ತಮಿಳು ಮಕ್ಕಳಿಂದ ಕುಮಿ ನೃತ್ಯ । ವಿಜೇತರಿಗೆ ಬಹುಮಾನ
ಸುಗ್ಗಿಯ ಉತ್ಸವದ ಸಾಂಸ್ಕೃತಿಕ ಪರಂಪರೆ ಮತ್ತು ಮಹತ್ವವನ್ನು ಎತ್ತಿ ತೋರಿಸುವ ಕಾರ್ಯಕ್ರಮವು ಗುರುವಾರ ದಿನವಿಡೀ ನಡೆಯಿತು. ಆಚರಣೆಯು ಸಾಂಪ್ರದಾಯಿಕ ಪೂಜೆಯೊಂದಿಗೆ ಪ್ರಾರಂಭವಾಯಿತು. ಇದರ ನಂತರ ಎಲ್ಲಾ ತಮಿಳು ವಿದ್ಯಾರ್ಥಿಗಳಿಂದ ಹಬ್ಬವನ್ನು ಸಂಕೇತಿಸುವ ರೋಮಾಂಚಕ ಕುಮಿ ನೃತ್ಯ ನಡೆಯಿತು. ವಿದ್ಯಾರ್ಥಿಗಳು ವೈವಿಧ್ಯಮಯ ವಿನ್ಯಾಸದ ರಂಗೋಲಿ ಹಾಕಿದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಪೊಂಗಲ್ ಭಾರತದಾದ್ಯಂತ ಸುಗ್ಗಿಯ ಹಬ್ಬಗಳ ಮಹತ್ವ ಒತ್ತಿ ಹೇಳುತ್ತದೆ. ಇದು ರಾಷ್ಟ್ರದ ಆರ್ಥಿಕತೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಬೆನ್ನೆಲುಬಾಗಿ ಕೃಷಿಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ದಿನವು ಉತ್ತರಾಯಣ ಅಂದರೆ ಸೂರ್ಯನ ಉತ್ತರಾಭಿಮುಖ ಪ್ರಯಾಣದ ಆರಂಭ ಸೂಚಿಸುತ್ತದೆ’ ಎಂದು ಹೇಳಿದರು.ಇದರ ನಂತರ ವಿದ್ಯಾರ್ಥಿ ಸಂಯೋಜಕರಾದ ಮೆರಿಕ್ ಮತ್ತು ಜೆರ್ಲಿನ್ ಅವರಿಂದ ಪೊಂಗಲ್ ಮಹತ್ವದ ಕುರಿತು ಒಳನೋಟದ ಭಾಷಣ ನಡೆಯಿತು. ದಿನವು ತಮಿಳುನಾಡಿನ ಶ್ರೀಮಂತ ಪರಂಪರೆ ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಒಂದು ಶ್ರೇಣಿಯನ್ನು ಒಳಗೊಂಡಿತ್ತು. ಇದರಲ್ಲಿ ಸಿಲಂಬಮ್ ಪ್ರದರ್ಶನ, ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ಮತ್ತು ಭಾವಪೂರ್ಣ ಸಂಗೀತ ನಿರೂಪಣೆಗಳು ಸೇರಿದ್ದವು. ಉರಿಯಡಿ ಮತ್ತು ಟಗರಿನ ಕಾಳಗದಂತಹ ಸಾಂಪ್ರದಾಯಿಕ ಆಟಗಳೊಂದಿಗೆ ಹಬ್ಬವು ಮುಂದುವರಿಯಿತು. ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಉಂಟು ಮಾಡಿತು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.