ಜಿಲ್ಲೆಯಲ್ಲಿ ಇನ್ನೂ ಆರಂಭವಾಗದ ಮೇವು ಬ್ಯಾಂಕ್

KannadaprabhaNewsNetwork |  
Published : May 13, 2024, 12:07 AM IST
೧೨ಕೆಎಲ್‌ಆರ್-೩ಮೇವಿನ ಚಿತ್ರ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಹೈನೋದ್ಯಮ ನಂಬಿಯೇ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಜಿಲ್ಲೆಯಲ್ಲಿ ೨.೩೬ ಲಕ್ಷ ರಾಸುಗಳಿದ್ದು, ಹಲವೆಡೆ ಮೇವಿನ ಕೊರತೆಯ ದೂರುಗಳು ಬರುತ್ತಿವೆ. ಮೇವು ಬ್ಯಾಂಕ್ ತೆಗೆಯುವಂತೆ ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಇನ್ನೂ ಮೇವಿನ ಬ್ಯಾಂಕ್ ಆರಂಭಿಸಿಲ್ಲ. ಜಿಲ್ಲೆಯಲ್ಲಿ ಹೈನೋದ್ಯಮ ನಂಬಿಯೇ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಜಿಲ್ಲೆಯಲ್ಲಿ ೨.೩೬ ಲಕ್ಷ ರಾಸುಗಳಿದ್ದು, ಹಲವೆಡೆ ಮೇವಿನ ಕೊರತೆಯ ದೂರುಗಳು ಬರುತ್ತಿವೆ. ಮೇವು ಬ್ಯಾಂಕ್ ತೆಗೆಯುವಂತೆ ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ. ಮೇವು ಬ್ಯಾಂಕ್‌ಗೆ ಟೆಂಡರ್‌

ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಜಿ.ಟಿ.ರಾಮಯ್ಯ, ‘ಜಿಲ್ಲೆಯ ಎರಡು ಕಡೆ ಮೇವು ಬ್ಯಾಂಕ್ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ. ಈಗಾಗಲೇ ರೈತರಿಗೆ ಮೇವಿನ ಕಿಟ್ ವಿತರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವು ಸಿಗದೆ ಯಾವುದೇ ಜಾನುವಾರುಗಳು ಮೃತಪಟ್ಟಿಲ್ಲ. ಯಾವುದೇ ದೂರುಗಳೂ ಬಂದಿಲ್ಲ’ ಎಂದರು. ಕೆಜಿಎಫ್‌ನ ಬೇತಮಂಗಲ ಹಾಗೂ ಮುಳಬಾಗಿಲಿನ ಆರ್‌ಎಂಸಿ ಯಾರ್ಡ್‌ನಲ್ಲಿ ಮೇವು ಬ್ಯಾಂಕ್ ತೆಗೆಯಲಾಗುವುದು. ಒಂದೊಂದು ಮೇವು ಬ್ಯಾಂಕ್‌ನಲ್ಲಿ ೨೦೦ ಟನ್ ಮೇವು ಸಂಗ್ರಹಿಸಬಹುದು. ೧೩ ಸಾವಿರ ಮೇವಿನ ಕಿಟ್ ವಿತರಿಸಲಾಗಿತ್ತು. ಈಚೆಗೆ ೧೨ ಸಾವಿರ ಕಿಟ್ ನೀಡಲಾಗಿದೆ. ಪಶು ಆಸ್ಪತ್ರೆಗಳ ಮೂಲಕ ವಿತರಿಸಲಾಗಿದೆ. ಈಗಾಗಲೇ ೨.೨೨ ಲಕ್ಷ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕಿಸಲಾಗಿದೆ’ ಎಂದರು.

ನಂದಿನಿ ಆಹಾರ ದರ ಹೆಚ್ಚಳ

ಪಶು ನಂದಿನಿ ಆಹಾರದ ದರವೂ ಏರಿಕೆ ಆಗಿರುವುದು ಹೈನುಗಾರರಿಗೆ ಆಘಾತ ಉಂಟು ಮಾಡಿದೆ. ಜೊತೆಗೆ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುವ ೫ ಪ್ರೋತ್ಸಾಹ ಧನವೂ ಏಳು ತಿಂಗಳಿಂದ ರೈತರ ಕೈಸೇರಿಲ್ಲ. ಈಚೆಗೆ ಜಿಲ್ಲೆಯ ಉಷ್ಣಾಂಶ ೪೪ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಆಗಿತ್ತು. ಜೊತೆಗೆ ಬಿಸಿ ಗಾಳಿಯಿಂದ ಸಮಸ್ಯೆ ಎದುರಾಗಿತ್ತು. ಮೇಯುವುದಕ್ಕಾಗಿ ಜಮೀನು, ಗುಡ್ಡ, ಬಯಲಿನಲ್ಲಿ ಸುತ್ತಾಡುವ ಜಾನುವಾರುಗಳಿಗೂ ಬಿಸಿಲಿನ ಝಳ ತಟ್ಟಿತ್ತು. ಕುರಿ ಮೇಕೆಗಳಿಗೂ ನೀರಿನ ಕೊರತೆ ಎದುರಾಗಿತ್ತು. ನರೇಗಾದಿಂದ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಗಳು ಖಾಲಿ ಬಿದ್ದಿದ್ದವು. ಜೊತೆಗೆ ಕೆರೆ ಕಟ್ಟೆಗಳು ಕೂಡ ಒಣಗುವ ಸ್ಥಿತಿ ತಲುಪಿದ್ದವು. ಮೂರು ದಿನಗಳಿಂದ ಮಳೆ ಬರುತ್ತಿರುವುದು ಜನತೆಗೆ ತುಸು ನೆಮ್ಮದಿ ಮೂಡಿಸಿದೆ.

ಕೋಟ್..................ಜಿಲ್ಲೆಯಲ್ಲಿ ಎಲ್ಲೂ ಜಾನುವಾರುಗಳ ಮೇವಿಗೆ ಸಮಸ್ಯೆ ಆಗಿಲ್ಲ. ಯಾವುದೇ ರೀತಿ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.- ಜಿ.ಟಿ.ರಾಮಯ್ಯ, ಉಪನಿರ್ದೇಶಕ, ಪಶು ಸಂಗೋಪನೆ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ