ಒಂದೇ ದಿನದಲ್ಲಿ 67 ಮರ, 104 ರೆಂಬೆ-ಕೊಂಬೆ ತೆರವು

KannadaprabhaNewsNetwork |  
Published : May 28, 2026, 03:45 AM IST
Ganganagar | Kannada Prabha

ಸಾರಾಂಶ

ನಗರದಲ್ಲಿ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 84 ಬೃಹತ್ ಮರಗಳು, 147 ಕೊಂಬೆಗಳು ಮುರಿದು ಬಿದ್ದಿದ್ದು, ಒಂದೇ ದಿನದಲ್ಲಿ ಅರಣ್ಯ ಇಲಾಖೆ ಹಾಗೂ ಖಾಸಗಿ ಸಿಬ್ಬಂದಿ 67 ಬೃಹತ್ ಮರಗಳು ಹಾಗೂ 104 ಕೊಂಬೆಗಳನ್ನು ತೆರೆವುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 84 ಬೃಹತ್ ಮರಗಳು, 147 ಕೊಂಬೆಗಳು ಮುರಿದು ಬಿದ್ದಿದ್ದು, ಒಂದೇ ದಿನದಲ್ಲಿ ಅರಣ್ಯ ಇಲಾಖೆ ಹಾಗೂ ಖಾಸಗಿ ಸಿಬ್ಬಂದಿ 67 ಬೃಹತ್ ಮರಗಳು ಹಾಗೂ 104 ಕೊಂಬೆಗಳನ್ನು ತೆರೆವುಗೊಳಿಸಿದ್ದಾರೆ.

ಮೇ 26ರಂದು ಬಿದ್ದ ಮಳೆಗೆ ನಗರದ ಪಶ್ಚಿಮ ಹಾಗೂ ದಕ್ಷಿಣ ಪಾಲಿಕೆ ವಿಭಾಗಗಳಲ್ಲಿ ಹೆಚ್ಚು ಮರಗಳು ಮುರಿದು ಬಿದ್ದಿದ್ದು ಪೂರ್ವ, ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿ ಕಡಿಮೆ ಮರಗಳು ಮುರಿದುಬಿದ್ದಿವೆ. ಕಲಾಸಿಪಾಳ್ಯ ಸಮೀಪದ ಕೆ.ಆರ್. ರಸ್ತೆಯಲ್ಲಿ ಬೃಹತ್ ಮರ ಬಿದ್ದು ಮನೆಗೆ ಹಾನಿಯಾಗಿತ್ತು. ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಈ ಮರವನ್ನು ತೆರವುಗೊಳಿಸಿದ್ದಾರೆ.

ಗಂಗಾನಗರದ ವಿನಾಯಕನಗರ, ಎನ್ ಜಿ ಇ ಎಫ್ ಲೇ ಔಟ್ ಕಸ್ತೂರಿನಗರದಲ್ಲಿ ಮುರಿದು ಬಿದ್ದ ಮರವನ್ನು ತೆರವುಗೊಳಿಸಿ ಈ ಭಾಗದ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಿಜಯನಗರ, ಇಂದಿರಾನಗರ ಸೇರಿದಂತೆ ಹಲವು ಕಡೆ ಪಾಲಿಕೆ ಸಿಬ್ಬಂದಿ ಕೊಂಬೆಗಳನ್ನು ವಾಹನಗಳ ಮೂಲಕ ಹೊರವಲಯದ ಪಾಲಿಕೆ ಸ್ಥಳಗಳಿಗೆ ತಲುಪಿಸಿದ್ದಾರೆ.

ನಗರದ ಅಂಡರ್ ಪಾಸ್ ಗಳಲ್ಲಿ ಬುಧವಾರದ ಬೆಳಿಗ್ಗೆ ವೇಳೆಗೆ ನೀರು ಖಾಲಿಯಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಉಳಿದ 28 ಬೃಹತ್ ಮರಗಳು, 44 ಕೊಂಬೆಗಳನ್ನು ಗುರುವಾರ ತೆರವುಗೊಳಿಸಲಾಗುವುದು ಎಂದು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನನಿಬಿಡ ಸ್ಥಳದಲ್ಲಿ ಬೀದಿನಾಯಿಗೆ ಆಹಾರವನ್ನು ನೀಡುವಂತಿಲ್ಲ: ಉತ್ತರ ಪಾಲಿಕೆ ಆಯುಕ್ತ
ಇ-ಖಾತಾ ಸಂಯೋಜನೆಗೆ ಕಾನೂನು ಮಾನ್ಯತೆ: ಮುನೀಶ್ ಮೌದ್ಗಿಲ್