ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂಜೆ ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್ ನ ಚತುರ್ಥ ವರ್ಷದ ಸನ್ಮಾನ ಸಮಾರಂಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹಿರಿಯ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ ಯಕ್ಷಗಾನ ಸಂಸ್ಕೃತಿಯನ್ನು ಹುಟ್ಟುಹಾಕಿದ ಕಲೆ. ಯಾವುದೇ ದೇವತಾ ಕಾರ್ಯ ಯಕ್ಷಗಾನವಿಲ್ಲದಿದ್ದರೆ ಅದು ಅಪೂರ್ಣ. ದೊಂಡೋಲೆ ಮನೆಯ ಸಾಂಗತ್ಯ, ಕುಟುಂಬದ ಎಲ್ಲರೂ ಸೇರಿ ದೇವತಾ ಕಾರ್ಯದಲ್ಲಿ ಭಾಗವಹಿಸುವುದು, ಅವರ ಆತ್ಮೀಯತೆ ಎಲ್ಲರಿಗೂ ಮಾದರಿಯಾಗುವಂತಿದೆ. ಯಕ್ಷಗಾನ ಕಲೆಗೆ ಸರ್ವಸ್ವವನ್ನು ಮುಡಿಪಾಗಿರಿಸಿ, ಸಮರ್ಪಿಸಿಕೊಂಡ ಹಿರಿಯ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿ ಸುತ್ತಿರುವುದು ಔಚಿತ್ಯಪೂರ್ಣ ಎಂದು ನುಡಿದು ಶುಭ ಹಾರೈಸಿದರು.
ಯಕ್ಷಗಾನ ಕಲಾವಿದರ ಸನ್ಮಾನ :ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದ ರಾದ ಎಂ.ಜಿ.ಶ್ರೀಧರ ರಾವ್ ಮುಂಡ್ರು ಪ್ಪಾಡಿ ಮತ್ತು ಲೀಲಾ ರುಕ್ಮಿಣಿ ದಂಪತಿ ಹಾಗೂ ಯಕ್ಷಗಾನ ಅರ್ಥಧಾರಿ, ವಾಸ್ತುತಜ್ಞ ಬೆಳಾಲು ರಾಜಾರಾಮ ಶರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಶ ಕುದ್ರೆನ್ತಯ ಮತ್ತು ಜನಾರ್ದನ ತೋಳ್ಪಡಿತ್ತಾಯ ಸನ್ಮಾನಿತರನ್ನು ಅಭಿನಂದಿಸಿದರು.
ಕಮಲಾ ಸೂರ್ಯನಾರಾಯಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪುರಂದರ ರಾವ್ ಸ್ವಾಗತಿಸಿ, ಪ್ರಸ್ತಾವಿಸಿದರು. ರವೀಂದ್ರ ರಾವ್, ಸೀತಾರಾಮ ತೋಳ್ಪಡಿತ್ತಾಯ, ವೆಂಕಟ್ರಮಣ ರಾವ್ ಬನ್ನೆಂಗಳ ಮೊದಲಾದವರು ಉಪಸ್ಥಿತರಿದ್ದರು.
ಅಭಯ ಕಾರಂತ್ ಪ್ರಾರ್ಥಿಸಿದರು. ಶಂಕರ ರಾಮ ರಾವ್, ಸೂ ರ್ಯನಾರಾಯಣ ರಾವ್, ನಾಗೇಶ್ ಪಿ.ರಾವ್, ಅಜಯ ರಾವ್, ಅಶೋಕ ರಾವ್, ಅರವಿಂದ ರಾವ್, ರಾಜಾರಾಮ ಕಾರಂತ ಮತ್ತು ಮನೆಯವರು ಸಹಕರಿಸಿದರು. ನಿಶಾಂತ ಹೊಳ್ಳ ಮತ್ತು ದಾಮೋದರ ದೊಂಡೋಲೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂದೇಶ ರಾವ್ ವಂದಿಸಿದರು.ರಾತ್ರಿ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಭಕ್ತ ಮಯೂರಧ್ವಜ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಧರ್ಮಸ್ಥಳ ಸನಿಹದ ದೊಂಡೋಲೆ ಮನೆಯ 74 ನೇ ವರ್ಷದ ಗಜಾನನ