ಕನ್ನಡಪ್ರಭ ವಾರ್ತೆ ಮಂಡ್ಯ
ಬುದನೂರು ಉತ್ಸವದಿಂದ ಹೊಸ ಬೂದನೂರಿನಲ್ಲಿ ಹೊಸ ಪರಂಪರೆ ಉದಯವಾಗಿದೆ. ಪ್ರವಾಸಿಗರಿಂದ ದೂರ ಉಳಿದಿದ್ದ ಬೂದನೂರಿನ ಶ್ರೀ ಕಾಶಿ ವಿಶ್ವನಾಥ ದೇವಾಲಯ ಹಾಗೂ ಸ್ವಾಮಿ ದೇವಾಲಯಗಳ ಕಲಾ ಸೊಬಗನ್ನು ಪರಿಚಯಿಸುವ ಪ್ರಯತ್ನದ ಫಲವಾಗಿ ಬೂದನೂರು ಉತ್ವವ ಆಯೋಜಿಸಲಾಗಿತ್ತು.
ಉತ್ಸವದ ಪ್ರಯುಕ್ತ ನಡೆದ ಸ್ಥಳೀಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಮಲ್ನಾಡ ಮೂಲೆನಾಗ ಇತ್ತೊಂದು ಸೋಮ್ನಹಳ್ಳಿ....ಚನ್ನಪ್ಪ ಚನ್ನೇಗೌಡ... ಸೇರಿದಂತೆ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದ್ದು ನೋಡುಗರನ್ನು ಆಕರ್ಷಿಸಿತು.ಗುರುದೇವ ಲಲಿತಾ ಅಕಾಡೆಮಿಯ ನೃತ್ಯ ಕಲಾವಿದೆ ನವ್ಯಶ್ರೀ ಪ್ರಸ್ತುತಪಡಿಸಿದ ಮಹಿಷಾಸುರ ಮರ್ದಿನಿ ಪ್ರಸಂಗದ ಭರತನಾಟ್ಯ ಮೆಚ್ಚುಗೆಗೆ ಪಾತ್ರವಾಯಿತು.
ಜೈ ಜೈ ಭಜರಂಗಿ..., ಒಂದು ಮಳೆಬಿಲ್ಲು, ತರವಲ್ಲ ತಗಿ ನಿನ್ನ ತಂಬೂರಿ.,, ನೀನೇ ರಾಜಕುಮಾರ.., ಕುಚಿಕು ಕುಚಿಕು...ಸೇರಿದಂತೆ ಹಲವಾರು ಹಾಡುಗಳು ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದವು.