ಹಂಪಿ ಸ್ಮಾರಕಗಳಿಗೆ ಭೇಟಿ ನೀಡಿದ 35 ಅಂಧ ವಿದ್ಯಾರ್ಥಿಗಳು

KannadaprabhaNewsNetwork |  
Published : Jun 02, 2025, 12:14 AM IST
1ಎಚ್‌ಪಿಟಿ4- ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸ್ನೇಹ ದೀಪಾ ಸಂಸ್ಥೆ ಹಾಗು ಜ್ಞಾನ ಲಹರಿ ಸಂಸ್ಥೆಯ ಅಂಧ ವಿದ್ಯಾರ್ಥಿಗಳು ಹಂಪಿ ಸ್ಮಾರಕಗಳಿಗೆ ಭೇಟಿ ನೀಡಿದರು. | Kannada Prabha

ಸಾರಾಂಶ

ಹಂಪಿ ಸ್ಮಾರಕಗಳು ಜಗದ್ವಿಖ್ಯಾತವಾಗಿವೆ. ಈ ಸ್ಮಾರಕಗಳಿಗೆ 35 ಅಂಧ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಕೂಡ ಪಡೆದುಕೊಂಡು ಖುಷಿಪಟ್ಟರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿ ಸ್ಮಾರಕಗಳು ಜಗದ್ವಿಖ್ಯಾತವಾಗಿವೆ. ಈ ಸ್ಮಾರಕಗಳಿಗೆ 35 ಅಂಧ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಕೂಡ ಪಡೆದುಕೊಂಡು ಖುಷಿಪಟ್ಟರು.

ಹಂಪಿ ಸ್ಮಾರಕಗಳನ್ನು ನೋಡಲು ಕಣ್ಣು ಇಲ್ಲದಿದ್ದರೂ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಈ ಸ್ಮಾರಕಗಳ ಬಗ್ಗೆ ಅರಿತುಕೊಳ್ಳಲು ಖುದ್ದು ಭೇಟಿ ನೀಡಿದರು. ಕೆಲ ಕಡೆ ಸ್ಮಾರಕಗಳನ್ನು ಮುಟ್ಟಿ ಖುಷಿಗೊಂಡರು. ಹಂಪಿ ಸ್ಮಾರಕಗಳನ್ನು ಮುಟ್ಟಲು ನಿರ್ಬಂಧ ಇರುವ ಹಿನ್ನೆಲೆ ಬಹುತೇಕ ಕಡೆ ಪ್ರವಾಸಿ ಮಾರ್ಗದರ್ಶಿಗಳಿಂದ ಈ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸ್ನೇಹ ದೀಪಾ ಸಂಸ್ಥೆ ಹಾಗೂ ಜ್ಞಾನ ಲಹರಿ ಸಂಸ್ಥೆಯ ಈ ವಿದ್ಯಾರ್ಥಿಗಳು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ರಥ ಬೀದಿ ಸಾಲು ಮಂಟಪಗಳು, ಸಾಸಿವೆ ಕಾಳು, ಕಡಲೆ ಕಾಳು ಗಣಪತಿ ಮಂಟಪ, ಹಜಾರ ರಾಮ ದೇವಾಲಯ, ರಾಜ ಸಭಾಂಗಣ ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಖುಷಿಯಾದರು. ಈ ತಂಡದ ಜೊತೆಗೆ ತರಬೇತುದಾರ ಶಿಕ್ಷಕರಾದ ದೀಕ್ಷಾ, ಅಚ್ಯುತ್‌ ನಾಯ್ಕ ಕೂಡ ಇದ್ದರು. ಇನ್ನೂ ಮಾಜಿ ತರಬೇತುದಾರ ಮಾರುತಿ ಸೇರಿದಂತೆ ಐದಾರು ಸ್ವಯಂ ಸೇವಕರು ಈ ಅಂಧ ವಿದ್ಯಾರ್ಥಿಗಳಿಗೆ ಸಾಥ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ