355ನೇ ಆರಾಧನಾ ಮಹೋತ್ಸವ ಆರಂಭ

KannadaprabhaNewsNetwork |  
Published : Aug 28, 2026, 03:30 AM IST
27ಕೆಪಿಆರ್ಸಿಆರ್004: | Kannada Prabha

ಸಾರಾಂಶ

ಸುಕ್ಷೇತ್ರ ಮಂತ್ರಾಲಯದ ತುಂಗಾತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಗುರುವಾರ ಆರಂಭ ಕಂಡಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಸುಕ್ಷೇತ್ರ ಮಂತ್ರಾಲಯದ ತುಂಗಾತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಗುರುವಾರ ಆರಂಭ ಕಂಡಿತು.

ಆರಾಧನೆ ಪ್ರಯುಕ್ತ ಶ್ರೀಮಠದಿಂದ ಆಯೋಜಿಸಿರುವ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಸಪ್ತರಾತ್ರೋತ್ಸವದ ಮೊದಲ ದಿನದ ಬೆಳಗ್ಗೆ ಪ್ರವಚನ, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಟಿಟಿಡಿಯಿಂದ ಬಂದಿದ್ದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಯಿತು. ಸಂಜೆ ಗ್ರಾಮದೇವಿ ಮಂಚಾಲಮ್ಮರನ್ನು ಶ್ರೀಗಳು ವಿಶೇಷವಾಗಿ ಪೂಜಿಸಿ, ಶ್ರೀಗುರುರಾಯರ ಮೂಲಬೃಂದಾವನಕ್ಕೆ ನಮಿಸಿ ಆರಾಧನಾ ಮಹೋತ್ಸವದ ಚಾಲನೆಗೆ ರಾಯರಲ್ಲಿ ಅಪ್ಪಣೆ ಕೋರಿದ ಶ್ರೀಗಳು, ಅಲ್ಲಿಂದ ನೇರವಾಗಿ ಶ್ರೀಮಠದ ಮುಂಭಾಗದ ಆವರಣದಲ್ಲಿ ಮಠದ ಸಂಪ್ರದಾಯಗಳ ಅನುಸಾರವಾಗಿ ಧ್ವಜಾರೋಹಣವನ್ನು ನೆರವೇರಿಸಿ ಬಳಿಕ ಗೋ ಪೂಜೆ, ಅಶ್ವ ಪೂಜೆ, ಧ್ವಜ ಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವಗಳನ್ನು ನೆರವೇರಿಸಿದರು.

ಇದೇ ವೇಳೆ ಯೋಗೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರವನ್ನು ರಾಯರ ಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆಯನ್ನು ನೆರವೇರಿಸುವುದರ ಮುಖಾಂತರ ಸ್ವಾಮಿಗಳು ಉದ್ಘಾಟಿಸಿದರು. ನಂತರ ನೆರೆದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮೀಜಿಗಳು, ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೋತ್ಸಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ ಏಳು ದಿನಗಳ ಕಾಲ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರು, ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ವರ್ಗದವರು, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಮಾರ್ಗ ಬಿಟ್ಟು, ಭಗತ್ ಮಾದರಿ ಹೋರಾಟದ ಎಚ್ಚರಿಕೆ
ಭದ್ರಾ ಮೇಲ್ದಂಡೆ ನೀರು ಆದೇಶ ಹಿಂಪಡೆಗೆ ತಾಕೀತು