ಕೋಲಾರದಲ್ಲಿ 77ನೇ ಗಣರಾಜ್ಯೋತ್ಸವ: ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆ

KannadaprabhaNewsNetwork |  
Published : Jan 25, 2026, 01:15 AM IST
24ಎಸ್‌ವಿಆರ್‌03ಪೋಟೋ ಶೀರ್ಷಿಕೆ 24ಎಸ್‌ವಿಆರ್‌03ಸವಣೂರ ಪಟ್ಟಣದಲ್ಲಿ ಶನಿವಾರ ನಡೆದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ. ಹಜರತಸಾಹೇಬ ಇಮಾಮಸಾಹೇಬ ತಿಮ್ಮಾಪೂರ ಅವರ ಮೆರವಣಿಗೆಗೆ ಶಾಸಕ ಯಾಸೀರಅಹ್ಮದಖಾನ ಪಠಾಣ ಕನ್ನಡ ಧ್ವಜ ತೋರುವ ಮೂಲಕ ಚಾಲನೆ ನೀಡಿದರು.   ಪೋಟೋ ಶೀರ್ಷಿಕೆ 24ಎಸ್‌ವಿಆರ್‌03ಅಸವಣೂರು ಪಟ್ಟಣದಲ್ಲಿ ಶನಿವಾರ ನಡೆದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ನಂದಿಕೋಲು ಕುಣಿತ ಹಾಗೂ ಸಮಾಳ ವಾದ್ಯ. | Kannada Prabha

ಸಾರಾಂಶ

77ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕ ಸಾಧಕರನ್ನು ಗೌರವಿಸಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಕೋಲಾರಜ. 26ರಂದು ನಡೆಯುವ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕ ಸಾಧಕರನ್ನು ಗೌರವಿಸಲು ನಿರ್ಧರಿಸಿದೆ. ವಿವಿಧ ಇಲಾಖೆಗಳಿಂದ ಶಿಫಾರಸು ಮಾಡಲಾದ ಅರ್ಹ ಸಾಧಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.ನಗರ ಸ್ವಚ್ಛತಾ ಸೇವೆ ಮತ್ತು ಪೌರಕಾರ್ಮಿಕರು:ನಗರದ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ ಗುರುತಿಸಿದೆ.ವಿ.ಕುಮಾರ್ (ಸ್ಯಾನಿಟರಿ ಸೂಪರ್‌ವೈಸರ್, ಕೋಲಾರ): ಪ್ರತಿನಿತ್ಯ ತ್ಯಾಜ್ಯ ವಿಲೇವಾರಿ ಹಾಗೂ ಸಾರ್ವಜನಿಕರಲ್ಲಿ ತ್ಯಾಜ್ಯ ವಿಂಗಡಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಕೆ.ವಿ. ರಾಜಣ್ಣ (ಕೋಲಾರ) ಮತ್ತು ಶ್ರೀ ಶ್ರೀನಿವಾಸ್ (ಕೆ.ಜಿ.ಎಫ್): ಇವರು ಮನೆ ಮನೆಯಿಂದ ತ್ಯಾಜ್ಯ ಶೇಖರಣೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವಿ.ಶ್ರೀನಿವಾಸ್ (ಮುಳಬಾಗಿಲು) ಮತ್ತು ಶ್ರೀ ಎಂ. ರಾಜು (ಮಾಲೂರು): ಕ್ರಮವಾಗಿ ವಾರ್ಡ್ ಸಂಖ್ಯೆ 03 ಮತ್ತು 22 ರಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಗಾಗಿ ಶ್ರಮಿಸುತ್ತಿದ್ದಾರೆ.ಕ್ರೀಡಾ ಕ್ಷೇತ್ರದ ಸಾಧಕರು:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.ಜಿ.ಮುನಿಕೃಷ್ಣ: ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಭೂಮಿಕಾ ಬಿ. (ಮಾಲೂರು): ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಸಾಗರ್ ಎಸ್.ಎಸ್.: ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಫೆಬ್ರವರಿಯಲ್ಲಿ ಅಬುಧಾಬಿಯಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.ಆರೋಗ್ಯ ಸೇವೆ ಮತ್ತು ಮಾನವೀಯತೆ:ಎಂ.ಕೆ.ಸುರೇಶ್ (ಫಾರ್ಮಸಿ ಅಧಿಕಾರಿ): ಜಿಲ್ಲಾ ಆರೋಗ್ಯ ಇಲಾಖೆಯಲ್ಲಿನ ನಿರಂತರ ಮತ್ತು ಉತ್ತಮ ಸೇವೆಗಾಗಿ ಇವರನ್ನು ಗುರುತಿಸಲಾಗಿದೆ.ನಾರಾಯಣಸ್ವಾಮಿ (ಮುಳಬಾಗಿಲು): ವಾಹನ ಚಾಲಕರಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಜಾವಲಿನ್ ಎಸೆತದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.ಅಂಗಾಂಗ ದಾನದ ಗೌರವ: ಮರಣೋತ್ತರ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ನಾಗನಾಳದ ಶಿಲ್ಪಾ ಕುಟುಂಬ ಸದಸ್ಯರಿಗೆ ಸಾರ್ವಜನಿಕವಾಗಿ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು.ಸಾರಿಗೆ ಸಂಸ್ಥೆಯ ಸರ್ವೋತ್ತಮ ಚಾಲಕ ಪ್ರಶಸ್ತಿ:ಕೆ.ಎಸ್.ಆರ್.ಟಿ.ಸಿ ಕೋಲಾರ ವಿಭಾಗದ ಚಾಲಕರನ್ನು ಅವರ ಅಪಘಾತ ರಹಿತ ಮತ್ತು ಸುದೀರ್ಘ ಸೇವೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಎನ್.ರವಿಕುಮಾರ್ (ಕೋಲಾರ): 29 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ಈ ಹಿಂದೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದಿದ್ದಾರೆ.ಸಾಧಕ ಚಾಲಕರು:ಸಿ.ಗೋಪಾಲ ಕೃಷ್ಣ ರೆಡ್ಡಿ (ಕೋಲಾರ), ಕೆ.ನಾಗರಾಜು (ಕೆ.ಜಿ.ಎಫ್), ನರೇಂದ್ರ ಕುಮಾರ್ ಡಿ. (ಕೆ.ಜಿ.ಎಫ್). ಡಿ. ವೆಂಕಟರಾಮ (ಶ್ರೀನಿವಾಸಪುರ). ಎಸ್.ಡಿ.ನಾರಾಯಣಸ್ವಾಮಿ (ಮಾಲೂರು) ಮತ್ತು ದಶರಥ (ಮುಳಬಾಗಿಲು).ಎನ್.ಸಿ.ಸಿ (10 ಕರ್ನಾಟಕ ಬೆಟಾಲಿಯನ್):ಎನ್.ಸಿ.ಸಿ ವಿಭಾಗದಲ್ಲಿ ಶಿಸ್ತು ಮತ್ತು ಕರ್ತವ್ಯ ನಿಷ್ಠೆ ಮೆರೆದ ಸಿಬ್ಬಂದಿ ಹಾಗೂ ಕೆಡೆಟ್‌ಗಳನ್ನು ಪುರಸ್ಕರಿಸಲಾಗುತ್ತಿದೆ.ಸಿಬ್ಬಂದಿ: ಸುಬೇದಾರ್ ಜಗದಾಲೆ ಕೆ.ಬಿ., ಹವಿಲ್ದಾರ್ ಮೊಬಿನ್, ಎಂ.ರಾಜನ್, ವಿಶ್ವನಾಥ್.ಕೆ, ಮೊಹಮ್ಮದ್ ಹಿದಾಯತ್ ಉಲ್ಲಾ (ಸೂಪರಿಂಟೆಂಡೆಂಟ್), ಹರ್ಷಿತ್ ಗಾಂಧಿ ವಿ.ಎಸ್. ಮತ್ತು ಆನಂದ್ ರಾಜ್ ಕುಮಾರ್.ಅಧಿಕಾರಿಗಳು ಮತ್ತು ಕೆಡೆಟ್‌ಗಳು:ಎ.ಎ.ಒಗಳಾದ ಮಾರಿಯಾ ಸಿಂಥಿಯಾ ಎಸ್. ಹಾಗೂ ಕುಮಾರ ಎಂ., ಮತ್ತು ಕೆಡೆಟ್‌ಗಳಾದ ಅವಿನಾಶ್ ಎಸ್. (ಶೂಟಿಂಗ್) ಮತ್ತು ಹರಣಿ ಆರ್. (ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ).ಈ ಎಲ್ಲಾ ಸಾಧಕರಿಗೆ ಜ. 26ರಂದು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!