ಗಿರಿಯಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಶಾಸಕ ಆನಂದ್
ಕನ್ನಡಪ್ರಭ ವಾರ್ತೆ,ಕಡೂರುಕಡೂರು ತಾಲೂಕಿನ 2ನೇ ಹಂತದ ಭದ್ರಾ ಉಪ ಕಣಿವೆ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಒಮ್ಮೆಲೇ ₹400 ಕೋಟಿ ಬಿಡುಗಡೆ ಮಾಡಿದ್ದಾರೆಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಕಡೂರು ತಾಲೂಕಿನ ಗಿರಿಯಾಪುರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗಿರಿಯಾಪುರದಲ್ಲಿ ಕಾರ್ಯಕ್ರಮವೆಂದರೆ ಮಾದರಿ ಕಾರ್ಯಕ್ರಮ ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಗ್ರಾಮದ ಸಹಕಾರ ಸಂಘ ಆರಂಭವಾಗಿ 104 ವರ್ಷ ಕಳೆದ ಹಿನ್ನಲೆಯಲ್ಲಿ ಹಬ್ಬದಂತೆ ಕಾರ್ಯಕ್ರಮ ಆಚರಿಸುತ್ತಿ ರುವುದು ಸಂತಸದ ಸಂಗತಿ ಎಂದರು.ಕೆಲವೆಡೆ ಸಹಕಾರಿ ಕ್ಷೇತ್ರದ ಸಂಘಗಳು ಮುಚ್ಚಿರುವುದನ್ನು ನೋಡಿದ್ದೇನೆ ಆದರೆ ಗಿರಿಯಾಪುರದಲ್ಲಿ ಕೇವಲ ₹75 ರಿಂದ ಆರಂಭವಾಗಿ ಕೋಟ್ಯಾಂತರ ರು. ವಹಿವಾಟು, ರೈತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿ ಸಹಕಾರಿ ಕ್ಷೇತ್ರಕ್ಕೆ ಮಾದರಿ ಯಾಗಿದೆ ಎಂದರು.
ಗ್ರಾಮದಲ್ಲಿ 250 ಮನೆಗಳಿದ್ದು ಇ- ಸ್ವತ್ತು ಕೊಡಿಸಲು ಕಂದಾಯ ಇಲಾಖೆಯಲ್ಲಿ ಚರ್ಚಿಸಿ ನಂತರ ಕ್ರಮಕ್ಕೆ ಮುಂದಾಗುತ್ತೇನೆ. 2018ರಲ್ಲಿ ಭದ್ರಾ ಉಪ ಕಣಿವೆ ಯೋಜನೆ ಆರಂಭದಲ್ಲಿ ವೈಎಸ್ ವಿ ದತ್ತ ಅವರು ಶ್ರಮ ಹಾಕಿ, ಕಾಂಗ್ರೆಸ್ ಸರ್ಕಾರದಲ್ಲಿ ಈ ಯೋಜನೆಗೆ 1.45 ಟಿಎಂಸಿ ನೀರಿನ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಹಾಕಿದ್ದರು. ಆನಂತರ ಯೋಜನೆ ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ. ರವಿ ಅವರು ಚಿಕ್ಕಮಗಳೂರು ಕ್ಷೇತ್ರಕ್ಕೂ ಸೇರಿಸುವ ಮೂಲಕ ₹1281 ಕೊಟಿ ಟೆಂಡರ್ ಕರೆಯಲಾಯಿತು. ಆದರೆ ನಾನು ಶಾಸಕನಾದ ಮೇಲೆ ತರೀಕೆರೆ ಕ್ಷೇತ್ರದಲ್ಲಿ ಮೊದಲ ಹಂತದ ಕಾಮಗಾರಿ ಆರಂಭವಾಯಿತು. ಯೋಜನೆಯನ್ನು ನಬಾರ್ಡ್ ಗೆ ಸೇರಿಸಿ ₹800 ಕೋಟಿ ಮಂಜೂರಾಗಿ, ಅದರಲ್ಲಿ ಕಡೂರಿಕಿನ 2ನೇ ಹಂತದ ಕುಡಿವ ನೀರಿನ ಯೋಜನೆಗೆ ಸಿಎಂ ಮತ್ತು ಡಿಸಿಎಂ ಕಳೆದ ಒಂದು ವಾರದ ಹಿಂದೆ ಒಮ್ಮೆಲೇ ₹400 ಕೋಟಿ ಬಿಡುಗಡೆ ಮಾಡಿದ್ದಾರೆ. 2ನೇ ಹಂತದಲ್ಲಿ ಗಿರಿಯಾಪುರ ಕೆರೆ ಸೇರಿದಂತೆ ಕ್ಷೇತ್ರದ 56 ಕೆರೆಗಳು ತುಂಬಲಿದೆ ಎಂದು ಮಾಹಿತಿ ನೀಡಿದರು.ಸಂಘದ ಮಾಜಿ ನಿರ್ದೇಶಕರು ಹಾಗು ಹಿರಿಯರಿಗೆ ಸನ್ಮಾನಿಸಿದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸ್ಥಳೀಯ ಶಾಸಕರು ಮತ್ತು ಮುಖಂಡರ ಸಲಹೆ ಸಹಕಾರದ ಜೊತೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ಮಾಡುತ್ತೇನೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ, 2006ರಿಂದ ಕಡೂರಿನ ರಾಜಕಾರಣದಲ್ಲಿ ಗಿರಿಯಾಪುರದ ಜೊತೆ ಸಂಪರ್ಕದಲ್ಲಿದ್ದೇನೆ. ಈ ಗ್ರಾಮದ ಜನ ಬಹಳ ಬುದ್ಧಿವಂತರು. ಯಾವ ಕೆಲಸವನ್ನು ಯಾರಿಂದ ಹೇಗೆ ಮಾಡಿಸಿಕೊಳ್ಳಬೇಕು ಎಂಬುದನ್ನು ಅವರಿಂದ ನಾವು ಕಲಿಯಬೇಕು. 104 ವರ್ಷಗಳ ಕಾಲ ಈ ಸಹಕಾರಿ ಸಂಘದಲ್ಲಿ ಚುನಾವಣೆ ಇಲ್ಲದೆ ಅಧ್ಯಕ್ಷರಾಗುವುದು ಇಲ್ಲಿನ ವಿಶೇಷ. ಆ ಮೂಲಕ ಮಾದರಿಯಾಗಿದೆ. ರಾಜಕಾರಣಿಗಳು ಆರಂಭವಾಗುವುದೇ ಸಹಕಾರಿ ಕ್ಷೇತ್ರದಿಂದ ಎಂದ ಅವರು ಪ್ರಧಾನಿ ದೇವೇಗೌಡರು ಈ ಕ್ಏತ್ರದಿಂದಲೇ ಆಯ್ಕೆಯಾಗಿದ್ದರು ಎಂದರು.ಕೃಷಿ ಮತ್ತು ಅರಣ್ಯ ವಲಯ ಮಾಡುವ ಮೂಲಕ ಇ-ಸ್ವತ್ತಿಗೆ ಪರಿಹಾರ ಕಂಡುಹಿಡಿಯಬೇಕು.ಸಂಸದ ಶ್ರೇಯಸ್ ಪಟೇಲ್ ರವರು ಸಂಸತ್ತಿನಲ್ಲಿ ಸರಕಾರದ ಗಮನ ಸೆಳೆದು ಶಾಶ್ವತ ಪರಿಹಾರ ಕೊಡಿಸಬಹುದು ಎಂದು ಸಲಹೆ ನೀಡಿದರು.
ಸಹಕಾರ ಸಂಘದ ನಿರ್ದೇಶಕ ಜಿ.ಎಸ್ ಸತೀಶ್ ಮಾತನಾಡಿ, ಸಂಘದಲ್ಲಿ ₹ 12.70ಕೋಟಿ ಠೇವಣಿಯಿದ್ದು,₹151 ಕೋಟಿ ವಹಿವಾಟು ನಡೆಸಲಾಗಿದೆ. ₹17 ಕೋಟಿ ಸಾಲ ನೀಡಿದೆ ಎಂದು ಸಂಘ ಬೆಳೆದು ಬಂದ ಹಾದಿ ಕುರಿತು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಂಘದ ಜಿ.ಎನ್.ಚನ್ನಮಲ್ಲಿಕಾರ್ಜುನ ವಹಿಸಿದ್ದರು. ಉಪಾಧ್ಯಕ್ಷ ಸಿ.ಇ,ಶೇಖರಪ್ಪ, ಕಾಶೀನಾಥ್, ನೀಲಲೋಚನಸ್ವಾಮಿ, ಪಿ.ಡಿ ಲೋಕನಾಥ್, ಗೌರಮ್ಮ, ಆರ್ ಶಿವಕುಮಾರ್, ಉಮಾಮಹೇಶ್ವರಪ್ಪ, ಏಕಾಂತಯ್ಯ, ಶ್ರೀಮತಿ ಸುಧಾ,ಮಹಾಬಲ,ಜಿ.ಪಿ ಪ್ರಭುಕುಮಾರ್, ಜಿ.ಎಸ್. ಸತೀಶ್, ,ಜಿ.ಹಾಲಪ್ಪ, ಮಮತಾ, ವಿಜಯ, ಓಂಕಾರಮ್ಮ, ಲೋಕೇಶಾಚಾರ್,ಸಿ.ಜಯಪ್ಪ,ಬಿ.ರಾಮಪ್ಪ, ಸಿ ತಿಮ್ಮೇಶ್, ಷಡಾಕ್ಷರಿ, ಗುರು ಶಾಂತಪ್ಪ ಮತ್ತಿತರರು ಇದ್ದರು.
28ಕೆೆಕೆೆಡಿಯು1ಕಡೂರಿನ ಗಿರಿಯಾಪುಪರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು.
28ಕೆೆಕೆೆಡಿಯು1ಎ.ಕಡೂರು ತಾಲೂಕು ಗಿರಿಯಾಪುರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.