ಆಲಮೇಲದಲ್ಲಿ ಅದ್ಧೂರಿ ಕಾರಹುಣ್ಣಿಮೆ ಆಚರಣೆ

KannadaprabhaNewsNetwork |  
Published : Jun 13, 2025, 03:07 AM IST
ಕಾರ ಹುಣ್ಣಿಮೆ | Kannada Prabha

ಸಾರಾಂಶ

ಆಲಮೇಲ: ಪಟ್ಟಣದಲ್ಲಿ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಉತ್ತಮ ಮುಂಗಾರು ಮಳೆ ಬೆಳೆಗಾಗಿ ರೈತರು ಆಚರಿಸುವ ಮುಂಗಾರು ಪ್ರಾರಂಭದ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ. ಕಾರಹುಣ್ಣಿಮೆ ಹಬ್ಬವನ್ನು ಸಾಂಸ್ಕೃತಿಕ ನಗರ ಆಲಮೇಲ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಂಪ್ರದಾಯಿಕವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಆಲಮೇಲ: ಪಟ್ಟಣದಲ್ಲಿ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಉತ್ತಮ ಮುಂಗಾರು ಮಳೆ ಬೆಳೆಗಾಗಿ ರೈತರು ಆಚರಿಸುವ ಮುಂಗಾರು ಪ್ರಾರಂಭದ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ. ಕಾರಹುಣ್ಣಿಮೆ ಹಬ್ಬವನ್ನು ಸಾಂಸ್ಕೃತಿಕ ನಗರ ಆಲಮೇಲ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಂಪ್ರದಾಯಿಕವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಪಟ್ಟಣದ ಮನೆತನ­ಗಳಾದ ದೇಶಮುಖ ಮತ್ತು ದೇಶಪಾಂಡೆ ಅವರ ಬಂಡಿಗಳು ಕರಿ ಹರಿದವು. ಹಿಂದು ಮತ್ತು ಮುಸ್ಲಿಂರು ಸೇರಿ ಈ ಹಬ್ಬವನ್ನು ಆಚರಿಸಿ ಭಾವೈಕ್ಯತೆಯನ್ನು ಮೆರೆಯುತ್ತಾರೆ.

ಎತ್ತುಗಳ ಬಂಡಿ ಓಡಿಸುವುದರ ಮೂಲಕ ಕರಿ ಹರಿಯುವ ಪದ್ಧತಿ ಶತಮಾನಗಳ ಕಾಲದಿಂದ ನಡೆದು ಬಂದಿದೆ. ಸಂಜೆ ಬಂಡೆಗಳ ಓಟದ ಸ್ಪರ್ಧೆ ನಡೆಯಿತು. ದೇಶಮುಖ ಮತ್ತು ದೇಶಪಾಂಡೆ ಅವರ ಬಂಡಿಗಳು ಬರುವುದಕ್ಕಿಂತ ಮುಂಚೆ ಈ ಬಾರಿ 6 ಚಿಕ್ಕ ಬಂಡಿಗಳ ಸ್ಪರ್ಧೆ ನಡೆಯಿತು. ಇದನ್ನು ನೋಡಲು ಜನಜಂಗುಳಿಯೇ ಸೇರಿತ್ತು. ಪಟ್ಟಣದ ಆರಾಧ್ಯದೈವ ಹಜರತ್ ಪೀರ ಗಾಲೀಬಸಾಹೇಬ ದರ್ಗಾ ಆವರಣದಲ್ಲಿ ಬಂಡಿಗಳನ್ನು ಓಡಿಸುವ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು, ಮಕ್ಕಳು ಸೇರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''