- ವಿಚಾರಣೆ ಬಾಕಿ ಇದ್ದ 1794, ವ್ಯಾಜ್ಯ ಪೂರ್ವ 85190 ದಾವೆಗಳ ಪ್ರಕರಣ - - - ಕನ್ನಡಪ್ರಭ ವಾರ್ತೆ ಹರಿಹರ
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 338 ಪ್ರಕರಣಗಳಲ್ಲಿ, 27 ವ್ಯಾಜ್ಯ ಪೂರ್ವದ 173ರಲ್ಲಿ 1 ಪ್ರಕರಣವು ರಾಜಿ ಸಂಧಾನ ಯಶಸ್ವಿಯಾಗಿದೆ. ಒಟ್ಟು ₹8824776 ಪರಿಹಾರ ಕೊಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 935 ಪ್ರಕರಣಗಳಲ್ಲಿ 852 ವ್ಯಾಜ್ಯ ಪೂರ್ವದ 28978 ರಲ್ಲಿ 28407 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹57324 956 ಪರಿಹಾರ ಕೊಡಿಸಲಾಗಿದೆ.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 610 ಪ್ರಕರಣಗಳಲ್ಲಿ 555 ವ್ಯಾಜ್ಯ ಪೂರ್ವದ ಎಲ್ಲ 28391 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹56767575 ಪರಿಹಾರ ಕೊಡಿಸಲಾಗಿದೆ.2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 423 ಪ್ರಕರಣಗಳಲ್ಲಿ 360 ವ್ಯಾಜ್ಯ ಪೂರ್ವದ ಎಲ್ಲಾ 28391 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹55953773 ಪರಿಹಾರ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಧೀಶರಾದ ಪಕ್ಕೀರಮ್ಮ ಕೆಳಗೇರಿ, ಜ್ಯೋತಿ ಅಶೋಕ ಪತ್ತಾರ, ವೀಣಾ ಕೋಳೇಕರ ಮತ್ತು ಹಿರಿ-ಕಿರಿಯ ವಕೀಲರು, ಕಕ್ಷಿದಾರರು ಉಪಸ್ಥಿತರಿದ್ದರು. - - - -೧೮ಎಚ್ಆರ್ಆರ್೩:ಲೋಕ್ ಅದಾಲತ್ ನಿಮಿತ್ತ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಪ್ರಕರಣಗಳ ರಾಜಿ ಸಂಧಾನ ಪ್ರಕ್ರಿಯೆ ಜರುಗಿತು.