ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜುಗೂಳ ಸಹಕಾರ ಸಂಘಕ್ಕೆ ₹90.54 ಲಕ್ಷ ಲಾಭ

KannadaprabhaNewsNetwork | Published : Sep 12, 2024 1:58 AM

ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರು, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿವೆ ಎಂದು ಸಂಘದ ಅಧ್ಯಕ್ಷ, ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರು, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿವೆ ಎಂದು ಸಂಘದ ಅಧ್ಯಕ್ಷ, ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಹೇಳಿದರು.

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 105ನೇ ವರ್ಷದ ವಾರ್ಷಿಕ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಘಕ್ಕೆ ₹90.54 ಲಕ್ಷ ನಿವ್ಹಳ ಲಾಭವಾಗಿದ್ದು, ಸದಸ್ಯರಿಗೆ ಶೇ.16ರಷ್ಟು ಲಾಭಾಂಶ ಹಂಚಲಾಗಿದೆ. ಕಾಗವಾಡ ತಾಲೂಕಿನಲ್ಲೇ ಅತೀ ಹೆಚ್ಚು ಲಾಭ ಗಳಿಸಿರುವುದರ ಜೊತೆಗೆ ಅತೀ ಹೆಚ್ಚು ಲಾಭಾಂಶ ಹಂಚಿದ್ದೇವೆಂದರು. ಬೆಳೆ ಸಾಲಗಾರ ಸದಸ್ಯರು ಯಾವುದಾದರೂ ಅಫಘಾತದಲ್ಲಿ ಮರಣಹೊಂದಿದರೆ ₹3 ಲಕ್ಷ ವಿಮೆ ಮಾಡಲಾಗಿದ್ದು, ಸಾಲಗಾರರಲ್ಲದ ಹಾಗೂ ಸಾಲಗಾರ ಸದಸ್ಯರಿಗೆ ₹1 ಲಕ್ಷ ವಿಮೆ ಮಾಡಲಾಗಿದ್ದು, ಇಂದಿನಿಂದಲೇ ಈ ಯೋಜನೆ ಜಾರಿಯಾಗಿದೆ ಎಂದರು.ಸಂಘದಲ್ಲಿ ₹46.57 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹29.90 ಕೋಟಿ ಸಾಲ ವಿತರಿಸಲಾಗಿದ್ದು, ₹26.97 ಕೋಟಿ ಠೇವು ಸಂಗ್ರಹಿಸಿ, ₹1.98 ಕೋಟಿ ಷೇರು ಬಂಡವಾಳ, ಸ್ವಂತ ನಿಧಿಗಳು ₹4.45 ಕೋಟಿ ಹೊಂದಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ₹37.66 ಲಕ್ಷ, ರೈತರಿಗೆ ಶೇ.10 ಬಡ್ಡಿ ದರದಲ್ಲಿ ₹16.67 ಲಕ್ಷ ಗೊಬ್ಬರ ಸಾಲ ನೀಡಲಾಗಿದೆ. ಶೇ.97.90ರಷ್ಟು ಬೆಳೆಸಾಸಲ ಹಾಗೂ ಶೇ.93.37ರಷ್ಟು ಬಿಡಿಪಿ ಸಾಲ ವಸೂಲಾತಿ ಆಗಿದೆ ಎಂದರು.ರವೀಂದ್ರ ಪಾಟೀಲ, ಕಲಗೌಡ ಪಾಟೀಲ, ವಿರಾಜ ಪಾಟೀಲ, ಭಾಸ್ಕರ ಬಾಳಿಕಾಯಿ, ಅಜೀತ ನಾಂದನಿ, ಆನಂದ ಹೆರವಾಡೆ ಅವರನ್ನು ಸನ್ಮಾನಿಸಲಾಯಿತು.ಅನೀಲ ಕಡೋಲೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯಕಾರ್ಯನಿರ್ವಾಹಕ ಚಿದಾನಂದ ಬೆಡಕಿಹಾಳೆ ವರದಿ ಓದಿ ಸದಸ್ಯರಿಂದ ಒಪ್ಪಿಗೆ ಪಡೆದರು. ಇದೇ ವೇಳೆ ಸಂಘದ ಉಪಾಧ್ಯಕ್ಷ ಶಿವಗೌಡ ಪಾಟೀಲ, ನಿರ್ದೇಶಕರಾದ ಬಾಬಗೌಡ ಪಾಟೀಲ, ಶಿವಾನಂದ ಕಡೋಲೆ, ಈರಗೌಡ ಪಾಟೀಲ, ಮಾಲತಿ ಪಾಟೀಲ, ಸೇವಂತಿ ಶಮನೇವಾಡಿ, ಚಿದಾನಂದ ಮಿನಚೆ, ಆಧಿನಾಥ ಮಗದುಮ್, ಕುಸುಮ ಯಮಕನಮರಡಿ, ದೀಪಕ ಬಾಬಾಸಾಬ ಪಾಟೀಲ, ಮಚ್ಚೆಂದ್ರ ಗಸ್ತಿ, ಮಹಮ್ಮದ್‌ರಫೀಕ್ ಮುಜಾವರ, ಪ್ರಗತಿಪರ ರೈತರಾದ, ಕಾಕಾಸಾಬ ಪಾಟೀಲ, ರವೀಂದ್ರ ವ್ಹಾಂಟೆ, ರಾಜೇಂದ್ರ ಕಡೋಲೆ, ಬಿ.ಐ. ಪಾಟೀಲ,ಶಿವಾನಂದ ಶಮನೇವಾಡಿ, ಸುರೇಶ ಪಾಟೀಲ, ಸುಧಾಕರ ಗಣೇಶವಾಡಿ, ರಾಜು ಕಡೋಲಿ ಸುಧಾಕರ ಗಣೇಶವಾಡಿ, ಬಾಬುರಾವ್ ಜಾಧವ, ಜಯಪಾಲ ಯಮಕನಮರಡಿ, ಶ್ರೀಕಾಂತ ದೇಸಾಯಿ, ಮಲಗೌಡ ಪಾಟೀಲ, ತಾತ್ಯಾಸಾಬ ಪಾಟೀಲ, ಬಸಗೌಡ ಪಾಟೀಲ ಇತರರು ಇದ್ದರು.