ಭೀಮಸಮುದ್ರ ಕೆರೆ ಒಡಲೊಳಗೆ ಭದ್ರೆಯ ಝಳು ಝುಳು ನಿನಾದ । ಆಸುಪಾಸಿನ ಅನ್ನದಾತರ ಮನದಲ್ಲಿ ತುಂಬಿದ ಹರ್ಷ
ಕನ್ನಡಪ್ರಭ ವಾರ್ತೆ ಸಿರಿಗೆರೆ
ದುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲಿದುಂಬಿಯ ಹಾಡಿನ ಝೇಂಕಾರದಲ್ಲಿ ……. …..
ಬೃಹದಾಕಾರವಾದ ಪೈಪುಗಳಲ್ಲಿ ಚೀರು ಚಿಮ್ಮಿ ಕೆರೆಯ ಒಡಲು ಸೇರುತ್ತಿರುವುದನ್ನು ನೋಡುವುದೇ ಒಂದು ಸಂಭ್ರಮ, ಸೋಜಿಗ. ನೀರು ಚಿಮ್ಮುತ್ತಿದ್ದಂತೆ ಕೆರೆಯ ಅಂಗಳದದಲ್ಲಿ ಸಾಲುಗಟ್ಟಿ ಜನರು ಹರ್ಷೋದ್ಗಾರಗಳಿಂದ ನೀರನ್ನು ಬರಮಾಡಿಕೊಂಡಿದ್ದಾರೆ. ಭದ್ರೆಯ ನೀರು ತಿಂಗಳಾನುಕಾಲ ಹೀಗೆ ಹರಿದು ಬಂದರೆ ಭೀಮಸಮುದ್ರದ ಕೆರೆ ಸಮುದ್ರದೋಪಾದಿಯಲ್ಲಿ ನೋಡುಗರ ಕಣ್ಮನ ಸೆಳೆಯುತ್ತದೆ.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಈ ಭಾಗದ ಜನರಿಗೆ ವರದಾನವಾಗಿದೆ. ವಿಶೇಷವಾಗಿ ಭೀಮಸಮುದ್ರದ ಆಸುಪಾಸಿನ ಜನರು ಭದ್ರೆಯ ನೀರು ತಮ್ಮೂರಿನ ಐತಿಹಾಸಿಕ ಕೆರೆಗೆ ಹರಿದು ಬಂದು ಪಾತಾಳ ಸೇರಿದ್ದ ಅಂತರ್ಜಲಕ್ಕೆ ಮರು ಹುಟ್ಟು ಕೊಟ್ಟಿದ್ದಕ್ಕೆ ಕೃತಜ್ಞತೆಯ ಭಾವವನ್ನು ತೋರಿದ್ದಾರೆ. ಸಾವಿರಾರು ಎಕರೆ ವಿಸ್ತೀರ್ಣದ ಅಡಿಕೆ ತೋಟಗಳಿಗೆ ಇದರಿಂದ ಜೀವಸೆಲೆ ಸಿಕ್ಕಂತಾಗಿದೆ.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿಯ ಭದ್ರಾ ನದಿಯಿಂದ 1.692 ಟಿಎಂಸಿ ನೀರನ್ನು ಬಳಸಿಕೊಂಡು ಚಿತ್ರದುರ್ಗ, ದಾವಣಗೆರೆ ಹಾಗೂ ಶಿಮೊಗ್ಗ ಜಿಲ್ಲೆಗಳ ವ್ಯಾಪ್ತಿಯ ಒಟ್ಟು 121 ಕೆರೆಗಳನ್ನು ತುಂಬಿಸುವ ಬಹುದೊಡ್ಡ ಯೋಜನೆ ಇದು. ಯೋಜನೆಯ ವ್ಯಾಪ್ತಿಗೆ 116 ಗ್ರಾಮಗಳು ಸೇರ್ಪಡೆಯಾಗಿವೆ. ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಕೆರೆಗಳಿಗೂ ಸಮರ್ಪಕವಾಗಿ ನೀರು ಒದಗಿಸಲು ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ, ಚನ್ನಗಿರಿ ತಾಲ್ಲೂಕಿನ ಚನ್ನಕೇಶವಪುರ, ಜಕ್ಕಲಿ (ಸೂಳೆಕೆರೆ ಸಮೀಪ) ಹಾಗೂ ಮುತ್ತುಗದೂರು ಗ್ರಾಮದ ಕೆರೆಗಳಲ್ಲಿ ಜಾಕ್ವೆಲ್ಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಸ್ವೆಹಳ್ಳಿಯಿಂದ ಮುತ್ತುಗದೂರು ಕೆರೆಗೆ ಬಂದು ಸಂಗ್ರಹವಾಗುವ ನೀರು ಅಲ್ಲಿಂದ ಮುಂದೆ ಹತ್ತಾರು ಹಳ್ಳಿಗಳ ಕೆರೆಗಳನ್ನು ತುಂಬಿಸುತ್ತಲೇ ಭೀಮಸಮುದ್ರ ತಲುಪುತ್ತದೆ.
ಇಂತಹದೊಂದು ಯೋಜನೆ ಸರ್ಕಾರದ ಮಟ್ಟದಲ್ಲಿ ಸಾಕಾರ ರೂಪ ಪಡೆಯಲು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿದ ಪಾತ್ರ ಎಲ್ಲರ ಕೃತಜ್ಞತೆಗೆ ಪಾತ್ರವಾಗಿದೆ. ಬರದ ನಾಡಿನ ಜನರ ಬದುಕಿನ ಸಂಕಟಗಳನ್ನು ಅರಿತ ಶ್ರೀಗಳವರು ಉಬ್ರಾಣಿ ಏತ ನೀರಾವರಿ, ಜಗಳೂರು ಏತ ನೀರಾವಿ ಹಾಗೂ ಭರಮಸಾಗರ ಏತ ನೀರಾವರಿಯಂತಹ ಬಹುಕೋಟಿ ವೆಚ್ಚದ ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿ ಅವೆಲ್ಲವೂ ಅವರದೇ ಕಣ್ಗಾವಲಿನಲ್ಲಿ ರೂಪುಗೊಳ್ಳುವಂತೆ ಮಾಡಿದರು. ಯೋಜನೆ ಮಂಜೂರಾಗುತ್ತಲೆ ಜನಪ್ರತಿನಿಧಿಗಳು, ಅಧಿಕಾರಿಗಳು, ತಾಂತ್ರಿಕ ತಜ್ಞರ ತಂಡದೊಂದಿಗೆ ನಿತ್ಯವೂ ಚರ್ಚಿಸುತ್ತಾ ರೈತಸಮುದಾಯಕ್ಕೆ ನೆರವಾಗುವ ಚಿಂತನೆಗೆ ಇಳಿದ ಫಲ ಇಂದು ಕೈಗೂಡಿ ಜನರ ಬದುಕಿಗೆ ಈಗ ಆಸರೆಯಾಗಿದೆ.
ಕೋಟ್-1
ಮಹೇಶ್ವರಪ್ಪ
ಕೃಷಿಕರು ಹಾಗೂ ನೀರಾವರಿ ಹೋರಾಟ ಸಮಿತಿ ಸದಸ್ಯರು, ಭೀಮಸಮುದ್ರ.ಕೋಟ್-2ಸರ್ಕಾರ ಮತ್ತು ಜಿಲ್ಲಾಡಳಿತ ಜನರ ಬದುಕಿಗೆ ಆಸರೆಯಾಗಿ ನಿಲ್ಲದೇ ಇದ್ದ ಕಾಲದಲ್ಲಿ ರೈತರ ಕೈಹಿಡಿದದ್ದು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. ನೂರಾರು ಮಠಗಳಿಗೆ, ಆದರೆ ಸಿರಿಗೆರೆಯ ಮಠ ರೈತರ ಅಭ್ಯುದಯವೇ ತನ್ನ ಕೆಲಸವೆಂದು ಭಾವಿಸಿದೆ. ಈಗ ಜನರಿಗಷ್ಟೇ ಅಲ್ಲ, ಪ್ರಾಣಿಪಕ್ಷಿಗಳಿಗೂ ನೀರು ಸಿಕ್ಕು, ಅವೂ ಕೂಡ ಗರಿಬಿಚ್ಚಿ ಹಾರಾಡುವಂತಾಗಿದೆ.
ವೇದಮೂರ್ತಿಪರಿಸರಪ್ರೇಮಿ, ಭೀಮಸಮುದ್ರ.