ಎಲ್ಲ ಜಾತಿ ವರ್ಗ, ಇಲಾಖೆಗಳನ್ನು ಸಮಾನವಾಗಿ ಕಂಡಂತಹ ಉತ್ತಮವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಟ್ಟಿದ್ದಾರೆ. ₹30 ಸಾವಿರ ಕೋಟಿಯಷ್ಟು ಹೆಚ್ಚುವರಿಯಾದ ಬಜೆಟ್ ಇದಾಗಿರುವುದರಿಂದ ಎಲ್ಲ ಮೂಲಸೌಕರ್ಯಗಳಿಗೆ ಹಣದ ಕೊರತೆ ಆಗುವುದಿಲ್ಲ. ಬಜೆಟ್ನಲ್ಲಿ ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡಿರುವುದು ವಿಶೇಷವಾಗಿದೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.
ಸಾಗರ: ಎಲ್ಲ ಜಾತಿ ವರ್ಗ, ಇಲಾಖೆಗಳನ್ನು ಸಮಾನವಾಗಿ ಕಂಡಂತಹ ಉತ್ತಮವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಟ್ಟಿದ್ದಾರೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ₹30 ಸಾವಿರ ಕೋಟಿಯಷ್ಟು ಹೆಚ್ಚುವರಿಯಾದ ಬಜೆಟ್ ಇದಾಗಿರುವುದರಿಂದ ಎಲ್ಲ ಮೂಲಸೌಕರ್ಯಗಳಿಗೆ ಹಣದ ಕೊರತೆ ಆಗುವುದಿಲ್ಲ. ಬಜೆಟ್ನಲ್ಲಿ ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡಿರುವುದು ವಿಶೇಷವಾಗಿದೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಸ್ಮಾರಕಕ್ಕೆ ಹಣ ಮೀಸಲಿಟ್ಟಿರುವುದು ಸಂತಸ ತಂದಿದೆ ಎಂದರು.
ಬಿಜೆಪಿ ನಡೆ ಖಂಡನೀಯ:
ಮುಖ್ಯಮಂತ್ರಿ ಅವರು ಬಜೆಟ್ ಮಂಡಿಸುವಾಗ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿರುವುದು ಖಂಡನೀಯ. ಬಜೆಟ್ ಮಂಡಿಸುವ ಸಂದರ್ಭ ಎಲ್ಲರೂ ಸುಮ್ಮನೆ ಕೇಳಬೇಕು. ಅನಂತರ ಈ ಕುರಿತಂತೆ ಚರ್ಚೆ, ವಿಮರ್ಶೆ ನಡೆಸಲು ಅವಕಾಶವಿದೆ. ಅದು ಬಿಟ್ಟು ಸಭಾತ್ಯಾಗ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹದಲ್ಲ ಎಂದು ಬೇಳೂರು ಹೇಳಿದರು.
- - - -16SAGARA: ಗೋಪಾಲಕೃಷ್ಣ ಬೇಳೂರು, ಶಾಸಕ, ಸಾಗರ ಕ್ಷೇತ್ರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.