ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಶ್ರೀಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಹಾಗೂ ಕಾನಾಮಡಗು ದಾಸೋಹಿ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರ `ಸಂಕೀರ್ಣ ಬಳ್ಳಾರಿ'''' ಹಾಗೂ `ಇಷ್ಟಲಿಂಗ; ವಿವಿಧ ಆಯಾಮಗಳು'''' ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಇಷ್ಟಲಿಂಗ ಎಂಬುದು ವೀರಶೈವ ಲಿಂಗಾಯತರ ಕುರುಹು ಅಲ್ಲ; ಇಷ್ಟಲಿಂಗ ಎಲ್ಲರೂ ಧರಿಸಬಹುದಾದ ಸಾಮಾಜಿಕ ಪ್ರಜ್ಞೆಯ ಕುರುಹು ಎಂಬುದನ್ನು ನಿರೂಪಿಸುವ ಕೆಲಸ ಅನೇಕ ಲೇಖಕರು ಮಾಡಿದ್ದಾರೆ. ವೈಜ್ಞಾನಿಕ, ಸಾಮಾಜಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಇಷ್ಟಲಿಂಗವನ್ನು ಹೇಗೆ ನೋಡಬೇಕು ಎಂಬುದನ್ನು ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. `ಸಂಕೀರ್ಣ ಬಳ್ಳಾರಿ'''' ಕೃತಿಯಲ್ಲಿ ಬಳ್ಳಾರಿ ಕುರಿತಂತೆ ಅನೇಕ ಮಹತ್ವದ ಸಂಗತಿಗಳನ್ನು ಲೇಖಕರು ದಾಖಲೆ ಸಮೇತ ಕಟ್ಟಿಕೊಟ್ಟಿದ್ದು, ಈ ಕೃತಿ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ತುಡಿತ ಹೊಂದಿದೆ. ಈ ಕೃತಿಗೆ ಚಾರಿತ್ರಿಕ ಗೌರವವಿದೆ ಎಂದು ಅಭಿಪ್ರಾಯಪಟ್ಟರು.ಕನ್ನಡದ ಭಾಷಾ ಪ್ರಗತಿಗೆ ಜಾನ್ ಹ್ಯಾಂಡ್ಸ್ ಅವರು ನೀಡಿದ ಕೊಡುಗೆ, ವಿಶ್ವಮಟ್ಟದ ರಂಗಭೂಮಿ ಕಲಾವಿದ ಬಳ್ಳಾರಿ ರಾಘವ, ಗಮಕ ಕವಿ ಜೋಳದರಾಶಿ ದೊಡ್ಡನಗೌಡ, ವೈ. ನಾಗೇಶಶಾಸ್ತ್ರಿಗಳು, ವೈ. ಮಹಾಬಲೇಶ್ವರಪ್ಪ ಅವರು ಬಳ್ಳಾರಿಯ ಸಾಹಿತ್ಯ- ಸಾಂಸ್ಕೃತಿಕ ವಲಯಕ್ಕೆ ನೀಡಿದ ನೀಡಿದ ಬಹುದೊಡ್ಡ ಕೊಡುಗೆಗಳನ್ನು ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರು ಸ್ಮರಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಮಾತನಾಡಿದರು. ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ಮರಿದೇವಯ್ಯ ಅವರು ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಲಾಂಛನ ಬಿಡುಗಡೆಗೊಳಿಸಿದರು. ಕನ್ನಡ ಸಾಂಸ್ಕೃತಿಕ ಪರಿಷತ್ನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾನ್ ಹ್ಯಾಂಡ್ಸ್ನ ಮೂವರು ಪತ್ನಿಯರು ಬಳ್ಳಾರಿ ಬಿಸಲಿಗೆ ಸತ್ತರು!