ನೀರಿಗಾಗಿ ಅಲೆದು ನಿತ್ರಾಣಗೊಂಡು ಕುಸಿದು ಬಿದ್ದ ಮರಿಆನೆ

KannadaprabhaNewsNetwork |  
Published : Apr 07, 2024, 01:51 AM IST
6ಕೆಆರ್ ಎಂಎನ್‌ 11.ಜೆಪಿಜಿನಿತ್ರಾಣಗೊಂಡಿದ್ದ ಮರಿ ಆನೆ | Kannada Prabha

ಸಾರಾಂಶ

ಕನಕಪುರ: ನೀರಿಗಾಗಿ ಅಲೆದಲೆದು ನಿತ್ರಾಣಗೊಂಡಿದ್ದ ಮರಿ ಆನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಅಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ.

ಕನಕಪುರ: ನೀರಿಗಾಗಿ ಅಲೆದಲೆದು ನಿತ್ರಾಣಗೊಂಡಿದ್ದ ಮರಿ ಆನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಅಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ. ಕನಕಪುರ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯ ಬೆಟ್ಟಹಳ್ಳಿ ಕೂತಗಳೆ ಗ್ರಾಮದ ಚನ್ನೇಗೌಡರ ಜಮೀನಿನ ಪಕ್ಕದ ಅರಣ್ಯ ಪ್ರದೇಶಕ್ಕೆ ಆಹಾರ ಅರಸಿ ಜಮೀನಿನ ಬಳಿ ಬಂದಿದೆ. ನೀರು ಕೂಡ ಸಿಗದ ಕಾರಣ ನಿತ್ರಾಣಗೊಂಡು ಆನೆ ಮರಿ ಬಿದ್ದಿದೆ. ನಿತ್ರಾಣಗೊಂಡ ಆನೆ ಮರಿಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನೀರು ಕುಡಿಸಿ ಉಪಚರಿಸಿದ್ದಾರೆ. ನೀರು ಕುಡಿದ ಬಳಿಕ‌ ನಿಧಾನವಾಗಿ ಕಾಡೆನೆಡೆ ಮರಿ ಆನೆ ತೆರಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ