ-ಖಾತಾ ಸಿಗುವ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇ-ಖಾತಾ ಪಡೆಯಲು ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡದೆ, ಯಾವುದೇ ಕಚೇರಿಗಳಿಗೆ ತೆರಳದೆ ಸಹಾಯ ಮಾಡಲು ಪಾಲಿಕೆಯ ಕಂದಾಯ ವಿಭಾಗದೊಂದಿಗೆ ಕೈಜೋಡಿಸಬೇಕು. ಇ-ಖಾತಾ ಅರ್ಜಿಗಳ ವಿಲೆವಾರಿಗೆ ಸಂಬಂಧಿಸಿದಂತೆ ಎಲ್ಲಾ 8 ವಲಯಗಳು ಮತ್ತು ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳ ಜತೆಗೆ ಪ್ರತಿ ದಿನ ವರ್ಚ್ಯುವಲ್ ಮೂಲಕ ಸಭೆ ನಡೆಸಿ, ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲಿಸಲಾಗುತ್ತಿದ್ದು, ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿದರು.

ಅಂತಿಮ ಇ-ಖಾತಾ ವಿತರಣೆ ವಿವರ

ವಲಯಅಂತಿಮ ಇ-ಖಾತಾ ಸಂಖ್ಯೆ

ಮಹದೇವಪುರ37,793

ದಕ್ಷಿಣ37,738

ಪಶ್ಚಿಮ27,020

ಬೊಮ್ಮನಹಳ್ಳಿ46,025

ದಾಸರಹಳ್ಳಿ16,818

ಪೂರ್ವ25,848

ಯಲಹಂಕ38,494

ಆರ್‌ಆರ್‌ ನಗರ42,191

ಒಟ್ಟು2,71,927

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ