27, 28 ರಂದು ಕುಂಚಿಟಿಗರ ಭಾವೈಕ್ಯತಾ ಪ್ರವಾಸ

KannadaprabhaNewsNetwork |  
Published : Jul 26, 2024, 01:39 AM IST
ಚಿತ್ರ 1 | Kannada Prabha

ಸಾರಾಂಶ

27th and 28 th kunchutigas tour

ಹಿರಿಯೂರು: ಮಲೆನಾಡು ಕರಾವಳಿ ಕುಂಚಿಟಿಗರ ಭಾವೈಕ್ಯತಾ ಪ್ರವಾಸ 27 ಮತ್ತು 28 ರಂದು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದಿಂದ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬಯಲುಸೀಮೆ ಮಲೆನಾಡು ಕರಾವಳಿ ಕುಂಚಿಟಿಗರ ಸಂಗಮ ಭಾವೈಕ್ಯತಾ ಪ್ರವಾಸ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

27 ರಂದು ಬೆಳಗಿನ ಜಾವ 4 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಪ್ರವಾಸಕ್ಕೆ ಚಾಲನೆ ನೀಡಿ, ನಂತರ ಶಾಂತಿಸಾಗರ, ನೀಲೋಗಲ್, ಗುಡ್ಡದಕೋಮಾರನಹಳ್ಳಿ, ಗೊಲ್ಲರಹಳ್ಳಿ, ಮಾಸಡಿ, ನರಸಗೊಂಡನಹಳ್ಳಿ, ಸುಂಕದಕಟ್ಟೆ, ಕುಂಕುವ, ಸೂರಗೊಂಡನಕೊಪ್ಪ, ಗಾಮ, ಶಿಕಾರಿಪುರ ತಲುಪಿ ಅಲ್ಲಿಯೇ ತಂಗುವರು.

ನಂತರ 28 ರಂದು ಬೆಳಿಗ್ಗೆ 5 ಗಂಟೆಗೆ ಪ್ರಾರಂಭ ಮಾಡಿ ಕುಬಟೂರು, ಜಡೆ, ಆಣಜಿ, ಶಿರಸಿ, ದಾಸನಕೊಪ್ಪ, ಲಕ್ಷ್ಮಿಪುರ, ರಂಗಾಪುರ, ಹಾನಗಲ್, ಅಕ್ಕಿಆಲೂರು, ಗ್ರಾಮದಲ್ಲಿ ಪ್ರವಾಸ ಮುಕ್ತಾಯ ಮಾಡಿ ಹಿರಿಯೂರಿಗೆ ವಾಪಾಸ್ ಬರಲಾಗುವುದು ಎಂದರು.

ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಮಾತನಾಡಿ, ಈ ವರ್ಷದಲ್ಲಿ ಬಯಲುಸೀಮೆ ಹಾಗೂ ಮಲೆನಾಡು ಕರಾವಳಿ ಕುಂಚಿಟಿಗರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಹುಲುಗಲಕುಂಟೆ ಶಶಿಕಲಾ ಮುಂತಾದವರು ಉಪಸ್ಥಿತರಿದ್ಧರು.

-----

ಫೋಟೊ: ಚಿತ್ರ 1 ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಲೆನಾಡು ಕರಾವಳಿ ಕುಂಚಿಟಿಗರ ಸಂಗಮ ಭಾವೈಕ್ಯತಾ ಪ್ರವಾಸ ಕುರಿತಂತೆ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು