ರಾಜ್ಯ ಪೊಲೀಸರಿಗೆ 3 ಚಿನ್ನ ಸೇರಿ 8 ಪದಕ

KannadaprabhaNewsNetwork |  
Published : Feb 22, 2024, 01:49 AM ISTUpdated : Feb 22, 2024, 12:51 PM IST
Karnataka Police

ಸಾರಾಂಶ

ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ರಾಷ್ಟ್ರಮಟ್ಟದ 67ನೇ ಅಖಿಲ ಭಾರತ ಪೊಲೀಸ್‌ ಕರ್ತವ್ಯ ಕೂಟದಲ್ಲಿ ರಾಜ್ಯ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ, ಟ್ರೋಫಿ ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ರಾಷ್ಟ್ರ ಮಟ್ಟದ 67ನೇ ಅಖಿಲ ಭಾರತ ಪೊಲೀಸ್‌ ಕರ್ತವ್ಯ ಕೂಟದಲ್ಲಿ ರಾಜ್ಯ ಪೊಲೀಸ್‌ ಅಧಿಕಾರಿಗಳು-ಸಿಬ್ಬಂದಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೂರು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಸೇರಿದಂತೆ ಟ್ರೋಫಿಗಳನ್ನು ಗೆದ್ದಿದ್ದಾರೆ.

ಪಿಎಸ್‌ಐ ಎಂ.ಆರ್‌.ಹರೀಶ್‌- ಫೊರಾನ್ಸಿಕ್‌ ರಿಟನ್ ಟೆಸ್ಟ್‌-ಚಿನ್ನ, ಕಾನ್ಸ್‌ಟೇಬಲ್‌ ಎಸ್‌.ಆರ್‌.ವಿನೋದ್‌ರಾಜ್‌- ಅಬ್ಸರ್ವೆಷನ್‌ ಟೆಸ್ಟ್‌-ಚಿನ್ನ, ಹೆಡ್‌ಕಾನ್ಸ್‌ಟೇಬಲ್‌ ಜಿ.ವಿ.ವೆಂಕಟೇಶಪ್ಪ- ಆ್ಯಂಟಿ ಸಾಬೋಟೇಜ್‌ ವೆಹಿಕಲ್‌ ಸರ್ಚ್‌-ಚಿನ್ನ, ಪಿಎಸ್‌ಐ ಪ್ರಕಾಶ್‌ ದಂಬಾಳ್‌- ಹ್ಯಾಡ್ಲಿಂಗ್‌, ಲಿಫ್ಟಿಂಗ್‌ ಆ್ಯಂಡ್‌ ಪ್ಯಾಕಿಂಗ್‌-ಬೆಳ್ಳಿ

ಎಪಿಸಿ ತುಕಾರಾಮ್‌ ಜಮಾದಾರ್‌ - ಎಕ್ಸ್‌ಪ್ಲೋಸೀವ್‌ ಡೆಟೆಕ್ಷನ್‌ (ಡಾಗ್‌)-ಬೆಳ್ಳಿ, ಎಪಿಸಿ ರಂಗಪ್ಪ ಉಪ್ಪಾರ್‌- ಟ್ರಾಕರ್‌(ಡಾಗ್‌) -ಕಂಚು, ಎಆರ್‌ಎಸ್‌ಐ ಬಿ.ಗಿರೀಶ್‌- ಪೊಲೀಸ್‌ ಫೋಟೋಗ್ರಫಿ- ಕಂಚು ಹಾಗೂ ಎಎಸ್‌ಐ ಎನ್‌.ಶ್ರೀನಾಥ್‌- ಪೊಲೀಸ್‌ ವಿಡಿಯೋಗ್ರಫಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಟ್ರೋಫಿ ವಿಜೇತರು: ಎಆರ್‌ಎಸ್ಐ ಬಿ.ಕೆ.ಅಜ್ಜಯ್ಯ- ಪೊಲೀಸ್‌ ವಿಡಿಯೋಗ್ರಫಿ ವಿನ್ನರ್‌ ಟ್ರೋಫಿ, ಎಎಚ್‌ಸಿ ಡ್ಯಾನಿಯಲ್‌ ಡಿಸೋಜಾ- ಪೊಲೀಸ್‌ ಫೊಟೋಗ್ರಫಿ- ರನ್ನರ್‌ ಟ್ರೋಫಿ, ಎಪಿಸಿ ಆನಂದ ನಾಯಕ್‌- ಎಕ್ಸ್‌ಪ್ಲೋಸೀವ್‌ ಡಾಗ್‌ ಸ್ಕ್ವಾಡ್‌ ರನ್ನರ್‌ ಟ್ರೋಫಿ, ಎಪಿಸಿ ಪ್ರವೀಣ್‌ ಮೇತ್ರಿ- ಟ್ರಾಕಿಂಗ್‌ ಡಾಗ್‌ ಸ್ಕ್ವಾಡ್‌ ರನ್ನರ್‌ ಟ್ರೋಫಿ, ಎಎಚ್‌ಸಿ ಕೆ.ಪುರುಷೋತ್ತಮ್‌- ನಾರ್ಕೊಟಿಕ್‌ ಡಾಗ್ ಸ್ಕ್ವಾಡ್‌ ರನ್ನರ್‌ ಟ್ರೋಫಿ ಹಾಗೂ ಎಪಿಸಿ ಸಂಜೀವ ಭೀಮಪ್ಪ ನಾಯಕ್‌- ನಾರ್ಕೊಟಿಕ್‌ ಡಾಗ್‌ ಸ್ಕ್ವಾಡ್‌ ರನ್ನರ್‌ ಟ್ರೋಫಿ ಗೆದ್ದಿದ್ದಾರೆ.

ಪದಕ ವಿಜೇತರಿಗೆ ನಗದು ಬಹುಮಾನಕ್ಕೆ ಶಿಫಾರಸು: ಕರ್ತವ್ಯ ಕೂಟದಲ್ಲಿ ಪದಕ ಸಾಧನೆ ಮಾಡಿರುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗದು ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. 

ಚಿನ್ನ ವಿಜೇತರಿಗೆ 3 ಲಕ್ಷ ರು., ಬೆಳ್ಳಿ ವಿಜೇತರಿಗೆ 2 ಲಕ್ಷ ರು. ಹಾಗೂ ಕಂಚು ವಿಜೇತರಿಗೆ 1 ಲಕ್ಷ ರು. ಮಂಜೂರು ಮಾಡಲು ಶಿಫಾರಸು ಮಾಡಲಾಗುವುದು. 

ಈ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಧನೆಯನ್ನು ಶ್ಲಾಘಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ 2 ಲಕ್ಷ ರು. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ