ಕಾಡು ಪ್ರಾಣಿ ಬೇಟೆಗಾಗಿ ಇಟ್ಟಿದ್ದ ಸಿಡಿಮುದ್ದು ಸಿಡಿದು ಹಸುವಿಗೆ ತೀವ್ರ ಗಾಯ

KannadaprabhaNewsNetwork |  
Published : Jun 14, 2025, 02:31 AM IST
13ಕೆಎಂಎನ್ ಡಿ30,31 | Kannada Prabha

ಸಾರಾಂಶ

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಆಗಮಿಸಿ ಮೇಲಾಧಿಕಾರಿಗೆ ವಿಷಯ ತಿಳಿಸಿದರು. ಡಿವೈಎಸ್ಪಿಯೊಂದಿಗೆ ಶ್ವಾನದಳ ಹಾಗೂ ಬಾಂಬ್ ಪರಿಶೀಲನೆ ನಡೆಸಿದಾಗ ಮತ್ತೆರಡು ಕಡೆ ಸಿಡಿಮದ್ದು ಇಟ್ಟಿರುವುದು ಕಂಡು ಬಂತು. ಇದನ್ನು ವಶಕ್ಕೆ ಪಡೆದರು. ಸಿಡಿ ಮದ್ದು ಇಟ್ಟಿದ್ದ ಆರೋಪಿಗಳ ಶೋಧನೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಹಲಗೂರು: ಕಾಡು ಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಇಟ್ಟಿದ್ದ ಸಿಡಿ ಮದ್ದು ಸಿಡಿದು ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಚೌಡೇಗೌಡರ ಪುತ್ರ ಶಿವರಾಮ್ ಅವರ ಜಮೀನಿನಲ್ಲಿ ಅಪರಿಚಿತರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಮೂರು ಕಡೆ ಸಿಡಿಮದ್ದನ್ನು ಇಟ್ಟಿದ್ದರು. ಹಸು ಮೇವು ಮೇಯಲು ಹೋದಾಗ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿ ತೀವ್ರ ಗಾಯಗೊಂಡಿದೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಆಗಮಿಸಿ ಮೇಲಾಧಿಕಾರಿಗೆ ವಿಷಯ ತಿಳಿಸಿದರು. ಡಿವೈಎಸ್ಪಿಯೊಂದಿಗೆ ಶ್ವಾನದಳ ಹಾಗೂ ಬಾಂಬ್ ಪರಿಶೀಲನೆ ನಡೆಸಿದಾಗ ಮತ್ತೆರಡು ಕಡೆ ಸಿಡಿಮದ್ದು ಇಟ್ಟಿರುವುದು ಕಂಡು ಬಂತು. ಇದನ್ನು ವಶಕ್ಕೆ ಪಡೆದರು. ಸಿಡಿ ಮದ್ದು ಇಟ್ಟಿದ್ದ ಆರೋಪಿಗಳ ಶೋಧನೆಯಲ್ಲಿ ಪೊಲೀಸರು ತೊಡಗಿದ್ದಾರೆ.

ರೈತ ಶಿವರಾಮ್ ಮಾತನಾಡಿ, ಸುಮಾರು ವರ್ಷಗಳಿಂದ ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎಂದಿನಂತೆ ಹಸುಗಳನ್ನು ಮೇಯಿಸಲು ಜಮೀನಿಗೆ ಹೋದಾಗ ಸುಮಾರು 60 ರಿಂದ 70 ಸಾವಿರ ಬೆಲೆ ಬಾಳುವ ಹಸುವಿಗೆ ಸಿಡಿಮದ್ದು ಸಿಡಿದು ತುಂಬಾ ಗಾಯಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''