- ಸಾವಿತ್ರಿ ಬಾಯಿ, ಶೇಖ್ ಪಹಾನ್ ಮಸೂದ್ ನಿವಾಸಗಳಲ್ಲಿ ಕೃತ್ಯ - - - ಹರಿಹರ: ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ, ಇಂಟರ್ಲಾಕ್ ಮುರಿದು ಒಟ್ಟು ₹೮.೯ ಲಕ್ಷ ಮೌಲ್ಯದ ವಸ್ತುಗಳ ಕಳವು ಮಾಡಿರುವ ಎರಡು ಪ್ರತ್ಯೇಕ ಘಟನೆ ಗಾಂಧಿ ನಗರದಲ್ಲಿ ಶುಕ್ರವಾರ ನಡೆದಿವೆ.
ಇನ್ನೊಂದು ಪ್ರಕರಣದಲ್ಲಿ ೬ ತಿಂಗಳಿಂದ ಹರಿಹರದಲ್ಲಿ ವಾಸವಿರುವ ಶಿವಮೊಗ್ಗ ಜಿಲ್ಲೆ ಆನಂದಪುರದ ಶೇಖ್ ಪಹಾನ್ ಮಸೂದ್ ಅವರ ಪತ್ನಿ ಜೈಭೀಮನಗರದ ತವರು ಮನೆಗೆ ಹೋಗಿದ್ದರು. ಶುಕ್ರವಾರ ರಾತ್ರಿ ೯ ಗಂಟೆಗೆ ಗಾಂಧಿನಗರದ ೧ನೇ ಮೇನ್, ೪ನೇ ಕ್ರಾಸ್ನಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ತವರಿಗೆ ಹೋಗಿದ್ದರು. ಪತ್ನಿಯೊಂದಿಗೆ ಬೆಳಗ್ಗೆ ೯-೩೦ ಗಂಟೆಗೆ ಮನೆಗೆ ವಾಪಾಸ್ ಬಂದಾಗ ಮನೆಯ ಅರ್ಧ ಬಾಗಿಲು ತೆರೆದಿದ್ದು ಕಂಡುಬಂದಿಎ. ಬಾಗಿಲ ಚಿಲಕ, ಇಂಟರ್ಲಾಕ್ ಮುರಿದು, ಕಳ್ಳರು ಮನೆಯೊಳಗೆ ನುಗ್ಗಿದ್ದರು. ಪರಿಶೀಲಿಸಿದಾಗ, ಬೀರುವಿನಲ್ಲಿದ್ದ ₹೧.೧೭ ಲಕ್ಷ ಮೌಲ್ಯದ ೨೪ ಗ್ರಾಂ ತೂಕದ ಬಂಗಾರದ ಆಭರಣ ಮತ್ತು ₹೫,೧೦೦ ಮೌಲ್ಯದ ೧೦೦ ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಜೊತೆಗೆ ₹೧೫,೦೦೦ ನಗದು ಕಳ್ಳವು ಆಗಿರುವುದು ಗೊತ್ತಾಗಿದೆ.
ಎಎಸ್ಪಿ ಭೇಟಿ:ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎರಡೂ ಪ್ರಕರಣ ದಾಖಲಾಗಿವೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಮತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
- - - (ಸಾಂದರ್ಭಿಕ ಚಿತ್ರ)