ಕನ್ನಡಪ್ರಭ ವಾರ್ತೆ ಮಂಡ್ಯ
ಕುಮಾರಸ್ವಾಮಿ ಅವರ ಸೂಚನೆಯಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಅವರು ನಿಶ್ಚಿತಾ ಮನೆಗೆ ತೆರಳಿ 50 ಸಾವಿರ ರು. ನೀಡಿ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಬಿ.ಆರ್. ರಾಮಚಂದ್ರ ಅವರು ಜನತಾದರ್ಶನ ಕಾರ್ಯಕ್ರಮದಲ್ಲಿ ನಿಶ್ಚಿತಾ ಅವರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಕುಮಾರಸ್ವಾಮಿ ಅವರು ಐವತ್ತು ಸಾವಿರ ಕೊಟ್ಟು ಧೈರ್ಯ ಹೇಳಿ ಬನ್ನಿ ಎಂದಿದ್ದರು. ಅದರಂತೆ 50 ಸಾವಿರ ರು. ನೀಡಿದ್ದೇವೆ. ಅವರು ಶೀಘ್ರ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದಾರೆ ಎಂದರು.ಈ ಕಿರು ಸಹಾಯವನ್ನು ಪಡೆದು ಬೇಗ ಚೇತರಿಕೆಯಾಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಅವರ ಕುಟುಂಬವನ್ನು ಸಾಕುವಂತಾಗಲಿ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮಾತನಾಡಿ, ನಿಶ್ಚಿತಾ ಅವರು ದುರಾದೃಷ್ಟವಸಾತ್ ಅಪಘಾತದಲ್ಲಿ ಗಾಯಗೊಂಡು ಬೆನ್ನು ಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ. ಅವರ ಚಿಕಿತ್ಸಾ ವೆಚ್ಚಕ್ಕೆ ಕುಮಾರಸ್ವಾಮಿ ಅವರು ಹಣ ನೀಡಿ ಅವರ ಮುಂದಿನ ಜೀವನಕ್ಕೂ ಅನುಕೂಲ ಮಾಡಿಕೊಡುವುದಾಗಿ ಹೇಳಿರುವುದಾಗಿ ತಿಳಿಸಿದರು.ನಗರಸಭಾ ಸದಸ್ಯ ನಾಗೇಶ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೋರೇಗೌಡ, ಜೆಡಿಎಸ್ ಮುಖಂಡರಾದ ಮಂಜುನಾಥ್, ಸೇರಿದಂತೆ ಇತರರಿದ್ದರು.