ಎಸ್ಬಿಆರ್‌ ಸಿಇಟಿಗೆ 6483 ವಿದ್ಯಾರ್ಥಿಗಳು ಹಾಜರು

KannadaprabhaNewsNetwork |  
Published : Feb 12, 2024, 01:30 AM IST
ಫೋಟೋ- ಎಸ್ಬಿಆರ್‌ 1, ಎಸ್ಬಿಆರ್‌ 2 ಮತ್ತು ಎಸ್ಬಿಆರ್‌ 3 | Kannada Prabha

ಸಾರಾಂಶ

ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪಾಜಿ ಅವರು 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‌ಶಿಪ್ ರೂಪದಲ್ಲಿ ರು.2.5 ಕೋಟಿ ರುಪಾಯಿಗಳನ್ನು ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿಯ ಕರ್ನಾಟಕ ಸ್ಟೇಟ್ ಬೋರ್ಡ ವಿದ್ಯಾರ್ಥಿಗಳಿಗೆ ಫೆ.11ರಂದು ನಡೆದ ಪ್ರವೇಶ ಪರೀಕ್ಷೆಗೆ 6,483 ಮಕ್ಕಳು ಹಾಜರಾಗಿದ್ದರು.

ಈ ಪರೀಕ್ಷೆಯಲ್ಲಿ ಬೀದರ್‌, ಭಾಲ್ಕಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬೆಳಗಾವಿ, ವಿಜಯಪೂರ ಸೇರಿದಂತೆ ಅನೇಕ ಜಿಲ್ಲೆಗಳಿಂದ 6483 ವಿದ್ಯಾರ್ಥಿಗಳು ಹಾಜರಿದ್ದು ಗಮನ ಸೆಳೆದರು.

ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪಾಜಿ ಅವರು 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‌ಶಿಪ್ ರೂಪದಲ್ಲಿ ₹2.5 ಕೋಟಿ ರುಪಾಯಿಗಳನ್ನು ನೀಡಲಾಗುತ್ತದೆ.

ಎಸ್.ಬಿ.ಆರ್. ಪಿಯು ಕಾಲೇಜು, ಮುಕ್ತಾಂಬಿಕಾ ಪಿ.ಯು ಕಾಲೇಜು, ದೊಡ್ಡಪ್ಪ ಅಪ್ಪ ಪಿ.ಯು ಕಾಲೇಜು, ಅಪ್ಪಾ ಪಬ್ಲಿಕ್ ಶಾಲೆ, ಎಸ್.ಬಿ.ಆರ್ ಪಬ್ಲಿಕ್ ಶಾಲೆ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಸಿ.ಎಸ್ ವಿಭಾಗ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಮೆಕ್ಯಾನಿಕಲ್ ವಿಭಾಗ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಫಸ್ಟ್-ಇಯರ್ ಬ್ಲಾಕ್ ಹೀಗೆ ಸಂಸ್ಥೆಯ 9 ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಆಧಾರವಾಗಿಟ್ಟುಕೊಂಡು 100 ಅಂಕಗಳ ಪ್ರಶ್ನೆ-ಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. 16 ವರ್ಷನ್‍ಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಯು ಋಣಾತ್ಮಕ ಅಂಕಗಳನ್ನು ಒಳಗೊಂಡಿತ್ತು. ಅತ್ಯಂತ ಪಾರದರ್ಶಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಯಿತು. ಇದು ಎಸ್.ಬಿ.ಆರ್. ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಗುರು-ವೃಂದದವರ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿತ್ತು.

ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಕ್ಯಾಂಪಸ್‍ನಲ್ಲಿ ಹೆಲ್ಪ-ಡೆಸ್ಕ ವ್ಯವಸ್ಥೆ ಮಾಡಲಾಗಿತ್ತು. ಪ್ರಾಚಾರ್ಯ ಎನ್.ಎಸ್. ದೇವರಕಲ್ ಮಾರ್ಗದರ್ಶನದಲ್ಲಿ ಹಾಗೂ ಕಾಲೇಜಿನ ಮೇಲ್ವಿಚಾರಕ ಡಾ. ಶ್ರೀಶೈಲ ಜಿ. ಹೊಗಾಡೆ ಹಾಗೂ ಗುರುವೃಂದದವರ ಉಸ್ತುವಾರಿಯಲ್ಲಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ