ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಎಲ್.ವೇಲಾ, ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸೇರಿದಂತೆ ವಿವಿಧ ನ್ಯಾಯಾಧೀಶರ ಸಮಕ್ಷಮ 23 ಜೋಡಿ ಮುನಿಸು ಮರೆತು, ಒಂದಾಗಿ ಬಾಳಲು ಒಪ್ಪಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಗರ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಲೋಕ್ ಅದಾಲತ್ ನಡೆಯಿತು. ಅದರಂತೆ ದಾವಣಗೆರೆಯಲ್ಲಿ ನಡೆದ ಲೋಕ್ ಅದಾಲತ್ನಲ್ಲಿ 23 ಜೋಡಿಗಳು ವಿಚ್ಛೇದನ ಕೈ ಬಿಟ್ಟು, ಪರಸ್ಪರ ಹಾರ ಹಾಕಿ, ಸಿಹಿ ತಿನ್ನಿಸುವ ಸಂಸಾರ ನೊಗ ಹೊತ್ತರು.ನ್ಯಾಯಾಧೀಶರಾದ ಡಿ.ಕೆ.ವೇಲಾ ಮಾತನಾಡಿ, ಲೋಕ್ ಅದಾಲತ್ನಲ್ಲಿ ಎಲ್ಲ ರೀತಿ ಪ್ರಕರಣ ರಾಜಿ ಮೂಲಕ ಪರಿಹರಿಸಲಾ ಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 9,360 ಜಾರಿ ಪ್ರಕರಣಗಳು ಮುಕ್ತಾಯಗೊಂಡು, 14,33,66,571 ಹಣದ ಪರಿಹಾರ ಆಗಿದೆ. 2,62,721 ವ್ಯಾಜ್ಯಪೂರ್ವ ಪ್ರಕರಣ ಮುಕ್ತಾಯಗೊಂಡು ₹72,62,10,788 ಹಣ ಪರಿಹಾರವಾಗಿ ರಾಜಿ ಮೂಲಕ ಮುಕ್ತಾಯವಾಗಿದೆ. 23 ಜೋಡಿಗಳು ವಿಚ್ಛೇದನ ಬದಲು ಪುನಃ ಒಂದಾಗಿದ್ದು ವಿಶೇಷವಾಗಿದ್ದರೆ, ಜಮೀನು ವ್ಯಾಜ್ಯವೊಂದು 2013ರಿಂದಲೂ ನಡೆದಿದ್ದು, ಅಮೆರಿಕಾದಲ್ಲಿದ್ದ ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದು ಮತ್ತೊಂದು ವಿಶೇಷ. ರಾಜಿ ಮೂಲಕ ಪ್ರಕರಣ ಇತ್ಯರ್ಥದಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.
- - -
-12ಕೆಡಿವಿಜಿ9: ಲೋಕ್ ಅದಾಲತ್ನಲ್ಲಿ ಮುನಿಸು ಮರೆದು ಒಂದಾದ 23 ಜೋಡಿಗಳು, ಇತ್ಯರ್ಥಗೊಂಡ ಪ್ರಕರಣಗಳ ಬಗ್ಗೆ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಎಲ್.ವೇಲಾ ಮಾಹಿತಿ ನೀಡಿದರು.