ಕೊಪ್ಪಳ(ಯಲಬುರ್ಗಾ):
ಬಳಿಕ ಮಾತನಾಡಿದ ಅವರು, 1975ರಿಂದ ಈ ವರೆಗೆ ಮಕ್ಕಳ್ಳಿ ಗ್ರಾಮದಲ್ಲಿ ಸ್ವಂತ ಅಂಗನವಾಡಿ ಕಟ್ಟಡವಿರಲಿಲ್ಲ. ಅನ್ನ, ಅಕ್ಷರ, ಆವಿಷ್ಕಾರ ಇದ್ದರೆ ಮಾತ್ರ
ಯಶಸ್ಸು ಸಾಧಿಸಲು ಸಾಧ್ಯ. ಅಂಗನವಾಡಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.ತಾಲೂಕಿನಾದ್ಯಂತ 60 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಆಡಳಿತದಲ್ಲಿ ಸಂಪೂರ್ಣ ಕಟ್ಟಡಕ್ಕೆ ದೊರಕಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಮಕ್ಕಳು ಬೌದ್ಧಿಕ ಮಟ್ಟ ಬೆಳೆಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ನೀಲಪ್ಪ ಹೊಸ್ಮನಿ ಮಾತನಾಡಿದರು. ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಮನಪ್ಪ ಮಾಳಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಡಿಒ ಪುಷ್ಪಲತಾ ಮಾಲಿಪಾಟೀಲ್, ಸದಸ್ಯೆ ಪುಷ್ಪಾವತಿ ಕರೆಕುರಿ, ವಜ್ರಬಂಡಿ ಮೇಲ್ವಿಚಾರಕಿ ಗಂಗಾ ಮೇಟಿ, ಲಿಂಗರಾಜ ಹೊಸ್ಮನಿ, ನೀಲಪ್ಪ ಹೊಸ್ಮನಿ, ದುರಗಪ್ಪ ಮಕ್ಕಳ್ಳಿ, ಶೇಖರಗೌಡ ಮಾಲಿಪಾಟೀಲ್, ಮುದಿಯಪ್ಪ ಕರೆಕುರಿ, ಗವಿಸಿದ್ದಪ್ಪ ಹಿರೇಮಠ, ಸಂಗಪ್ಪ ಹುಣಶಿಹಾಳ, ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ವಿಜಯಲಕ್ಷ್ಮಿ ದುರಗಪ್ಪ ಮಕ್ಕಳ್ಳಿ, ಶೋಭಾ ಚಿತ್ತರಗಿಮಠ, ಸುಜಾತ ಹಡಪದ, ಆಶಾ ಕಾರ್ಯಕರ್ತೆ ಗೀತಾ ಪೊಪಾ ಇದ್ದರು.