ಗಜಾಪುರದಲ್ಲಿ ಸಂಭ್ರಮದ ಗಂಗಾಮಾತೆ ಉತ್ಸವ

KannadaprabhaNewsNetwork |  
Published : Jun 22, 2025, 11:47 PM IST
ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕಾರಹುಣ್ಣಿಮೆ ಪ್ರಯುಕ್ತ  ಗಂಗಾಮತಸ್ಥರು ಹೊಳೆಗಂಗಮ್ಮನ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.   | Kannada Prabha

ಸಾರಾಂಶ

ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ಕಾರಹುಣ್ಣಿಮೆ ಪ್ರಯುಕ್ತ ಹೊಳೆ ಗಂಗಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಹೊಳೆ ಗಂಗಮ್ಮನ ಹಬ್ಬ ಮಾಡಿ ಸಂಭ್ರಮಿಸಿದ ಮಹಿಳೆಯರು

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ಕಾರಹುಣ್ಣಿಮೆ ಪ್ರಯುಕ್ತ ಹೊಳೆ ಗಂಗಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಗ್ರಾಮದ ಶ್ರೀ ಗಂಗಾಮಾತೆ ದೇವಸ್ಥಾನದಿಂದ ಮಹಿಳೆಯರು ಆರತಿ ಹಿಡಿದು ಕುಂಭ ಹೊತ್ತು ಕೂಡ್ಲಿಗಿ ರಸ್ತೆಯ ಗಂಗಮಾತೆಯ ಪಾದಗಟ್ಟೆ ಇರುವ ಕಲ್ಲುಬಾವಿ ವರೆಗೂ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹೋಗಿ ಗಂಗಾಮಾತೆಗೆ ವಿಶೇಷ ಪೂಜೆ ಮಾಡಿ, ಗಂಗಮ್ಮನ ಉತ್ಸವ ಆಚರಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಗಜಾಪುರ ಸುತ್ತಮುತ್ತಲ ಭಾಗದಲ್ಲಿ ಹಾಗೂ ನಾಡಿನೆಲ್ಲೆಡೆ ಮಳೆ-ಬೆಳೆ ಚೆನ್ನಾಗಿ ಆಗಲಿ, ರೈತರ ಬದುಕು ಹಸನಾಗಲಿ ಎಂದು ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಶ್ರೀ ಗಂಗಾಮಾತೆಯ ಉತ್ಸವ ಆಚರಿಸುತ್ತಾರೆ. ಗಂಗಾಮಾತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಗಂಗಾಮಾತೆಗೆ ಮಹಿಳೆಯರು ಆರತಿ ಬೆಳಗಿದರು. ಇದಲ್ಲದೇ ಹೊಳೆಗಂಗಮ್ಮನ ಪೂಜೆ ನೆರವೇರಿಸಿದರು. ಗಂಗಮ್ಮ ಹೊಳೆಗೆ ಹೋಗಿ ಬಂದ ತಕ್ಷಣ ಗ್ರಾಮದ ಎಲ್ಲ ಸಮಾಜದ ಮಹಿಳೆಯರು ಶ್ರೀ ಗಂಗಾಮಾತೆ ದೇವಸ್ಥಾನಕ್ಕೆ ತೆರಳಿ, ಗಂಗಾಮಾತೆಗೆ ಎಡೆ ಹಿಡಿದು ಪೂಜೆ ಸಲ್ಲಿಸಿದರು.

ಗಜಾಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್‌ನ ಅಧ್ಯಕ್ಷ ಬಾರಿಕರ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಗಾಳೆಪ್ಪನವರ ಭೀಮಪ್ಪ, ಗಜಾಪುರ ಗ್ರಾಮದ ಮುಖಂಡರಾದ ನಾಣ್ಯಾಪುರ ಅಂಜಿನಪ್ಪ, ಬೆಳದೇರಿ ಸಿದ್ದಪ್ಪ, ಅಕ್ಕಾಪುರ ರಂಗಪ್ಪ, ಗಂಗಾಮತಸ್ಥ ಸಮಾಜದ ಮುಖಂಡರಾದ ಬಾರಿಕರ ನಾಗಪ್ಪ, ದೊಡ್ಡಗೂಳೆಪ್ಪ, ಎಡೆಹಳ್ಳಿ ಹಾಲೇಶಪ್ಪ, ಗಾಳೆಪ್ಪನವರ ಗೋವಿಂದಪ್ಪ, ಶ್ಯಾಮನೂರು ಹನುಮಂತಪ್ಪ, ಮಲ್ಲಾಪುರ ರಾಜಪ್ಪ, ಇಟ್ಟಿಗಿ ಕೊಟ್ರೇಶ್, ಬಾರಿಕರ ವಿಶ್ವನಾಥ, ಬಾರಿಕರ ಜೋಗಿ ಮಂಜುನಾಥ, ನಿಡುಗುರ್ತಿ ಕೊಟ್ರೇಶ್, ಗಾಳೆಪ್ಪನವರ ಕೊಟ್ರೇಶ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ