ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಡಸೂರು ಬಸವಣ್ಣಪ್ಪ ವೇದಿಕೆಯಲ್ಲಿ ಜರುಗುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆ 9 ಗಂಟೆಗೆ ಶ್ರೀ ರಂಗನಾಥ ದೇವಸ್ಥಾನದಿಂದ ಡಾ. ರಾಜ್ ರಂಗಮಂದಿರವರೆಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಭುವನೇಶ್ವರಿದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೆರವಣಿಗೆಗೆ ಚಾಲನೆ ನೀಡುವರು. "ಬೆಳಗ್ಗೆ 11 ಗಂಟೆಗೆ ನಡೆಯುವ ಗೋಷ್ಠಿ-1ರಲ್ಲಿ "ಸಮ್ಮೇಳನ ಅಧ್ಯಕ್ಷರ ಬದುಕು ಮತ್ತು ಹೋರಾಟ " ಕುರಿತು ಚಿಂತನಾಗೋಷ್ಠಿ ನಡೆಯಲಿದೆ. ಲೇಖಕ, ಉಪನ್ಯಾಸಕ ಸರ್ಫ್ರಾಜ್ ಚಂದ್ರಗುತ್ತಿ ಉಪನ್ಯಾಸ ನೀಡುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿಶ್ವನಾಥ್ ಕಾನಡೆ ಅಧ್ಯಕ್ಷತೆ ವಹಿಸುವರು. ಗೌರವ ಉಪಸ್ಥಿತಿಯಲ್ಲಿ ದತ್ತಿದಾನಿಗಳಾದ ಬಿ.ವೈ. ಬಂಡಿವಡ್ಡರ್, ಮಲ್ಲಿಕಾರ್ಜುನ ನಿಜಗುಣ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ಚರಾಯಪ್ಪ, ಜಿಪಂ ಮಾಜಿ ಸದಸ್ಯೆ ಕೆ.ಜಿ. ಲೋಲಾಕ್ಷಮ್ಮ, ಮಹಾದೇವಿ ಶಿವಮೊಗ್ಗ, ಕೋಡ್ಲುಯಜ್ಞಯ್ಯ ಭದ್ರಾವತಿ ಭಾಗವಹಿಸುವರು.
ಮಧ್ಯಾಹ್ನ 1 ಗಂಟೆಯ ಗೋಷ್ಠಿ-3ರಲ್ಲಿ ಕವಿಗೋಷ್ಠಿ- ಕವಿ ಸಮಯದಲ್ಲಿ ತಾಲೂಕಿನ ಉದಯೋನ್ಮುಖ ಕವಿಗಳಿಂದ ಸ್ವರಚಿತ ಕವನ ವಾಚನ ಇರುತ್ತದೆ. ಡಾ. ಅಜಿತ್ ಹೆಗಡೆ ಹರೀಶಿ ಅಧ್ಯಕ್ಷತೆ ವಹಿಸುವರು. ರೇಣುಕಮ್ಮ ಗೌಳಿ, ಸಂಜಯ ಡೋಂಗ್ರೆ, ಶಂಕರ್ ಶೇಟ್, ನಾಗರಾಜ ಗುತ್ತಿ, ಎಚ್.ಎಸ್. ರಘು ಶಿಕಾರಿಪುರ, ವಿ.ಟಿ. ಸ್ವಾಮಿ ಸಾಗರ ಭಾವಹಿಸುವರು.
ಸಮಾರೋಪ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ವಿಶೇಷ ಆಹ್ವಾನಿತರಾಗಿ ಭಾವಹಿಸುವರು. ಜಿಲ್ಲಾಧ್ಯಕ್ಷ ಡಿ. ಮಂಜುನಾಥ, ಕಸಾಪ ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಸಾಹಿತಿಗಳು ಭಾಗವಹಿಸುವರು ಎಂದು ತಿಳಿಸಿದರು.
- - - ಬಾಕ್ಸ್ ಸಮ್ಮೇಳನಾಧ್ಯಕ್ಷ ಟಿ.ರಾಜಪ್ಪ ಮಾಸ್ತರ್ ಪರಿಚಯಸಾಮಾಜಿಕ ಚಳವಳಿಯ ಮೂಲಕ ಹೋರಾಟದ ನೆಲೆ ಕಂಡುಕೊಂಡ ಟಿ. ರಾಜಪ್ಪ ಮಾಸ್ತರ್ ಸೊರಬ ತಾಲೂಕಿನ ಬೊಮ್ಮನಹಳ್ಳಿಯವರು. 1954ರಲ್ಲಿ ಬಂಗಾರಮ್ಮ, ಮಂಚಪ್ಪ ದಂಪತಿ ಪುತ್ರರಾಗಿ ಜನಿಸಿ, ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಕುಪ್ಪಗಡ್ಡೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಮುಗಿಸಿದರು. 1970ರಲ್ಲಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮೆಟ್ರಿಕ್ ಶಿಕ್ಷಣದಲ್ಲಿ ತೇರ್ಗಡೆ ಹೊಂದಿದರು. ಶಿವಮೊಗ್ಗ ಡಿ.ವಿ.ಎಸ್. ಕಾಲೇಜಿನಲ್ಲಿ ಪದವಿಪೂರ್ವ, ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ, ನ್ಯಾಷನಲ್ ಕಾಲೇಜಿನಲ್ಲಿ ಬಿ.ಇಡಿ. ಶಿಕ್ಷಣ ಪಡೆದರು.
ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅಸಮಾನತೆ ತೊಡೆಯುವ ನಿಟ್ಟಿನಲ್ಲಿ ಹಲವಾರು ಚಳವಳಿಗಳ ನಡೆಸಿದ್ದಾರೆ. 1984ರಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಿಗೆ ಭಕ್ತರು ಸಲ್ಲಿಸುತ್ತಿದ್ದ ಬೆತ್ತಲೆಸೇವೆ ವಿರುದ್ಧ ಚಳವಳಿ ನಡೆಸಿದ್ದರ ಫಲವಾಗಿ ಇಂದು ಅನಿಷ್ಠ ಪದ್ಧತಿ ನಿಷೇಧಗೊಂಡಿದೆ. ಬಗರ್ಹುಕುಂ, ಹಾಲಕ್ಷತ್ರಿಯ ಮೀಸಲಾತಿ, ಮಂಡಲ ವರದಿ ಸೇರಿದಂತೆ ಇನ್ನಿತರ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ.
- - - -07ಕೆಪಿಸೊರಬ01: