ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು, ಚೆನ್ನಾಗಿ ವಿದ್ಯೆ ಕಲಿತು, ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಹಳ್ಳಿಮೈಸೂರು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಗೆಳೆಯರ ಬಳಗದ ಪ್ರಭುಶಂಕರ್ ಸಲಹೆ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಹಳ್ಳಿಯಲ್ಲೇ ಸರ್ಕಾರಿ ಶಾಲೆಗಳು, ಶಾಲೆಗಳಲ್ಲಿ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕಗಳನ್ನು ಉಚಿತವಾಗಿ ನೀಡಿದರೆ, ದಾನಿಗಳು ನೋಟ್ ಪುಸ್ತಕ, ಪೆನ್ನು, ಬ್ಯಾಗ್ಗಳನ್ನು ದಾನವಾಗಿ ನೀಡುತ್ತಾರೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು, ಚೆನ್ನಾಗಿ ವಿದ್ಯೆ ಕಲಿತು, ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಹಳ್ಳಿಮೈಸೂರು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಗೆಳೆಯರ ಬಳಗದ ಪ್ರಭುಶಂಕರ್ ಸಲಹೆ ಹೇಳಿದರು.
ಪಟ್ಟಣದ ಗೆಳೆಯರ ಬಳಗದ ಸದಸ್ಯರು, ಪಾರ್ಕ್ ಹಿಂಭಾಗದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ, ಮಾತನಾಡಿದರು. ಹಿಂದೆ ಶಿಕ್ಷಣ ಪಡೆದುಕೊಳ್ಳಲು ತುಂಬಾ ಕಷ್ಟ ಇತ್ತು, ಬಡತನ, ಪುಸ್ತಕ, ಪೆನ್ನು ತೆಗೆದುಕೊಳ್ಳಲು ಹಣ ಇರುತ್ತಿರಲಿಲ್ಲ, ಊಟಕ್ಕೇ ಕಷ್ಟ ಪಡುವ ಪರಿಸ್ಥಿತಿಯೂ ಇತ್ತು ಜತೆಗೆ ಹತ್ತಾರು ಕಿ.ಮೀ. ನಡೆದು ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿಯಬೇಕಿತ್ತು. ಇತ್ತೀಚಿನ ವರ್ಷಗಳಲ್ಲಿ ಹಳ್ಳಿಯಲ್ಲೇ ಸರ್ಕಾರಿ ಶಾಲೆಗಳು, ಶಾಲೆಗಳಲ್ಲಿ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕಗಳನ್ನು ಉಚಿತವಾಗಿ ನೀಡಿದರೆ, ದಾನಿಗಳು ನೋಟ್ ಪುಸ್ತಕ, ಪೆನ್ನು, ಬ್ಯಾಗ್ಗಳನ್ನು ದಾನವಾಗಿ ನೀಡುತ್ತಾರೆ. ಪಟ್ಟಣದ ಗೆಳೆಯರ ಬಳಗದ ಸದಸ್ಯರು ೧೨೦ ವಿದ್ಯಾರ್ಥಿಗಳಿಗೆ ೬೦೦ ಜಂಬೋ ನೋಟ್ ಪುಸ್ತಕ ಹಾಗೂ ಪೆನ್ಗಳನ್ನು ಉಚಿತವಾಗಿ ನೀಡಿದರು.
ಮುಖ್ಯ ಶಿಕ್ಷಕಿ ಸವಿತಾ, ಶಿಕ್ಷಕಿ ಕವಿತಾ, ಗೆಳೆಯರ ಬಳಗದ ಜೈಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್, ಉದ್ಯಮಿ ಕೃಷ್ಣಕಾಂತ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.