ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಇನ್ನೂ ಮೇವಿನ ಬ್ಯಾಂಕ್ ಆರಂಭಿಸಿಲ್ಲ. ಜಿಲ್ಲೆಯಲ್ಲಿ ಹೈನೋದ್ಯಮ ನಂಬಿಯೇ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಜಿಲ್ಲೆಯಲ್ಲಿ ೨.೩೬ ಲಕ್ಷ ರಾಸುಗಳಿದ್ದು, ಹಲವೆಡೆ ಮೇವಿನ ಕೊರತೆಯ ದೂರುಗಳು ಬರುತ್ತಿವೆ. ಮೇವು ಬ್ಯಾಂಕ್ ತೆಗೆಯುವಂತೆ ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ. ಮೇವು ಬ್ಯಾಂಕ್ಗೆ ಟೆಂಡರ್
ನಂದಿನಿ ಆಹಾರ ದರ ಹೆಚ್ಚಳ
ಪಶು ನಂದಿನಿ ಆಹಾರದ ದರವೂ ಏರಿಕೆ ಆಗಿರುವುದು ಹೈನುಗಾರರಿಗೆ ಆಘಾತ ಉಂಟು ಮಾಡಿದೆ. ಜೊತೆಗೆ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುವ ೫ ಪ್ರೋತ್ಸಾಹ ಧನವೂ ಏಳು ತಿಂಗಳಿಂದ ರೈತರ ಕೈಸೇರಿಲ್ಲ. ಈಚೆಗೆ ಜಿಲ್ಲೆಯ ಉಷ್ಣಾಂಶ ೪೪ ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆ ಆಗಿತ್ತು. ಜೊತೆಗೆ ಬಿಸಿ ಗಾಳಿಯಿಂದ ಸಮಸ್ಯೆ ಎದುರಾಗಿತ್ತು. ಮೇಯುವುದಕ್ಕಾಗಿ ಜಮೀನು, ಗುಡ್ಡ, ಬಯಲಿನಲ್ಲಿ ಸುತ್ತಾಡುವ ಜಾನುವಾರುಗಳಿಗೂ ಬಿಸಿಲಿನ ಝಳ ತಟ್ಟಿತ್ತು. ಕುರಿ ಮೇಕೆಗಳಿಗೂ ನೀರಿನ ಕೊರತೆ ಎದುರಾಗಿತ್ತು. ನರೇಗಾದಿಂದ ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಗಳು ಖಾಲಿ ಬಿದ್ದಿದ್ದವು. ಜೊತೆಗೆ ಕೆರೆ ಕಟ್ಟೆಗಳು ಕೂಡ ಒಣಗುವ ಸ್ಥಿತಿ ತಲುಪಿದ್ದವು. ಮೂರು ದಿನಗಳಿಂದ ಮಳೆ ಬರುತ್ತಿರುವುದು ಜನತೆಗೆ ತುಸು ನೆಮ್ಮದಿ ಮೂಡಿಸಿದೆ.ಕೋಟ್..................ಜಿಲ್ಲೆಯಲ್ಲಿ ಎಲ್ಲೂ ಜಾನುವಾರುಗಳ ಮೇವಿಗೆ ಸಮಸ್ಯೆ ಆಗಿಲ್ಲ. ಯಾವುದೇ ರೀತಿ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.- ಜಿ.ಟಿ.ರಾಮಯ್ಯ, ಉಪನಿರ್ದೇಶಕ, ಪಶು ಸಂಗೋಪನೆ ಇಲಾಖೆ.