ತುಂಗಭದ್ರಾ ನದಿಗೆ 58000 ಕ್ಯುಸೆಕ್‌ ನೀರು

KannadaprabhaNewsNetwork |  
Published : Jul 03, 2025, 11:48 PM IST
3ಕೆಪಿಎಲ್23 ತುಂಗಭದ್ರಾ ಜಲಾಶಯದಿಂದ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಟ್ಟಿರುವುದರಿಂದ ಸೆಲ್ಫಿ ತೆಗೆದುಕೊಳ್ಳುತ್ತಿರುವುದು.3ಕೆಪಿಎಲ್24 20 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ತುಂಗಭದ್ರಾ ಜಲಾಶಯದಿಂದ ನೀರು  ಬಿಟ್ಟಿರುವ ಮನಮೋಹಕ ದೃಶ್ಯ3ಕೆಪಿಎಲ್25 ತುಂಗಭದ್ರಾ ಜಲಾಶಯದಿಂದ 20 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಟ್ಟಿರುವುದರಿಂದ ನೋಡು ಸೇರಿರುವ ಜನಸ್ತೋಮ. | Kannada Prabha

ಸಾರಾಂಶ

ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಮುರಿದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಯಿಂದ ಈ ಬಾರಿ 80 ಟಿಎಂಸಿ ನೀರು ಸಂಗ್ರಹಿಸಲು ತಜ್ಞರು ಹೇಳಿದ್ದರಿಂದ ಜಲಾಶಯ ತುಂಬುವ ಮೊದಲೇ ಅಪಾರ ಪ್ರಮಾಣದ ನೀರನ್ನು ನದಿಗೆ ಬೀಡಲಾಗಿದೆ. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಮುನಿರಾಬಾದ್:

ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಪೈಕಿ 20 ಗೇಟ್‌ಗಳನ್ನು 2 ಅಡಿ ಎತ್ತರಿಸಿ ಗುರುವಾರ ನದಿಗೆ 58260 ಕ್ಯುಸೆಕ್‌ ನೀರು ಹರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಲಾಶಯದತ್ತ ಆಗಮಿಸಿ ನೀರು ಹರಿಯುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಬೆಳಗ್ಗೆ 11ಕ್ಕೆ 12 ಗೇಟ್‌ಗಳಿಂದ 35,100 ಕ್ಯುಸೆಕ್‌, ಮಧ್ಯಾಹ್ನ ತುಂಗಾ ಜಲಾಶಯದಿಂದ 50000 ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ 20 ಗೇಟ್‌ ತೆರೆದು ನದಿಗೆ 58260 ಕ್ಯುಸೆಕ್‌ ನೀರು ಹರಿಸಲಾಗಿದೆ. ಇದು ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ ಹರಿಸಿದ ಅತ್ಯಧಿಕ ಪ್ರಮಾಣದ ನೀರಿನ ಹೊರಹರಿವಾಗಿದೆ.

ಕಳೆದ ವರ್ಷ ಇದೇ ದಿನದಂದು ತುಂಗಭದ್ರಾ ಜಲಾಶಯದಲ್ಲಿ ಕೇವಲ 8 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿ 1587 ಅಡಿಗಳಿತ್ತು. ಒಳಹರಿವು 10503 ಕ್ಯುಸೆಕ್‌ ಇದ್ದು ಕಳೆದ ಹತ್ತು ವರ್ಷದ ಸರಾಸರಿ ಹೋಲಿಸಿದರೆ ಜಲಾಶಯದಲ್ಲಿ ಇದೇ ದಿನದಂದು 23 ಟಿಎಂಸಿ ನೀರು ಹಾಗೂ ಒಳಹರಿವು 9800 ಕ್ಯುಸೆಕ್‌ ಇತ್ತು.ಜನರ ಸೆಲ್ಫಿ...

ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಮುರಿದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಯಿಂದ ಈ ಬಾರಿ 80 ಟಿಎಂಸಿ ನೀರು ಸಂಗ್ರಹಿಸಲು ತಜ್ಞರು ಹೇಳಿದ್ದರಿಂದ ಜಲಾಶಯ ತುಂಬುವ ಮೊದಲೇ ಅಪಾರ ಪ್ರಮಾಣದ ನೀರನ್ನು ನದಿಗೆ ಬೀಡಲಾಗಿದೆ. ಈ ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಜತೆಗೆ ಅಪಾಯವನ್ನು ಲೆಕ್ಕಿಸದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು