ಬಿ.ರಾಮಪ್ರಸಾದ್ ಗಾಂಧಿ
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್) ನಿಂದ ಕೈಗೊಂಡ 21 ಶಾಲಾ ಕೊಠಡಿಗಳ ಕಾಮಗಾರಿ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಂಟಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ತಲಾ ₹10.6 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಕೆಆರ್ಐಡಿಎಲ್ಗೆ ವಹಿಸಲಾಗಿತ್ತು.ಕಣವಿಹಳ್ಳಿಯಲ್ಲಿ 6, ಶೃಂಗಾರತೋಟ- 3, ಬಾಗಳಿ -3, ಹೊಂಬಳಗಟ್ಟಿ -3, ತಾವರಗೊಂದಿ -1, ನಿಚ್ಚವನಹಳ್ಳಿ -1, ದುಗ್ಗಾವತ್ತಿ -2, ಅಣಮೇಗಳತಾಂಡಾ-1, ಹೊನ್ನೇನಹಳ್ಳಿ -1 ಹೀಗೆ 21 ಶಾಲಾ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ.
ಇದರಿಂದ ಪೋಷಕರು, ಶಿಕ್ಷಕರು, ಜನಪ್ರತಿನಿಧಿಗಳು ಬೇಸತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ತ್ವರಿತ ಕಾಮಗಾರಿ ಪೂರ್ಣಗೊಳಿಸಿ ಎಂದು ಒತ್ತಾಯಿಸುತ್ತಿದ್ದರೂ ಕೆಆರ್ಐಡಿಎಲ್ ನವರು ಗಮನ ಕೊಡುತ್ತಿಲ್ಲ.
ಸ್ಥಳಾಂತರಕ್ಕೆ ಚಿಂತನೆ
ಈ ಹಿಂದೆ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ ಹೊಸಪೇಟೆಗೆ ಸ್ಥಳಾಂತರಗೊಂಡಿತ್ತು, ಕೆಆರ್ಐಡಿಎಲ್ ಸಹ ಸ್ಥಳಾಂತರ ಗೊಂಡರೆ ಪುನಃ ಇಲ್ಲಿಗೆ ಮಂಜೂರಾತಿ ಆಗುವುದು ಕಷ್ಟದ ಕೆಲಸ. ಆದ್ದರಿಂದ ಈಗ ಅಪೂರ್ಣಗೊಂಡಿರುವ ಶಾಲಾ ಕೊಠಡಿಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಹೊಸ ಕಾಮಗಾರಿಯನ್ನು ಪಡೆದು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಂಡರೆ ಹರಪನಹಳ್ಳಿಗೂ ಕ್ಷೇಮ, ಅಧಿಕಾರಿ ವರ್ಗಕ್ಕೂ ಕ್ಷೇಮ. ಆದ್ದರಿಂದ, ಕೆಆರ್ಐಡಿಎಲ್ ಅಧಿಕಾರಿಗಳು ಈ ಕುರಿತು ತ್ವರಿತವಾಗಿ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಅನುದಾನ ಕೊರತೆ
ಪಿ. ದಾವೂದ್ ಭಾಷಾ, ಪ್ರಭಾರಿ ಎಇಇ, ಕೆಆರ್ ಐಡಿಎಲ್, ಹರಪನಹಳ್ಳಿ ಪೂರ್ಣಗೊಳಿಸಲಿ
ಬಸವರಾಜ ಸಂಗಪ್ಪನವರ, ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ , ಹರಪನಹಳ್ಳಿ