- ಡಿ.14ರ ತಡರಾತ್ರಿ ಬಂದಿದ್ದ ಇ-ಮೇಲ್ನಲ್ಲಿ ಅರೆಬರೆ ಇಂಗ್ಲಿಷ್ ಪದಗಳ ಬಳಕೆ । ತುಮಕೂರು, ಕಾರವಾರ ಡಿಸಿಗಳಿಗೂ ಇ-ಮೇಲ್
- ಪಾಕಿಸ್ತಾನದ ಐಎಸ್ಐ ಸೆಲ್, ತಮಿಳುನಾಡಿನ ಹಳೆಯ ಎಲ್ಟಿಟಿಇ ಜಂಟಿ ಕಾರ್ಯಾಚರಣೆ ಎಂದು ಉಲ್ಲೇಖ
- ಜಿಲ್ಲಾಡಳಿತ ಭವನದ ಎಲ್ಲ 53 ಕೊಠಡಿಗಳ ಜಾಲಾಟ । ಸೂಕ್ತ ಕ್ರಮಕ್ಕೆ ಕೋರಿ ಕೇಂದ್ರೀಯ ತನಿಖಾ ದಳಕ್ಕೆ ಪತ್ರ- - -
ದಾವಣಗೆರೆ ಜಿಲ್ಲಾಡಳಿತ ಕಚೇರಿಯಲ್ಲಿ 5 ಬಾಂಬ್ಗಳನ್ನು ಶೀಘ್ರವೇ ಸ್ಫೋಟಿಸುವುದಾಗಿ ಜಿಲ್ಲಾಧಿಕಾರಿ ಹೆಸರಿನ ಅಧಿಕೃತ ಇ-ಮೇಲ್ಗೆ ಡಿ.14ರಂದು ಮಧ್ಯರಾತ್ರಿ ಬೆದರಿಕೆಯ ಇ-ಮೇಲ್ ಬಂದಿದೆ. ಈ ಹಿನ್ನೆಲೆ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಇಂಚಿಂಚೂ ಬಿಡದೇ ಇಡೀ ಕಟ್ಟಡ ತಪಾಸಣೆ ಮಾಡಲಾಗಿದ್ದು, ಇದೊಂದು ಹುಸಿ ಮಾಹಿತಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್ ಎಂಬುದಾಗಿ ಉಲ್ಲೇಖಿಸಿ ಬರೆದ ಬಾಂಬ್ ಬೆದರಿಕೆಯ ಇ-ಮೇಲ್ ಅರ್ನಾ ಅಶ್ವಿನ್ ಶೇಖರ್, 295ನೇ ಟ್ರಸ್ಟ್ ಕ್ರಾಸ್, ಮೈಲಾಪುರ್ ಟು ಪೆರಿಯಾರ್ ಅಂಬೇಡ್ಕರ್ ಸ್ಟ್ರೀಟ್ ಎಂಬ ಹೆಸರಿನಲ್ಲಿ ಔಟ್ ಲುಕ್ ಇ-ಮೇಲ್ ಖಾತೆಯಿಂದ ಡಿ.14ರಂದು ಮಧ್ಯರಾತ್ರಿ ದಾವಣಗೆರೆ ಜಿಲ್ಲಾಡಳಿತಕ್ಕೆ ಬಂದಿದೆ. ಇದೇ ರೀತಿ ತುಮಕೂರು, ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಗಳು ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ರಾತ್ರೋರಾತ್ರಿ ಬಂದ ಬೆದರಿಕೆಯ ಇ-ಮೇಲ್ ಇದಾಗಿದೆ ಎನ್ನಲಾಗಿದೆ.
ಬಾಂಬ್ ಸ್ಫೋಟದ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಅವರು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಎಸ್ಪಿ ಅವರಿಗೆ ಪತ್ರ ಬರೆದು ಈ ಬಗ್ಗೆ ಪರಿಶೀಲಿಸುವ ಕುರಿತು ಗಮನಕ್ಕೆ ತಂದಿದ್ದರು. ಅದರಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್ಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಮೇತ ಇಡೀ ಡಿಸಿ ಕಚೇರಿಯಲ್ಲಿ ಪರಿಶೀಲನೆ ನಡೆಸುವಂತೆ ಆದೇಶಿದ್ದರು.
ಡಿವೈಎಸ್ಪಿ ಪಿ.ಬಿ.ಪ್ರಕಾಶ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳದ 8 ಸಿಬ್ಬಂದಿ ಹಾಗೂ ಶ್ವಾನದಳ ಸಿಬ್ಬಂದಿ ಇಡೀ ಕಚೇರಿ ಕೊಠಡಿ, ಮೂಲೆ ಮೂಲೆ, ಶೌಚಾಲಯ ಹೀಗೆ ಎಲ್ಲ ಕಡೆ ಬಾಂಬ್ಗಾಗಿ ಹುಡುಕಿದರು. ಜಿಲ್ಲಾಡಳಿತ ಭವನದ ನೆಲಅಂತಸ್ತು, ಮೊದಲ ಅಂತಸ್ತು, 2ನೇ ಅಂತಸ್ತು, ಮೇಲ್ಚಾವಣಿ ಸೇರಿದಂತೆ 53 ಕೊಠಡಿಗಳು ಸೇರಿದಂತೆ ಇಡೀ ಕಟ್ಟಡವನ್ನು ಜಾಲಾಡಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತುವಾಗಲೀ, ಬಾಂಬ್ ಆಗಲಿ ಪತ್ತೆಯಾಗಲಿಲ್ಲ.
- - -
- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.
- - --16ಕೆಡಿವಿಜಿ6: ದಾವಣಗೆರೆ ಡಿಸಿ ಕಚೇರಿಯಲ್ಲಿ ಸ್ಫೋಟಕ ಪತ್ತೆ ಹಚ್ಚಲು ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.
-16ಕೆಡಿವಿಜಿ7: ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.