ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರನ್ನ ಉತ್ಸವಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹2 ಕೋಟಿ, ಎಂಎಸ್ಐಎಲ್ದಿಂದ ₹49 ಲಕ್ಷ, ದಾನಿಗಳಿಂದ ಸಂಗ್ರಹವಾದ ₹1,92,40,020, ಮತ್ತು ಪ್ರವಾಸೋದ್ಯಮ ಇಲಾಖೆಯ₹ 20 ಲಕ್ಷ ಅನುದಾನ ಸೇರಿ ಒಟ್ಟು ₹4,61,40,020 ಸಂಗ್ರಹವಾಗಿದೆ. ಇದರಲ್ಲಿ ₹4,03,59,452 ಖರ್ಚುಮಾಡಲಾಗಿದೆ. ₹57,80,568 ಉಳಿತಾಯ ಖಾತೆಯಲ್ಲಿದೆ ಎಂದು ಮಾಹಿತಿ ನೀಡಿದರು.
ಕ್ರೀಡೆಗಾಗಿ ₹13,50,000., ಸ್ಥಳೀಯ ಕಲಾವಿದರಿಗೆ ₹34,74,000, ಶ್ಯಾಮಿಯಾನ್ ಫುಡ್ ಸೆಕ್ಷನ್ಗೆ ₹15 ಲಕ್ಷ, ರನ್ನ ರಥಕ್ಕೆ ₹5 ಲಕ್ಷ., ಸನ್ಮಾನಕ್ಕಾಗಿ ₹1.60 ಲಕ್ಷ, ಸನ್ಮಾನಿತರಿಗೆ ₹4,80 000, ಪ್ರಚಾರಕ್ಕಾಗಿ ₹16 ಲಕ್ಷ , ಫಲ-ಪುಷ್ಪ ಪ್ರದರ್ಶನಕ್ಕೆ ₹3,92,000., ಹೊಯ್ಸಳ ಕ್ರಿಯೇಷನ್ (ಇವೆಂಟ್ ಮ್ಯಾನೇಜಮೆಂಟಗಾಗಿ ) ₹2, 85,00,000 ಇತರೆ ಕಾರ್ಯಕ್ರಮ ಸೇರಿ ಒಟ್ಟು ₹ 4,03,59,452 ಖರ್ಚು ಮಾಡಲಾಗಿದೆ. ಹೊಯ್ಸಳ ಕ್ರಿಯೇಷನ್ಸ್ ಅವರು ಹೆಚ್ಚುವರಿ ಬಾಕಿ ಪಾವತಿಸಲು ₹ 97 ಲಕ್ಷ ರೂ., ಬಿಲ್ ನೀಡಿದ್ದು, ಅದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಮಾತನಾಡಿ, ರನ್ನ ಉತ್ಸವಕ್ಕಾಗಿ ಖರ್ಚು ಮಾಡಿದ ಎಲ್ಲ ವಿವರವನ್ನು ಮಾಧ್ಯಮಗೋಷ್ಠಿಯಲ್ಲಿ ಓದಿ ಹೇಳಿದರು.