ಕನ್ನಡಪ್ರಭ ವಾರ್ತೆ ಶಿರಾ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದ ಬಿಡಾಡಿ ಹಸುಗಳನ್ನು ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಲವು ತಿಂಗಳ ಹಿಂದೆ ಬಿಡಲಾಗಿತ್ತು. ಅದರಲ್ಲಿ ೩ ರಿಂದ ೫ ಹಸುಗಳು ಇದ್ದವು, ಅದರಲ್ಲಿ ೨ ಸತ್ತು ಹೋಗಿವೆ, ಉಳಿದ ೨ ಹಸುಗಳು ತಿಂಗಳಿನಿಂದ ಕಣ್ಮರೆಯಾಗಿವೆ. ನಮಗೆ ಬಂದ ಮಾಹಿತಿಯಂತೆ ಅಧಿಕಾರಿಗಳು ಅವುಗಳನ್ನು ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಅಂಜಿನಪ್ಪ ಹಾಗೂ ರಂಗರಾಜು ಒತ್ತಾಯಿಸಿದರು. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಪೂಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಅಂಜಿನಪ್ಪ ಹಾಗೂ ರಂಗರಾಜು ಮಾತನಾಡುತ್ತ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸುಗಳು ಸಗಣಿ ಇಟ್ಟು ಗಲೀಜು ಮಾಡುತ್ತಿದ್ದ ಕಾರಣ ಗೇಟ್ ತೆಗೆದು ಅವುಗಳನ್ನು ಹೊರಗೆ ಹೊಡೆಯಲಾಗಿದೆ ಎಂದು ಆರೋಗ್ಯ ನಿರೀಕ್ಷಕ ಮಾರೇಗೌಡ ಹೇಳಿದಾಗ, ಆಕ್ರೋಶ ಗೊಂಡ ಸದಸ್ಯರು ಮೂರು ವರ್ಷದಿಂದ ಗಲೀಜು ಮಾಡದ ಹಸುಗಳು ಈಗ ಗಲೀಜು ಮಾಡುತ್ತಿವೆಯೇ? ನೀವು ಯಾರಿಗೆ ಮಾರಾಟ ಮಾಡಿದ್ದೀರಿ ಎನ್ನುವುದು ನಮ್ಮ ಬಳಿ ಮಾಹಿತಿ ಇದೆ ಎಂದಾಗ ಪೌರಾಯುಕ್ತರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಸರ್ವೆ ನಂತರ ಹೊಸ ನಿಲ್ದಾಣ:
ಅಧ್ಯಕ್ಷರ ಕ್ಷಮೆ ಕೇಳಿದ ಪೌರಾಯುಕ್ತರು:
ಶಿರಾ ೩೦ನೇ ವಾರ್ಡಿನ ವಿದ್ಯಾನಗರದಲ್ಲಿ ಶಾಸಕರ ಅನುದಾನದಲ್ಲಿ ಕುವೆಂಪು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗಿದ್ದು, ಈ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಹಾಕಲಾಗಿದ್ದ ಪ್ರಚಾರ ಫಲಕದಲ್ಲಿ ನಗರಸಭೆ ಅಧ್ಯಕ್ಷರ ಪೊಟೋವನ್ನು ಕೆಲವು ಸದಸ್ಯರ ಒತ್ತಾಯದ ಮೇರೆಗೆ ಪೌರಾಯುಕ್ತರು ತೆಗೆಸಿದ್ದಾರೆ. ಇದು ಶಿರಾ ನಗರದ ೩೧ ನಗರಸಭಾ ಸದಸ್ಯರಿಗೆ ಮಾಡಿದ ಅವಮಾನವಾಗಿದೆ. ಇದಕ್ಕೆ ಪೌರಾಯುಕ್ತರು ಕ್ಷಮೆ ಕೇಳಲೇ ಬೇಕು ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಆಗ್ರಹಿಸಿದಾಗ ಇದಕ್ಕೆ ಮಣಿದ ಪೌರಾಯುಕ್ತ ರುದ್ರೇಶ್ ಕ್ಷಮೆ ಕೇಳಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಅಧ್ಯಕ್ಷತೆ ವಹಿಸಿದ್ದರು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ.ಶಿವಶಂಕರಪ್ಪ, ಪೌರಾಯುಕ್ತ ರುದ್ರೇಶ್ ಸೇರಿದಂತೆ ನಗರಸಭಾ ಸದಸ್ಯರು ಭಾಗವಹಿಸಿದ್ದರು.